ಉಕ್ಕಡಗಾತ್ರಿ : ಅನ್ನ ದಾಸೋಹ ಮಹಾಮಂಟಪ ನಿರ್ಮಾಣಕ್ಕೆ ಚಾಲನೆ

ಉಕ್ಕಡಗಾತ್ರಿ : ಅನ್ನ ದಾಸೋಹ ಮಹಾಮಂಟಪ ನಿರ್ಮಾಣಕ್ಕೆ ಚಾಲನೆ

ಮಲೇಬೆನ್ನೂರು, ನ.19- ಸುಕ್ಷೇತ್ರ ಉಕ್ಕಡಗಾತ್ರಿಯ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಗದ್ದುಗೆಯ ದೇವಸ್ಥಾನದ ಬಳಿ ತುಂಗಭದ್ರಾ ನದಿ ದಡದಲ್ಲಿ 5 ಅಡಿ ಎತ್ತರದ ಗಣೇಶಮೂರ್ತಿ ಪ್ರತಿಷ್ಠಾಪನೆಯು ಭಾನುವಾರ ಪೂಜಾ ವಿಧಾನಗಳೊಂದಿಗೆ ನಡೆಯಿತು.

ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ನೂತನ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿಸಿದರು. ಇದೇ ವೇಳೆ ಅನ್ನ ದಾಸೋಹದ ನೂತನ ಕಟ್ಟಡ ನಿರ್ಮಾಣಕ್ಕೂ ಶ್ರೀಗಳು ಭೂಮಿ ಪೂಜೆ ಮಾಡಿ, ಕಾಮಗಾರಿಗೆ ಚಾಲನೆ ನೀಡಿದರು. ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ಸೇರಿದಂತೆ ಎಲ್ಲಾ ಟ್ರಸ್ಟಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!