ಲೈಂಗಿಕ ಕಿರುಕುಳ: ಎಐವೈಎಫ್ ಪ್ರತಿಭಟನೆ

ಲೈಂಗಿಕ ಕಿರುಕುಳ: ಎಐವೈಎಫ್ ಪ್ರತಿಭಟನೆ

ದಾವಣಗೆರೆ, ಜೂ. 1- ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಸಂಸದ ಬ್ರಿಜ್ ಭೂಷಣ್ ಶರಣ್ ಮೇಲೆ ಕ್ರಮ  ತೆಗೆದುಕೊಳ್ಳುವಂತೆ ಆಗ್ರಹಿಸಿ ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾ ಸಮಿತಿ  ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಸಮಿತಿಯ ರಾಜ್ಯ ಉಪಾಧ್ಯಕ್ಷ   ಆವರಗೆರೆ ವಾಸು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ,     ದೇಶಕ್ಕೆ ಪದಕವನ್ನು ತಂದು ಕೊಟ್ಟ ಕ್ರೀಡಾಪಟುಗಳ ವಿಚಾರದಲ್ಲಿಯೇ ಈ ರೀತಿ ನಿರ್ಲಕ್ಷ್ಯ ವಹಿಸಿದರೆ, ಇನ್ನು ಸಾಮಾನ್ಯರ ಗತಿ ಏನು ? `ಬೇಟಿ ಬಚಾವೋ’ ಎಂಬುದು ಕೇವಲ ಬಾಯಿ ಮಾತಾಗಬಾರದು. ದೇಶದ ಹೆಣ್ಣು ಮಕ್ಕಳು ಲೈಂಗಿಕ ಕಿರುಕುಳದ ಆರೋಪ ಮಾಡಿ ದೆಹಲಿಯ ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ, ಕೇಂದ್ರ ಸರ್ಕಾರ ಕಣ್ಣು-ಕಿವಿ ಮುಚ್ಚಿಕುಳಿತುಕೊಳ್ಳುವ ಮೂಲಕ ಹೆಣ್ಣು ಮಕ್ಕಳನ್ನು ಅವಮಾನಿಸುತ್ತಿದೆ ಎಂದು ದೂರಿದರು.

ಆರೋಪಿ ಬ್ರಿಜ್ ಭೂಷಣ್ ತಮ್ಮದೇ ಪಕ್ಷದ ಸಂಸದನಾಗಿರುವುದರಿಂದ,  ಕ್ರಮ ಕೈಗೊಳ್ಳಲು ಮುಂದಾಗದಿರುವ   ಕೇಂದ್ರದ ನಡೆ ಖಂಡನೀಯ. ಕೂಡಲೇ  ಫೆಡರೇಷನ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ,   ತನಿಖೆ ನಡೆಸಿ ಕ್ರಮಕ್ಕೆ ಮುಂದಾಗಬೇಕು ಎಂದು  ವಾಸು ಒತ್ತಾಯಿಸಿದರು

ಈ ಸಂದರ್ಭದಲ್ಲಿ  ರಾಜು ಕೆರೆಯಾಗಳಹಳ್ಳಿ,   ಎ. ತಿಪ್ಪೇಶ್, ಗುರುಮೂರ್ತಿ ಸಿ., ಫಜುಲ್, ಹನುಮಂತಪ್ಪ ನಿಟುವಳ್ಳಿ, ಎಕೆ ಹಟ್ಟಿ ಜೀವನ್ ನಿಟ್ಟುವಳ್ಳಿ, ನಿಟುವಳ್ಳಿ ರಾಜು, ಅರುಣಾ, ನಿಂಗರಾಜು, ಹನುಮಂತಪ್ಪ ಯರವನಾಗತಿಹಳ್ಳಿ ಉಪಸ್ಥಿತರಿದ್ದರು.

error: Content is protected !!