ಶಿಕ್ಷಣ ವ್ಯಕ್ತಿತ್ವ ರೂಪಿಸುತ್ತದೆ

ಶಿಕ್ಷಣ ವ್ಯಕ್ತಿತ್ವ ರೂಪಿಸುತ್ತದೆ

ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜು

ದಾವಣಗೆರೆ, ಮೇ 23- ಶಿಕ್ಷಣವು ವ್ಯಕ್ತಿತ್ವವನ್ನು ರೂಪಿಸು ತ್ತದೆ, ಮನಸ್ಸನ್ನು ಬಲಪಡಿಸುತ್ತದೆ, ಜ್ಞಾನ ಹೆಚ್ಚಿಸುತ್ತದೆ ಮತ್ತು ನಮ್ಮನ್ನು ಸ್ವತಂತ್ರಗೊಳಿಸುತ್ತದೆ. ಶಿಕ್ಷಣವು ಅಜ್ಞಾನವನ್ನು ಹೋಗಲಾಡಿಸುತ್ತದೆ. ಶಿಕ್ಷಣವು ನಮ್ಮೆಲ್ಲರ ಉಜ್ವಲ ಭವಿಷ್ಯಕ್ಕಾಗಿ ಅತ್ಯಗತ್ಯ ಸಾಧನವಾಗಿದೆ. ಶಿಕ್ಷಣದ ಸಾಧನವನ್ನು ಬಳಸಿಕೊಂಡು ನಾವು ಜೀವನದಲ್ಲಿ ಏನಾದರೂ ಒಳ್ಳೆಯದನ್ನು ಸಾಧಿಸಬಹುದು ಎಂದು ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜು ತಿಳಿಸಿದರು. 

ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಚೇತನಾ ಗ್ಲೋಬಲ್ ಶಾಲೆಯ ವಿದ್ಯಾರ್ಥಿ ಕು.ಚಾಣುಕ್ಯ ರವರನ್ನು ಅಭಿನಂದಿಸಿ ಮಾತನಾಡಿದರು. 

ಶಿಕ್ಷಣವು ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊರತರುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಹೀಗಾಗಿ ಎಲ್ಲಾ ಪೋಷಕರು ಸಹ ಮಕ್ಕಳನ್ನೇ ಆಸ್ತಿ ಮಾಡಬೇಕು ಎಂದು ಆನಂದರಾಜು ಸಲಹೆ ನೀಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಶೇ. 97 ರಷ್ಟು ಅಂಕ ಪಡೆದ ಮತ್ತಿ ನಾಗರಾಜ್ ಹಾಗೂ ಶ್ರೀಮತಿ ವೀರವೇಣಿ ದಂಪತಿ ಪುತ್ರ ಚಾಣಕ್ಯನನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಮೋನಿಕಾ ಗಿಫ್ಟ್‌ ಸೆಂಟರ್‌ನ ಮಾಲೀಕರಾದ ಅನಿಲ್‌ಕುಮಾರ್ ಮುಂಡಾಸ್, ನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಬಿಜೆಪಿ ಹಿರಿಯ ಮುಖಂಡರಾದ ಜಿ.ಕೃಷ್ಣಪ್ಪ, ಟಿಂಕರ್ ಮಂಜಣ್ಣ, ಎಸ್. ನಾಗರಾಜ್ ಇನ್ನು ಮುಂತಾದರಿದ್ದರು.

error: Content is protected !!