ಬಿಜೆಪಿ ಸರ್ಕಾರ ನೊಂದವರ ಪರ ಪ್ರಾಮಾಣಿಕ ಕೆಲಸ ಮಾಡಿದೆ

ಬಿಜೆಪಿ ಸರ್ಕಾರ ನೊಂದವರ ಪರ ಪ್ರಾಮಾಣಿಕ ಕೆಲಸ ಮಾಡಿದೆ

ಕೊಟ್ಟೂರಿನ ಪ್ರಚಾರದಲ್ಲಿ ಬಸವನಗೌಡ ಪಾಟೀಲ್‌ ಯತ್ನಾಳ್

ಕೊಟ್ಟೂರು, ಮೇ 1- ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ  ಹೆಚ್ಚಿಸಿ ದಲಿತರ ಪರ, ನೊಂದವರ ಪರ ಪ್ರಾಮಾಣಿಕ ಕೆಲಸ ಮಾಡಿದೆ ಎಂದು  ಬಸವನಗೌಡ ಪಾಟೀಲ್‌ ಯತ್ನಾಳ್ ಹೇಳಿದರು.

ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಬಿಜೆಪಿ ಪರ ಅಬ್ಬರದ ಪ್ರಚಾರ ನಡೆಸಿದ ಬಸವನಗೌಡ ಪಾಟೀಲ್  ಯತ್ನಾಳ್ ಅವರು  ಬಾಲಾಜಿ ಕನ್ವೆನ್ಷನ್  ಹಾಲ್‌ನಲ್ಲಿ ಮೊನ್ನೆ ನಡೆದ ಸಭೆಯನ್ನು ಉದ್ಧೇಶಿಸಿ  ಅವರು ಮಾತನಾಡಿದರು. 

ಮುಂದಿನ ದಿನಗಳಲ್ಲಿ ಕುರುಬ ಸಮುದಾಯಕ್ಕೆ  ಎಸ್ಟಿ ಮೀಸಲಾತಿ ನೀಡಲು ಯೋಜನೆ ರೂಪಿಸಿದ್ದೇವೆ  ಮತ್ತು ಎಲ್ಲಾ  ಸೌಲಭ್ಯ ವಂಚಿತ ಸಮುದಾಯಗಳನ್ನು ಗುರುತಿಸಿ, ಸಾಮಾಜಿಕ ನ್ಯಾಯ ನೀಡುವುದೇ  ಬಿಜೆಪಿ ಸರ್ಕಾರದ ನಿಲುವು ಎಂದು ಹೇಳಿದರು.

ಸಂಸದ ಜಿ.ದೇವೇಂದ್ರಪ್ಪ ಮಾತನಾಡಿ,  ಬಿಜೆಪಿಯಲ್ಲಿ ನಾಯಕರಷ್ಟೇ ಬೆಳೆಯುತ್ತಿಲ್ಲ,  ಒಬ್ಬ ಸಾಮಾನ್ಯ ಕಾರ್ಯಕರ್ತನನ್ನೂ ಗುರುತಿಸಿ ಅವರನ್ನು ನಾಯಕರಾಗಿ ಬೆಳೆಯಲು ಅವಕಾಶ ಮಾಡಿಕೊಡುತ್ತಿದೆ ಎಂದು ತಿಳಿಸಿದರು.

ಕೊಟ್ಟೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿ ಎಂದು ಬಿಜೆಪಿ ಅಭ್ಯರ್ಥಿ ಬಿ. ರಾಮಣ್ಣ ಹೇಳಿದರು.

ಈ ಸಂದರ್ಭದಲ್ಲಿ  ಬಿಜೆಪಿ ಮುಖಂಡರಾದ ತಿಂದಪ್ಪ, ಶಿವಪ್ರಕಾಶ್, ಬಿಜೆಪಿ ಮಂಡಲ ಅಧ್ಯಕ್ಷ ವೀರೇಶ್ ಸ್ವಾಮಿ,  ಬಿಜೆಪಿ ನಗರ ಘಟಕದ
ಅಧ್ಯಕ್ಷ ಭರಮನಗೌಡ, ಸಿದ್ದಯ್ಯ, ಪ.ಪಂ ಸದಸ್ಯರು, ಈಶ್ವರ್ ಗೌಡ್ರು, ಪಪಂ ಸದಸ್ಯರು,  ಡಾ. ರಾಕೇಶ್  ಮಂಡಲ ಪ್ರಧಾನ ಕಾರ್ಯದರ್ಶಿ, ರವಿ ಭಂಡಾರಿ, ರೈತ ಮೋರ್ಚಾ ಅಧ್ಯಕ್ಷ, ಭರಮಪ್ಪ ರೆಡ್ಡಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಹೋಟೆಲ್ ರಾಜಣ್ಣ, ಬಿಜೆಪಿ ಮುಖಂಡರು, ಕೆಂಗರಾಜ್, ವಿಕಾಸ್,
ಮೀಡಿಯಾ ಸಂಚಾಲಕರು, ಎಂ ಚಂದ್ರಶೇಖರ್, ಮತ್ತಿತರರು ಇದ್ದರು.

error: Content is protected !!