Editor

ವಿಕಾಸ್ ಮೆಳ್ಳೇಕಟ್ಟೆ

ವಿಕಾಸ್ ಮೆಳ್ಳೇಕಟ್ಟೆ - Janathavani

ವಿಕಾಸ್ ಷಡಾಕ್ಷರಪ್ಪ ಮೆಳ್ಳೇಕಟ್ಟೆ ಜನಿಸಿದ್ದು ಮಾರ್ಚ್ 8, 1973ರಂದು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವಿಕಾಸ್, ತಮ್ಮ ತಂದೆ ಹೆಚ್.ಎನ್. ಷಡಾಕ್ಷರಪ್ಪ ಅವರಿಂದ ಪತ್ರಿಕೋದ್ಯಮದ ದೀಕ್ಷೆ ಪಡೆದಿದ್ದಾರೆ.

ತಂದೆ ಷಡಾಕ್ಷರಪ್ಪ ಅವರ ಸ್ಫೂರ್ತಿಯಿಂದ ಬಾಲ್ಯದಿಂದಲೂ ಸಾಹಿತ್ಯಾಭಿರುಚಿ ಬೆಳೆಸಿಕೊಂಡವರು ವಿಕಾಸ್. ಅದೇ ಪ್ರವೃತ್ತಿ ಮುಂದೆ ಪತ್ರಿಕೋದ್ಯಮದಲ್ಲಿ ವೃತ್ತಿಯಾಗಿ ಪರಿಣಮಿಸಿತು.ಪಿ.ಯು. ಹಂತದಲ್ಲಿ ವಿಜ್ಞಾನ ಇವರ ನೆಚ್ಚಿನ ವಿಷಯವಾಗಿತ್ತು. ಕಂಪ್ಯೂಟರ್ ಸೈನ್ಸ್ ಕಡೆ ಆಸಕ್ತಿ ಹೊಂದಿದ್ದ ವಿಕಾಸ್, ಐ.ಟಿ. ಕ್ಷೇತ್ರಕ್ಕೆ ಕಾಲಿಡುವ ಸಿದ್ಧತೆಯಲ್ಲೂ ಇದ್ದರು.ಆದರೆ, ತಂದೆಯವರ ಆಶಯದಂತೆ ‘ಜನತಾವಾಣಿ’ ಮುನ್ನಡೆಸುವಲ್ಲಿ ಅವರ ಕೈ ಜೋಡಿಸಿದರು.

1996ರಲ್ಲಿ ಇಂಗ್ಲಿಷ್ ಸಾಹಿತ್ಯ ಸ್ನಾತಕೋತ್ತರ ಅಧ್ಯಯನ ಪೂರ್ಣಗೊಳಿಸಿದ ಬೆನ್ನಲ್ಲೇ ಪತ್ರಿಕೆಗೆ ಸಹ ಸಂಪಾದಕರಾಗಿ ಸೇರ್ಪಡೆಯಾದರು.ತಂತ್ರಜ್ಞಾನದ ಕಡೆ ಅಪಾರ ಆಸಕ್ತಿ ಹೊಂದಿದ್ದ ವಿಕಾಸ್, ಪತ್ರಿಕೆಗೂ ತಂತ್ರಜ್ಞಾನದ ಲಾಭ ಸಿಗುವಂತೆ ಮಾಡಿದರು. ಪುಟ ವಿನ್ಯಾಸದಿಂದ ಹಿಡಿದು ಮುದ್ರಣದವರೆಗೆ ಪತ್ರಿಕೆಯು ಆಧುನಿಕ ತಂತ್ರಜ್ಞಾನ ಹೊಂದಿರಬೇಕು ಎಂಬುದು ಇವರ ಆಶಯ.ಪತ್ರಿಕೆ ನಿರಂತರವಾಗಿ ಹೊಸತನಕ್ಕೆ ತೆರೆದುಕೊಳ್ಳುವಂತೆ ಮಾಡಿದ ವಿಕಾಸ್, ಪ್ರಯೋಗಶೀಲತೆಯಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ.

2011ರಲ್ಲಿ ಮಧ್ಯ ಕರ್ನಾಟಕದ ಆಪ್ತ ಒಡನಾಡಿಯಾದ ಜನತಾವಾಣಿ ಪತ್ರಿಕೆಗೆ ವಿಕಾಸ್ ಸಂಪಾದಕರಾದರು. ಆಧುನಿಕ ಚಿಂತನೆ ಹಾಗೂ ಹೊಸ ವಿಚಾರಗಳಿಗೆ ತೆರೆದುಕೊಳ್ಳುತ್ತಾ ಪ್ರಯೋಗಶೀಲತೆಯಿಂದ ಪತ್ರಿಕೆ ನಡೆಯುವಂತೆ ಮಾಡುವಲ್ಲಿ ವಿಕಾಸ್ ಅವರದೇ ಸಾರಥ್ಯ.

error: Content is protected !!