ಚಳ್ಳಕೆರೆ, ಏ.3- ನಿವೃತ್ತ ಪೊಲೀಸ್ ಅಧಿಕಾರಿ ಎಸ್.ವಸಂತಚಾರ್ ರವರಿಗೆ ನಾಯಕನಹಟ್ಟಿ ಯಲ್ಲಿ `ಕನ್ನಡ ಕಲಾ ಸೇವಾ ಪ್ರಶಸ್ತಿ’ಯನ್ನು ಶಾಸಕ ಟಿ.ರಘುಮೂರ್ತಿ ಅವರು ನೀಡಿ ಗೌರವಿಸಿದರು.
ಮೂಲತಃ ಕಲಾವಿದರಾದ ಚಳ್ಳಕೆರೆಯ ವಸಂತಚಾರ್ ಸು.24 ವರ್ಷ ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, 2000 ಇಸವಿಯಲ್ಲಿ ಸ್ವಯಂ ನಿವೃತ್ತಿ ಪಡೆದು `ಶ್ರುತಿ ಶ್ರೀ ಆರ್ಕೆಸ್ಟ್ರಾ’ ಪ್ರಾರಂಭಿಸಿ ಸಾಕಷ್ಟು ಹೆಸರು ಗಳಿಸಿದ್ದಾರೆ. ವರನಟ ಡಾ.ರಾಜಕುಮಾರ್ ಅಪ್ಪಟ ಅಭಿಮಾನಿ ಆಗಿರುವ ಇವರು ಜ್ಯೂ.ವಿಷ್ಣುವರ್ಧನ್ ಜೊತೆ ಸೇರಿ ಭೀಮಸಮುದ್ರದಲ್ಲಿ ಹಿರಿಯ ಕಲಾವಿದರಾದ ಹೊನ್ನವಳ್ಳಿ ಕೃಷ್ಣ, ಟೆನ್ನಿಸ್ ಕೃಷ್ಣ, ಬ್ಯಾಂಕ್ ಜನಾರ್ಧನ ಸಹಯೋಗದಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿ ಸುವ ಮೂಲಕ ಜನರ ಮೆಚ್ಚುಗೆ ಗಳಿಸಿದ್ದರು. ಅಲ್ಲದೇ ಜ್ಯೂ.ವಿಷ್ಣು ಜೊತೆಗೂಡಿ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಿದ್ದಾರೆ.