ಎಸ್ಸೆಸ್, ಎಸ್ಸೆಸ್ಸೆಮ್ ಗೆಲುವಿಗೆ ಹಣ್ಣು, ಕಾಯಿ, ಪ್ರಸಾದ ನೀಡುವ ಹರಕೆ

ಎಸ್ಸೆಸ್, ಎಸ್ಸೆಸ್ಸೆಮ್ ಗೆಲುವಿಗೆ  ಹಣ್ಣು, ಕಾಯಿ, ಪ್ರಸಾದ ನೀಡುವ ಹರಕೆ

ದಾವಣಗೆರೆ, ಮೇ 16- ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಶಾಮನೂರು ಶಿವಶಂಕರಪ್ಪ ಹಾಗು ಎಸ್.ಎಸ್. ಮಲ್ಲಿಕಾರ್ಜುನ್ ಅವರ ಗೆಲುವಿನ ಹಿನ್ನೆಲೆಯಲ್ಲಿ ಜಿಲ್ಲೆಯ ಲಾಸ್ಯ ಫೌಂಡೇಶನ್ ಹಾಗೂ ಎಸ್ಸೆಸ್ಸೆಮ್ ಅಭಿಮಾನಿಗಳ ಬಳಗದ ವತಿಯಿಂದ ನಗರದ ರಾಮ್ ಅಂಡ್ ಕೋ ಸರ್ಕಲ್‌ ಬಳಿ ಇರುವ ಗಣೇಶ ದೇವಸ್ಥಾನದಲ್ಲಿ 501 ಭಕ್ತರಿಗೆ ಹಣ್ಣು, ಕಾಯಿ, ಪ್ರಸಾದ ನೀಡುವ ಹರಕೆ ತೀರಿಸಲಾಯಿತು.

ಲಾಸ್ಯ ಫೌಂಡೇಶನ್ ಸಂಸ್ಥಾಪಕರೂ, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಸಂಘಟನಾ ಕಾರ್ಯದರ್ಶಿ, ಪತ್ರಕರ್ತ ಆರ್. ಸೂರ್ಯಪ್ರಕಾಶ್ ಹಣ್ಣು, ಕಾಯಿ, ಪ್ರಸಾದ ನೀಡುವ ಹರಕೆ ಹೊತ್ತಿದ್ದರು.

 ಈ ಸಂದರ್ಭದಲ್ಲಿ  ಲಾಸ್ಯ ಫೌಂಢೇಶನ್ ಪದಾಧಿಕಾರಿಗಳು, ಎಸ್.ಎಸ್. ಮಲ್ಲಿಕಾರ್ಜುನ್ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು. 

error: Content is protected !!