ರಾಜಕಾರಣಿಗಳಿಗೆ ಮಾತ್ರ ಒಕ್ಕಲುತನ ಲಾಭದಾಯಕವೇ ?
ರಾಜಕಾರಣಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿಯಾಗಿ ಅಪಾರ ಪ್ರಮಾಣದ ನಗದು ಸಿಕ್ಕಾಗ ಅಥವಾ ಆದಾಯ ದುಪ್ಪಟ್ಟಾಗಿದೆ ಎಂದಾಗ, ಮುನ್ನೆಲೆಗೆ ಬರುವ ವಿಷಯವೆಂದರೆ ಅದುವೇ ಕೃಷಿಯಿಂದ ಬಂದ ಆದಾಯ ಎಂಬ ಮಾತು.
ರಾಜಕಾರಣಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿಯಾಗಿ ಅಪಾರ ಪ್ರಮಾಣದ ನಗದು ಸಿಕ್ಕಾಗ ಅಥವಾ ಆದಾಯ ದುಪ್ಪಟ್ಟಾಗಿದೆ ಎಂದಾಗ, ಮುನ್ನೆಲೆಗೆ ಬರುವ ವಿಷಯವೆಂದರೆ ಅದುವೇ ಕೃಷಿಯಿಂದ ಬಂದ ಆದಾಯ ಎಂಬ ಮಾತು.
`ವೃದ್ಧರಾಗಬಾರದು ನಾವು ಹಿರಿಯರಾಗಬೇಕು’ ಎಂಬ ಮಾತಿದೆ. ಈ ಮಾತು ಎಷ್ಟು ಸತ್ಯ ಅಲ್ವಾ ? ವೃದ್ಧಾಪ್ಯ ಅನೇಕ ಸಮಸ್ಯೆಗಳ ಸುಳಿಯಲ್ಲಿ ನಮ್ಮನ್ನು ಸಿಲುಕಿಸಿದರೆ, ಹಿರಿತನ ನಮ್ಮನ್ನು ಮಾದರಿ ವ್ಯಕ್ತಿಯನ್ನಾಗಿಸುತ್ತದೆ.
ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವಂತೆಯೇ, ಎಲ್ಲಾ ರಾಜಕೀಯ ಪಕ್ಷಗಳು ಕಾಲಿಗೆ ಚಕ್ರ ಕಟ್ಟಿಕೊಂಡು, ಅಬ್ಬರದ ಪ್ರಚಾರ ನಡೆಸುತ್ತಿವೆ. ಪೈಪೋಟಿಗೆ ಬಿದ್ದಂತೆ, ಪುಕ್ಕಟೆ ಯೋಜನೆಗಳನ್ನು ಘೋಷಿಸುತ್ತಿದ್ದಾರೆ.
ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ 1ನೇ ಮುಖ್ಯರಸ್ತೆಯಲ್ಲಿ ಆದ ಸ್ಮಾರ್ಟ್ ಸಿಟಿ ಯುಜಿಡಿ ಕೆಲಸದಡಿಯಲ್ಲಿ ಆದ ಮಳೆನೀರಿನ ಕಾಲುವೆ ಇದು. ಆದರೆ ಇದರಲ್ಲಿ ಹೀಗೆ ಕೊಚ್ಚೆ ಹರಿಯುತ್ತಿದೆ.
ಈ ಮುಂಚೆ ಅಶೋಕ ರಸ್ತೆಯಲ್ಲಿ ಅಂಚೆ ಕಚೇರಿ ಇತ್ತು. ನಂತರ, ಆ ಕಚೇರಿಯನ್ನು ಶ್ರೀ ಮುರುಘಾ ಮಠದ ಹಿಂದಿನ ರಸ್ತೆಗೆ ಸ್ಥಳಾಂತರ ಮಾಡಿದರು.
ಕಳೆದ ವಾರ ಅನ್ಯ ಕೆಲಸದ ನಿಮಿತ್ತ ದಾವಣಗೆರೆಯಿಂದ ಶಿವಮೊಗ್ಗಕ್ಕೆ ತೆರಳಬೇಕೆಂದು, ದಾವಣಗೆರೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಸ್ವಲ್ಪ ತಡವಾಗಿಯೇ ಹೋಗಿದ್ದ ಕಾರಣ ಬಸ್ನ ಹಿಂಬದಿಯಲ್ಲಿ ಸೀಟು ಸಿಕ್ಕಿತು.
ಇಡೀ ಆಂಜನೇಯ ಬಡಾವಣೆ ಕಸದ ಗೂಡಾಗಿದೆ. ಎಲ್ಲಾ ರಸ್ತೆಗಳಲ್ಲೂ, ಖಾಲಿ ಇರುವ ಸೈಟ್ಗಳಲ್ಲೂ, ಪಾರ್ಕ್ ನಲ್ಲೂ ಕಸದ ರಾಶಿ ಬಿದ್ದಿದೆ. ಅಂಗಡಿಗಳ ಹತ್ತಿರ, ವಾಚನಾಲಯದ ಬಳಿ, ದೇವಸ್ಥಾನದ ಹತ್ತಿರವೂ ಕಸ ಎಂದರೆ ಕಸ.
ಮದ್ಯ ವ್ಯಸನಿ ಅಲ್ಲದ ಆಟೋ ಚಾಲಕ ಅಥವಾ ಕೂಲಿ ಕಾರ್ಮಿಕನು ಕೂಡ ಉತ್ತಮ ವರ. ಅಂತಹವರಿಗೆ ಹೆಣ್ಣಿನ ಪೋಷಕರು ಧಾರಾಳವಾಗಿ ಧಾರೆ ಎರೆದು ಕೊಡಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರ ಅಭಿಪ್ರಾಯ ಸರಿಯಾಗಿಯೇ ಇದೆ.
ಮದುವೆಯ ಧಿರಿಸಿನಲ್ಲಿ 50 ಮದುಮಕ್ಕಳು ಭಾಜಾ, ಭಜಂತ್ರಿ ಸಮೇತ ಕುದುರೆಗಳ ಸವಾರಿ ಮಾಡ್ತಾ ಸಾಗಿ ಬಂದದ್ದು ಸೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿಗೆ… ನಮಗೆ ವಧುಗಳನ್ನು ಹುಡುಕಿಕೊಡಿ ಎಂದು ಕೇಳಲು… ಇದಕ್ಕೆ ಕಾರಣ ಭ್ರೂಣ ಹತ್ಯೆ ಪಿಡುಗು ನಿವಾರಣೆ ಕುರಿತು ಗಮನ ಸೆಳೆಯುವ ದೆಸೆಯಿಂದ…. ಎಂದು ಮೇಲ್ನೋಟಕ್ಕೆ ಎಂದು ನನ್ನ ಅಭಿಪ್ರಾಯ.
ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕನ ಹಲ್ಲೆಯಿಂದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವುದು ಇಡೀ ಸಮಾಜವೇ ತಲೆತಗ್ಗಿಸುವಂತಹ ವಿಷಯ.
ಸುಮಾರು 8.5 ಲಕ್ಷ ಜನಸಂಖ್ಯೆ ಇರುವ ದಾವಣಗೆರೆ ನಗರವನ್ನು ಕೇಂದ್ರ ಸರ್ಕಾರವು ಸ್ಮಾರ್ಟ್ ಸಿಟಿ ಹಾಗೂ ಅಮೃತ್ ಯೋಜನೆಗೆ ಸೇರ್ಪಡೆಗೊಳಿಸಿದೆ. ಮಧ್ಯ ಕರ್ನಾಟಕದ ಕೇಂದ್ರ ಬಿಂಧುವಾಗಿರುವ ಇಲ್ಲಿ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳಿವೆ. ವಾಣಿಜ್ಯ ಕೇಂದ್ರವಾಗಿದೆ.
ನಗರದ ಖಾಸಗಿ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳ ಕಾಮಗಾರಿ ಇಷ್ಟು ದಿನ ಆಮೆಗತಿಯಲ್ಲಿ ಸಾಗುತ್ತಿದ್ದು, ಇದೀಗ ಮುಂ ದಿನ ತಿಂಗಳು ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದ್ದಂತೆಯೇ ಕಾಮಗಾರಿಗಳ ವೇಗಕ್ಕೆ ಚುರುಕು ಬಂದಂತಾಗಿದೆ. ನಿಜಕ್ಕೂ ಸಂತೋಷದ ವಿಷಯ.