ದಾವಣಗೆರೆ, ಮಾ.16- ಮುಂಬರುವ ವಿಧಾನಸಭಾ ಚುನಾವಣೆ ಯಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಬಗ್ಗೆ ಬಿಜೆಪಿ ಸಂಸದೀಯ ಮಂಡಳಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಬಿಜೆಪಿ ರಾಜ್ಯಾ ಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಕುರಿತು ಸಂಸದೀಯ ಮಂಡಳಿಯೇ ನಿರ್ಧರಿ ಸಲಿದೆ. ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್ ರೀತಿಯ ಅವಸರ ನಮಗಿಲ್ಲ ಎಂದರು. ಬಿಜೆಪಿ ಅಲೆ ಕಡಿಮೆಯಾಗಿರುವ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ ಎಂಬ ವಾದ ತಳ್ಳಿ ಹಾಕಿದ ಅವರು, ಮೋದಿ ಪ್ರಧಾನಿಯಾದ ನಂತರ ಸಾಧ್ಯವಾ ದಷ್ಟು ಎಲ್ಲ ರಾಜ್ಯ ಹಾಗೂ ಕ್ಷೇತ್ರಗಳನ್ನು ಭೇಟಿ ಮಾಡಿ ದೇಶವನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದರು.
ಪ್ರಧಾನಿ ಮೋದಿ ನೆರೆ ಬಂದಾಗ ರಾಜ್ಯಕ್ಕೆ ಬರಲಿಲ್ಲ ಎಂಬ ಕಾಂಗ್ರೆಸ್ ಟೀಕೆಗೆ ಅರ್ಥವಿಲ್ಲ.
ನಮ್ಮ ಸರ್ಕಾರ ಎಲ್ಲ ಪರಿಹಾರ ಕೊಟ್ಟಿದೆ, ಕೆಲಸ ಮಾಡಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕರಾವಳಿಗೆ ನೆರೆ ಬಂದರೂ ಬಂದಿರಲಿಲ್ಲ, ಪರಿಹಾರ ಕೊಟ್ಟಿರಲಿಲ್ಲ. ಈ ಬಗ್ಗೆ ಉತ್ತರಿಸಬೇಕು ಎಂದು ತಿರುಗೇಟು ನೀಡಿದರು.
ಸಿದ್ದರಾಮೋತ್ಸವ ಅಲ್ಲ, 4 ಜಿಲ್ಲೆ ಕಾರ್ಯಕ್ರಮ
ನಗರದಲ್ಲಿ ಈ ಹಿಂದೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಜನ್ಮ ದಿನವನ್ನು ಆಚರಿಸಲಾಗಿತ್ತು, ಅದಕ್ಕೆ ರಾಜ್ಯಾದ್ಯಂತದ ಜನರನ್ನು ಕರೆಸಲಾಗಿತ್ತು. ಆದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಮಾವೇಶಕ್ಕೆ ನಾಲ್ಕು ಜಿಲ್ಲೆಗಳ ಜನರು ಮಾತ್ರ ಬರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಮ್ಮ ಸಮಾವೇಶ ಯಾರಿಗೋ ಸವಾಲು ಹಾಕಲು ಅಲ್ಲ. ಮಧ್ಯ ಕರ್ನಾಟಕ ಆಗಿರುವ ಕಾರಣ, ನಾಲ್ಕು ರಥಗಳು ಇಲ್ಲಿ ಸೇರಲು ಸೂಕ್ತ ವಾಗಿದೆ ಎಂದು ಸಮಾವೇಶ ಮಾಡಲಾಗುತ್ತಿದೆ. ಇದು ನಾಲ್ಕು ಜಿಲ್ಲೆಗಳ ಕಾರ್ಯಕ್ರಮ. ಬೇರೆ ಕಡೆಯಿಂದ ಬರುವವರು ಬರಬ ಹುದು ಎಂದರು. ಸಿದ್ದರಾಮಯ್ಯ ಜನ್ಮದಿನ ಕಾರ್ಯಕ್ರಮದ ರೀತಿ ಈ ಕಾರ್ಯಕ್ರಮ ನಡೆಯಬಾರದು. ವ್ಯವಸ್ಥಿತವಾಗಿ ಕಾರ್ಯ ಕ್ರಮ ನಡೆಯಬೇಕು ಎಂದೂ ಅವರು ಮುಖಂಡರಿಗೆ ಸೂಚನೆ ನೀಡಿದರು.
ಕಾಂಗ್ರೆಸ್ ಟಿಕೆಟ್ ಪಟ್ಟಿ ನಂತರ ಬೀದಿ ಕಾಳಗ
ಮುಂಬರುವ ವಿಧಾನ ಸಭಾ ಚುನಾವಣೆಗಾಗಿ ಕಾಂಗ್ರೆ ಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆಯಾದ ನಂತರ ಆ ಪಕ್ಷದಲ್ಲಿ ಬೀದಿ ಕಾಳಗ – ಹೋರಾಟ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಕಾಂಗ್ರೆಸ್ನವರಿಗೆ ನಾವು ಗಾಳ ಹಾಕಲು ಹೋಗು ವುದಿಲ್ಲ. ನಮ್ಮಲ್ಲಿಯೇ ಗೆಲ್ಲುವ ಶಕ್ತಿ ಇರುವವರು ಇದ್ದಾರೆ ಎಂದರು.