ತುಂಗಭದ್ರಾ ಸೇತುವೆ : ಹಲ್ಲೆ, ಸಾವು

ಹೊನ್ನಾಳಿ, ಮಾ. 17- ಪಟ್ಟಣದ ತುಂಗಭದ್ರಾ ಸೇತುವೆ ಬಳಿ ವ್ಯಕ್ತಿಯೊಬ್ಬನ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಸೇತುವೆ ಬಳಿ ಪಾರ್ಟಿ ಮಾಡುತ್ತಿದ್ದ ನಜರುಲ್ಲಾ ಮತ್ತು ಖಲಂದರ್ ಹಾಗೂ ಫಾರುಕ್ ಅಬಿಬುಲ್ಲಾ ಎಂಬುವವರ ನಡುವೆ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ಫಾರೂಕ್ ಎಂಬವವರು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿ ದ್ದಾರೆ. ಅಬೀಬುಲ್ಲಾ ಗಾಯಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಫಾರುಕ್ ಅವರ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಹೊನ್ನಾಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.