ಹರಿಹರದಲ್ಲಿ ಇಂದು `ಸೌಹಾರ್ದ ಸಂಗಮ’

ಹರಿಹರದಲ್ಲಿ ಇಂದು `ಸೌಹಾರ್ದ ಸಂಗಮ’

ಹರಿಹರ, ಸೆ.26- ಕರ್ನಾಟಕ ಮುಸ್ಲಿಂ ಜಮಾಅತೆ ಹರಿಹರ ಝೋನ್ ಸಮಿತಿ ವತಿಯಿಂದ `ಸೌರ್ಹದ ಸಂಗಮ’  ಕಾರ್ಯಕ್ರಮವನ್ನು ನಾಳೆ ದಿನಾಂಕ 27ರ ಶುಕ್ರವಾರ ಸಂಜೆ ಪ್ಯಾರಿಡೈಸ್ ಕನ್ವೆನ್ಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತೆ ಅಧ್ಯಕ್ಷ ಸೈಯದ್ ನಝೀರ್ ಸಾಬ್ ಹೇಳಿದರು.

ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‌ಧರ್ಮಗುರು ಅಲ್ ಹಜ್ ಸೈಯದ್ ಶಂಶುದ್ಧೀನ್ ಬರ್ಕತಿ ಖಾಝಿ ಸಾನಿಧ್ಯ ವಹಿಸಲಿದ್ದಾರೆ. ಎಂದರು.

ರಾಘವೇಂದ್ರ ಸ್ವಾಮಿ ಮಠದ ಪ್ರಧಾನ ಅರ್ಚಕ ಎ. ವರಹಚಾರ್, ಮರಿಯ ನಿವಾಸ್ ಚರ್ಚ್‌ ಫಾ.ರೆ.ಫರ್ನಾಂಡೀಸ್ ಜಾರ್ಜ್ ಕೆ.ಎ., ದಾವಣಗೆರೆ ಮುಸ್ಲಿಂ ಸಮುದಾಯದ ಧರ್ಮಗುರು ಮೌಲಾನ ಬಿ.ಎ. ಇಬ್ರಾಹಿಂ ಸಖಾಫಿ ಮಾತನಾಡಲಿದ್ದಾರೆ.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮುಜಾಮಿಲ್  ಬಿಲ್ಲು, ಕರ್ನಾಟಕ ಮುಸ್ಲಿಂ ಜಮಾ ಅತೆ ಹರಿಹರ ಝೋನ್ ಸಮಿತಿ ಪದಾಧಿಕಾರಿಗಳಾದ ಸೈಯದ್ ಜಬೀಉಲ್ಲಾ, ಕೆ.ಕೆ. ಆಶ್ರಫ್ ಸಖಾಫಿ, ಮಹೆಬೂಬ್ ಸಾಬ್, ಸೈಯದ್ ಆಶ್ರಫ್ , ಶರೀಫ್ ಸಖಾಫಿ ಇತರರು ಹಾಜರಿದ್ದರು. 

error: Content is protected !!