ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಗೆ ಆಧಾರ್‌ ಜೋಡಣೆ ಮುಂದುವರಿಕೆ

ದಾವಣಗೆರೆ, ಸೆ. 26 – ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ ಪುರಸ್ಕೃತ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯನ್ನು 2024-25ನೇ ಸಾಲಿನಲ್ಲಿ ಮುಂದುವರೆಸಿ ಅನುಷ್ಠಾನಗೊಳಿಸಲಾಗಿದೆ.

ಅರ್ಹ ಮತ್ತು ಅನರ್ಹ ಫಲಾನುಭವಿಗಳನ್ನು ಗುರುತಿಸಲು ಆಧಾರ್‌ ಜೋಡಣೆ, ಇ-ಕೆವೈಸಿ ಬಾಕಿ, ಏಕ ಕುಟುಂಬ ಸದಸ್ಯರ ದೃಢೀಕರಣ, ಭೂಮಿ ದಾಖಲೆಗಳ ಮಾಹಿತಿ ಹಾಗೂ ಇತರೆ ದಾಖಲಾತಿಗಳನ್ನು ಭೌತಿಕವಾಗಿ ಪರಿಶೀಲಿಸಿ ಸರಿಪಡಿಸಿ  ಯೋಜನೆಯ ನೆರವು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕಚೇರಿ ಹಾಗೂ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು.

error: Content is protected !!