ಧನಲಕ್ಷ್ಮಿ ಕ್ರೆಡಿಟ್ ಕೋ-ಆಪ್‌ ಸೊಸೈಟಿ ವಾರ್ಷಿಕ ಮಹಾಸಭೆ

ಧನಲಕ್ಷ್ಮಿ  ಕ್ರೆಡಿಟ್ ಕೋ-ಆಪ್‌ ಸೊಸೈಟಿ ವಾರ್ಷಿಕ ಮಹಾಸಭೆ

ದಾವಣಗೆರೆ, ಸೆ.25- ನಗರದ ಧನಲಕ್ಷ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮೂರನೇ ವಾರ್ಷಿಕ ಮಹಾಸಭೆಯು ವಿನೋಬನಗರ 2ನೇ ಮುಖ್ಯರಸ್ತೆ ಯಲ್ಲಿರುವ ಸೊಸೈಟಿ ಕಚೇರಿಯಲ್ಲಿ ಜರುಗಿತು.

ಸೊಸೈಟಿ ಅಧ್ಯಕ್ಷ ಮಂಜುನಾಥ್ ಎಸ್.ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯು ಇನ್ನಷ್ಟು ಲಾಭದಾಯಕವಾಗಿ ಅಭಿವೃದ್ಧಿ ಸಾಧಿಸಲು ಎಲ್ಲ ಸದಸ್ಯರ ಸಹಕಾರ ಅಗತ್ಯವಾಗಿದ್ದು, ಬರಲಿರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿಗೆ ಆಡಳಿತ ಮಂಡಳಿಯವರು ಶ್ರಮಿಸಲಿದ್ದಾರೆ ಎಂದರು.

2023-24ನೇ ಸಾಲಿನ ವರದಿ ಮಂಡಿಸಿದ  ಸಂಸ್ಥೆಯ ಕಾರ್ಯದರ್ಶಿ ರಾಮು ಬೆಳ್ಳೂಡಿ ನಾಗರಾಜ ಅವರು  ನಿವ್ವಳ ಲಾಭ ವಿಲೇವಾರಿಯ ಅನಮೋದನೆ ಪಡೆದರು.

ಉಪಾಧ್ಯಕ್ಷ ಸತೀಶ್ ಜಿ.ರಾಯ್ಕರ್, ನಿರ್ದೇಶಕರಾದ ಪ್ರವೀಣ ರಾಯ್ಕರ್, ಸುಮಂಗಲ ಪಿ.ಭಟ್, ಸೂರಜ್ ಕೆ.ಎ, ಅರುಣ ಎಂ.ರಾಯ್ಕರ್, ನೀತಾ ಎಸ್.ಜಿ, ಉಷಾ ಎಂ, ರಾಘವೇಂದ್ರ ಕೆ.ರೇವಣಕರ್, ಜ್ಯೋತಿ ಲಕ್ಷ್ಮಿ ಬಿ.ಟಿ, ಮತ್ತು ವಾಣಿ ಎಂ.ಇ ಉಪಸ್ಥಿತರಿದ್ದರು.

ಬಿ.ಲೋಕೇಶ್ ಪ್ರಾರ್ಥಿಸಿದರು. ರೇಖಾ ರೇವಣಕರ್ ಸ್ವಾಗತಿಸಿದರು. ಬೆಟ್ಟಪ್ಪ ವಂದಿಸಿದರು. ಶ್ವೇತಾ ಪೈ ನಿರೂಪಿಸಿದರು.

error: Content is protected !!