ಇಂದು ರಾಣೇಬೆನ್ನೂರಿನಲ್ಲಿ ವಾರ್ಷಿಕೋತ್ಸವ

ಶ್ರೀ ಗಾಯತ್ರಿ ಸಮೂಹ ಹಾಗೂ ಸಮೂಹ ಶಿಕ್ಷಣ ಸಂಸ್ಥೆಗಳು ರಾಣೇಬೆನ್ನೂರು ಇವರ ಸಂಯುಕ್ತಾ ಶ್ರಯದಲ್ಲಿ ರಾಣೇಬೆನ್ನೂರಿನಲ್ಲಿ ಜರುಗಿದ ಕೋಟಿ ಗಾಯತ್ರಿ ಮಹಾ ಯಜ್ಞದ 17 ನೇ ವಾರ್ಷಿಕೋತ್ಸವ ಸಮಾರಂಭ ಇಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1.30 ರವರೆಗೆ ನಗರದ ಬಿಎಜೆಎಸ್‌ಎಸ್ ಮಹಿಳಾ ಕಾಲೇ ಜಿನ ಆವರಣದಲ್ಲಿ ನಡೆಯಲಿದೆ.

ಸಾಗತ ತಾಲ್ಲೂಕು ವೀರಾಪುರ ಹಿರೇಮಠದ ಶ್ರೀ ಮರುಳಸಿದ್ಧ ಪಂಡಿ ತಾರಾಧ್ಯ ಶಿವಾಚಾರ್ಯ ಸ್ವಾಮೀಜಿ,  ರಾಣೇಬೆನ್ನೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಪ್ರಕಾಶಾ ನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಲಿದ್ದಾರೆ. ಪ್ರಧಾನ ಅರ್ಚಕ ಮಾದೇವ ಸ್ವಾಮಿ ಅಂಬಿಗ, ಡಾ.ಕೆ.ಸಿ. ನಾಗರತ್ನ, ಸುರೇಶ್ ಮೊಬಿನ್ ಮತ್ತಿತರರು ಭಾಗವಹಿಸಲಿದ್ದಾರೆ. 

error: Content is protected !!