ಗೋಶಾಲೆಯಲ್ಲಿ ಇಂದು ಬಸವ ಜಯಂತಿ

ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಹಾಗೂ ನಗರ ಮಹಿಳಾ ಘಟಕಗಳ ಸಹಯೋಗದೊಂದಿಗೆ ಇಂದು ಬೆಳಿಗ್ಗೆ 11.30ಕ್ಕೆ ಬಸವ ಜಯಂತಿಯ ಪ್ರಯುಕ್ತ ಆವರಗೆರೆಯಲ್ಲಿರುವ ಗೋಶಾಲೆಯಲ್ಲಿ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಮಾಜದ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಜೊತೆಗೆ ಅಕ್ಕಿ, ಬೆಲ್ಲ, ಕರ್ಬೂಜ ಹಣ್ಣನ್ನು ಗೋವುಗಳಿಗೆ ನೀಡಲು ತರಬಹುದಾಗಿದೆ ಎಂದು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಷ್ಮಾ ಪಾಟೀಲ್‌ ಹಾಗೂ ನಗರ ಘಟಕದ ಅಧ್ಯಕ್ಷೆ ವೀಣಾ ನಟರಾಜ್‌ ಬೆಳ್ಳೂಡಿ ತಿಳಿಸಿದ್ದಾರೆ.

error: Content is protected !!