ದಾವಣಗೆರೆ ತಾಲ್ಲೂಕು ಹೊಸಚಿಕ್ಕನಹಳ್ಳಿ ಗಾಣಗಿತ್ತಿ ದೇವಸ್ಥಾನ ಹತ್ತಿರದ ವಾಸಿ ದಿ.ಕಬೇದಾರ್ ಆನಂದಪ್ಪನವರ ಧರ್ಮಪತ್ನಿ ಶ್ರೀಮತಿ ಕೆ.ಎಂ. ನಾಗರತ್ನಮ್ಮ (60) ಅವರು ದಿನಾಂಕ 21-1-2023ರ ಶನಿವಾರ ಸಂಜೆ 4 ಗಂಟೆಗೆ ನಿಧನರಾದರು. ಓರ್ವ ಪುತ್ರ, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22-1-2023ರ ಭಾನುವಾರ ಮಧ್ಯಾಹ್ನ 1 ಗಂಟೆಗೆ ಹೊಸಚಿಕ್ಕನಹಳ್ಳಿಯ ಮೃತರ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.