ಜಗಳೂರು : ದೇಶಕ್ಕೆ ಹಸಿರು ಕ್ರಾಂತಿಯ ಹರಿಕಾರ ಮಾಜಿ ಪ್ರಧಾನಿ ಡಾ|| ಬಾಬು ಜಗಜೀವನ್ರಾಮ್ ಅವರ ಕೊಡುಗೆ ಅಪಾರವಾಗಿದೆ ಎಂದು ಶಾಸಕರು ಹಾಗೂ ಎಸ್ಟಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ವಿ.ರಾಮಚಂದ್ರ ಹೇಳಿದರು.
ಜಗಳೂರು

ಅಸ್ಪೃಶ್ಯತೆ ನಿವಾರಣೆಗೆ ಸಂಕಲ್ಪ ಅಗತ್ಯ
ಜಗಳೂರು : ಅಸ್ಪೃಶ್ಯತೆ ಆಚರಿಸಿದಲ್ಲಿ ಕಠಿಣ ಕಾನೂನು ಕ್ರಮಗಳು ಜಾರಿಯಲ್ಲಿದ್ದರೂ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿರುವುದು ವಿಷಾದನೀಯ. ಅದರ ನಿವಾರಣೆಗಾಗಿ ಸಂಕಲ್ಪ ಅಗತ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಅಭಿಪ್ರಾಯಪಟ್ಟರು.

ಆರೋಗ್ಯದ ನಿರ್ಲಕ್ಷ್ಯ ಸಲ್ಲದು
ಜಗಳೂರು : ದಿನನಿತ್ಯ ಒತ್ತಡದ ಜೀವನದಲ್ಲಿ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸುವಂತೆ ಆಗಿದೆ ಎಂದು ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆ ವೈದ್ಯ ಡಾ. ಚೆನ್ನಾರೆಡ್ಡಿ ಹೇಳಿದರು.

ನಾಯಕನಹಟ್ಟಿ ರಥೋತ್ಸವ : ಒಳಮಠ, ಹೊರಮಠದಲ್ಲಿ ಎಸ್ಸೆಸ್ ಪೂಜೆ ಸಲ್ಲಿಕೆ
ಜಗಳೂರು : ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ತಿಪ್ಪೇಸ್ವಾಮಿ ರಥೋತ್ಸವ ಶಾಸ್ತ್ರೋಕ್ತವಾಗಿ ನಡೆಯಲಿದ್ದು, ಇಂದು ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರು ನಾಯಕನಹಟ್ಟಿಯ ಒಳಮಠ ಮತ್ತು ಹೊರಮಠದಲ್ಲಿ ಪೂಜೆ ಸಲ್ಲಿಸಿದರು.

ಮೆಗಾ ಲೋಕ್ ಅದಾಲತ್ : 273 ಪ್ರಕರಣಗಳು ಇತ್ಯರ್ಥ
ಜಗಳೂರು : ಇಂದು ನಡೆದ ಮೆಗಾ ಅದಾಲತ್ನಲ್ಲಿ, ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಒಟ್ಟು 273 ಪ್ರಕರಣಗಳು ಇತ್ಯರ್ಥಗೊಂಡಿರುತ್ತವೆ ಹಾಗೂ ಒಟ್ಟು 70,63,506 ರೂ. ಮೊತ್ತ ರಾಜೀ ಸಂಧಾನದ ಮೂಲಕ ಕಕ್ಷಿದಾರರು ಪಡೆದಿರುತ್ತಾರೆ.

ಕೋವಿಡ್ ಅಪಾಯ ತಪ್ಪಿಸಲು ಸಹಕರಿಸಿ
ಜಗಳೂರು : 60 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಗಂಭೀರ ಆರೋಗ್ಯ ಸಮಸ್ಯೆಯುಳ್ಳ 45 ವರ್ಷ ಮೇಲ್ಪಟ್ಟವರು ಸ್ವಯಂ ಪ್ರೇರಿತರಾಗಿ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು. ಜಾಗೃತರಾಗಿ ಎರಡನೇ ಬಾರಿ ಕೋವಿಡ್ ಆಕ್ರಮಣದ ಅಪಾಯವನ್ನು ತಪ್ಪಿಲು ಸಹಕಾರ ನೀಡಬೇಕು

ಗ್ರಾ.ಪಂ. ಅಧ್ಯಕ್ಷರು ಗ್ರಾಮಾಭಿವೃದ್ಧಿಗೆ ಶ್ರಮಿಸಲಿ
ಜಗಳೂರು : ಸಚಿವರು ಗಳಿಗೆ ಇಲ್ಲದ, ಚೆಕ್ನಲ್ಲಿ ಸಹಿ ಮಾಡುವ ಅಧಿಕಾರ ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಇದೆ. ಹಣದ ಆಮಿಷ ತೊರೆದು ನಂಬಿದ ಜನತೆಯ ಋಣ ತೀರಿಸಿ ಉತ್ತಮ ಕೆಲಸ ಗಳನ್ನು ಮಾಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಸಲಹೆ ನೀಡಿದರು.

ಸೂಕ್ತ ರಕ್ಷಣೆಗೆ ವಕೀಲರ ಆಗ್ರಹ
ಜಗಳೂರು : ದೇಶದ ವಿವಿಧೆಡೆ ವಕೀಲರ ಮೇಲಿನ ಹಲ್ಲೆ ಹಾಗೂ ಹತ್ಯೆಗಳನ್ನು ಖಂಡಿಸಿ ತಾಲ್ಲೂಕು ನ್ಯಾಯವಾದಿಗಳ ಸಂಘದಿಂದ ಇಂದು ಪ್ರತಿಭಟನೆ ನಡೆಸಿದರು.

ಗ್ರಾಮದ ಅಭಿವೃದ್ದಿಗೆ ಸದಸ್ಯರು ಪ್ರಾಮಾಣಿಕ ಸೇವೆ ಸಲ್ಲಿಸಬೇಕು
ಜಗಳೂರು : ಗ್ರಾಮದ ಅಭಿವೃದ್ಧಿಗೆ ಪಂಚಾಯಿತಿ ಸದಸ್ಯರು ಆತ್ಮ ತೃಪ್ತಿಯಿಂದ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಸಲಹೆ ನೀಡಿದರು.

ತಳಸಮುದಾಯಕ್ಕೆ ಶಿಕ್ಷಣ – ಅಧಿಕಾರ ಗುರಿಯಾಗಲಿ
ಜಗಳೂರು : ಜಾತಿ ವ್ಯವಸ್ಥೆಯಲ್ಲಿ ಹಸಿವು, ಬಡತನ ಹೊಂದಿರುವವರಿಗೆ ಸಾಮಾಜಿಕ ವಾಗಿ ಹಿಂದುಳಿದವರಿಗೆ ಮೀಸಲಾತಿ ಅಗತ್ಯವಿದೆ. ಆದರೆ, ದಶಕಗಳಿಂದ ಆಡಳಿತ ಸರ್ಕಾರಗಳು ಮೀಸಲಾತಿ ವಿಚಾರದಲ್ಲಿ ಸಾಕಷ್ಟು ಅನ್ಯಾಯ ವೆಸಗಿವೆ ಎಂದು ಆದಿಜಾಂಬವ ಪೀಠದ ಶ್ರೀ ಷಡಕ್ಷರ ಮುನಿಗಳು ಅಭಿಮತ ವ್ಯಕ್ತಪಡಿಸಿದರು.

ದೇವದಾಸಿ ಅನಿಷ್ಠ ಪದ್ಧತಿ ಅಂತ್ಯಕ್ಕೆ ಕಟಿಬದ್ಧರಾಗಬೇಕು
ಜಗಳೂರು : ವೈಜ್ಞಾನಿಕ ಯುಗ ದಲ್ಲಿಯೂ ದೇವದಾಸಿ ಪದ್ಧತಿ ಆಚರಣೆಯಲ್ಲಿ ರುವುದು ಬೇಸರದ ಸಂಗತಿಯಾಗಿದೆ. ಕಾನೂನು ಗಳಿದ್ದರೂ ಸಾಮಾಜಿಕ ವ್ಯವಸ್ಥೆಯ ಕುತಂತ್ರಕ್ಕೆ ಮುಗ್ಧ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರಾದ ಜಿ.ತಿಮ್ಮಯ್ಯ ಹೇಳಿದರು.

ಅಗಸನಹಳ್ಳಿಗೆ ಕುಡಿಯುವ ನೀರಿನ ಘಟಕ ಮಂಜೂರು
ಜಗಳೂರು : ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಲಾಗುವುದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.