ದಾವಣಗೆರೆ, ಜ. 23- ಇಲ್ಲಿನ ವಿಜಯಲಕ್ಷ್ಮಿ ರಸ್ತೆ ಒಕ್ಕಲಿಗರ ಪೇಟೆ ಬಳಿ ಇರುವ ಹಾಲು ಚೌಡೇಶ್ವರಿ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಪಿ.ಎನ್. ಚಂದ್ರಶೇಖರ್, ಅಜ್ಜಂಪುರ ಶೆಟ್ರು ಮೃತ್ಯುಂಜಯ, ನಾಗರಾಜ್ ಹರಿಹರದ, ಗಣೇಶ್, ಕೃಷ್ಣಪ್ಪ, ಗೋಪಿ, ಜೋಗಿ ತರಕಾರಿ, ಗಣೇಶರಾವ್, ಲೋಕೇಶ್, ವೀರಭದ್ರಪ್ಪ, ಪ್ರಭಾಕರ ಹೆಗಡೆ, ಶಫೀ, ಶೇಂಗಾ ಮಂಜು, ಮೋಹನ್, ಮುರುಳಿ, ಕಾರ್ಯಪಾಲಕ ಅಭಿಯಂತರ ಗಣೇಶಬಾಬು, ಸ್ಮಾರ್ಟ್ ಸಿಟಿ ಯೋಜನಾ ನಿರ್ದೇಶಕ ಎಂ. ನಾಗರಾಜ್ ಉಪಸ್ಥಿತರಿದ್ದರು.