ಬೆಳಕಿನ ಜೊತೆಗೆ ಬೇಸಿಗೆಯ ಬಿಸಿಲನ್ನೂ ಭೂಮಿಗೆ ನೀಡಿ ಸಂಜೆಯ ಹೊತ್ತಿಗೆ ಆಕಾಶವನ್ನು ಕೆಂಪಾಗಿಸಿ ತಂಪು ವಾತಾವರಣ ಸೃಷ್ಟಿಸಿ ಮುಳುಗುವ ಸೂರ್ಯನ ಸೊಬಗನ್ನು ಜಿಗಳಿ ಗ್ರಾಮದ ಹೊರ ವಲಯದಲ್ಲಿ ಭತ್ತದ ನಾಟಿಯ ಹಚ್ಚ ಹಸಿರಿನ ನಡುವೆ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿಯಲಾಗಿದೆ.

ಪೈಸೆಗೊಂದು ಲೀಟರ್ ಶುದ್ಧ ನೀರು!
ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಿದ 24x7 ಮಾದರಿ ಸ್ವಾವಲಂಬನೆಯತ್ತ ಗ್ರಾಮಗಳು ಮುನ್ನಡೆಯುವ ಆಯಾಮ

ಮಲೇಬೆನ್ನೂರು ಪುರಸಭೆಗೆ 22 ಕೋಟಿ ಆದಾಯ ನಿರೀಕ್ಷೆ
ಮಲೇಬೆನ್ನೂರು : ಇಲ್ಲಿನ ಪುರಸಭೆಯ ಸಭಾಂಗಣದಲ್ಲಿ ಗುರುವಾರ 2025-26ನೇ ಸಾಲಿನ ಆಯವ್ಯಯ ಮಂಡನೆ ಮಾಡಿದ್ದು, ವಿವಿಧ ಮೂಲಗಳಿಂದ 22 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.

ಜಿಲ್ಲೆಯ ಆಸ್ಪತ್ರೆಗಳ ಅಭಿವೃದ್ಧಿಗೆ ಸಚಿವ ಎಸ್ಸೆಸ್ಸೆಂ ಮನವಿ
ಜಿಲ್ಲೆಯ ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದರು.

ಹರಿಹರ ನಗರಸಭೆ: 5.40 ಲಕ್ಷ ರೂ. ಉಳಿತಾಯದ ಬಜೆಟ್ ಮಂಡನೆ
ಹರಿಹರ : ನಗರಸಭೆಯು 2025-26ನೇ ಸಾಲಿಗೆ 5.40 ಲಕ್ಷ ರೂಪಾಯಿಗಳ ಉಳಿತಾಯ ಬಜೆಟ್ ಮಂಡಿಸಿದ್ದು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ನಗರಸಭೆಯ ಸ್ವಂತ ಆದಾಯದಿಂದ 59.25 ಕೋಟಿ ರೂಪಾಯಿಗಳ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ತಿಳಿಸಿದರು.

ಕಣ್ಮನ ಸೆಳೆದ `ಸಣ್ತಿಮ್ಮಿ ಪಕ್ಷಿ ಪುರಾಣ’ ಏಕವ್ಯಕ್ತಿ ನಾಟಕ ಪ್ರದರ್ಶನ
ನಗರದ ವನಿತಾ ಸಮಾಜದ ಆವರಣದಲ್ಲಿರುವ ಶ್ರೀ ಸತ್ಯ ಸಾಯಿ ರಂಗಮಂದಿರದಲ್ಲಿ ಭೂಮಿಕ-ವನಿತಾ ರಂಗ ವೇದಿಕೆ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಇಂದು ಸಂಜೆ ಹಮ್ಮಿಕೊಂಡಿದ್ದ `ಸಣ್ತಿಮ್ಮಿ ಪಕ್ಷಿ ಪುರಾಣ' ಏಕ ವ್ಯಕ್ತಿ ನಾಟಕ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಕಣ್ಮನ ಸೆಳೆಯಿತು.

ಯೋಗ ಒಂದು ತಪಸ್ಸು, ಅದರಿಂದ ಆತ್ಮಬಲ ವೃದ್ಧಿ
ಯೋಗ ಬಲದಿಂದ ಆತ್ಮಬಲ ಹೆಚ್ಚಾಗುತ್ತದೆ. ಆತ್ಮ ಬಲದಿಂದ ಸಂಕಷ್ಟಗಳು ನಿವಾರಣೆಯಾಗು ತ್ತವೆ. ಯೋಗದ ನಿರಂತರ ಅಭ್ಯಾಸದಿಂದ ಉತ್ತಮ ಆರೋಗ್ಯದ ಜೊತೆಗೆ ಅಧ್ಯಾತ್ಮದ ಅನುಭವವಾಗುತ್ತದೆ ಎಂದು ಪತಂಜಲಿ ಯೋಗ ಸಂಸ್ಥೆಯ ಕರ್ನಾಟಕ ರಾಜ್ಯ ಪ್ರಭಾರಿ ಭವರ್ಲಾಲ್ ಆರ್ಯ ಹೇಳಿದರು.

ಆತ್ಮ ಎಂದು ಅರಿತು ಸಮಭಾವನೆಯಿಂದ ವ್ಯವಹರಿಸಿದ್ದಲ್ಲಿ ಸದ್ಭಾವನೆ
ಮಹಿಳೆ ಮತ್ತು ಪುರುಷ ಎಂಬುದು ಕೇವಲ ದೈಹಿಕ ಆಕಾರವಾಗಿದೆ. ಆದರೆ, ನೈಜವಾಗಿ ಎಲ್ಲರೂ ಶ್ರೇಷ್ಠ ಹಾಗೂ ಶಕ್ತಿಶಾಲಿ ಆತ್ಮಗಳಾಗಿದ್ದೇವೆ
ನಗರದಲ್ಲಿ ಓಶೋ ಧ್ಯಾನ ಶಿಬಿರ
ನಗರದ ಆಲೂರು ಕನ್ವೆನ್ಷನ್ ಹಾಲ್ನಲ್ಲಿ ಇದೇ ದಿನಾಂಕ 31ರಿಂದ ಏಪ್ರಿಲ್ 6ರವರೆಗೆ ಓಶೋ ಧ್ಯಾನ ಶಿಬಿರ ನಡೆಯಲಿದೆ.
ಪ್ರತಿಮಾ ಸಭಾದಿಂದ ನಾಳೆ `ಸಂವಾದ, ಹಾಸ್ಯ ನಾಟಕ ಪ್ರದರ್ಶನ’
ನಗರದ ಪ್ರತಿಮಾ ಸಭಾದ ವತಿಯಿಂದ ಹೊಸ ಸಂವತ್ಸರ `ವಿಶ್ವಾವಸು' ಹಾಗೂ ಹೊಸ ವರ್ಷ ಉಗಾದಿಗೆ ಸ್ವಾಗತ ಕೋರುವ ಹಿನ್ನೆಲೆಯಲ್ಲಿ `ಸಂವಾದ ಮತ್ತು ಹಾಸ್ಯ ನಾಟಕ ಪ್ರದರ್ಶನ' ಏರ್ಪಡಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ
ಜಗಳೂರು : ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 14 ಅಂಗನವಾಡಿ ಕಾರ್ಯಕರ್ತೆ ಯರು, 1 ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ 37 ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ನಗರದಲ್ಲಿ ಇಂದು – ನಾಳೆ `ಶೃಂಗ-2025′ ವಾರ್ಷಿಕೋತ್ಸವ
ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ `ಶೃಂಗ 2025' ಅನ್ನು ಕಾಲೇಜಿನ ಮೈದಾನದಲ್ಲಿ ಇಂದು ಮತ್ತು ನಾಳೆ ಆಚರಿಸಲಾಗುವುದು.
ಜಿನೆಸಿಸ್ ರಿಟ್ರೀಟ್ ಮಾರಾಟ ಸುದ್ದಿ ಮಾಲೀಕರಿಂದ ದೂರು ದಾಖಲು
ನಗರದ ಹೊರವಲಯದಲ್ಲಿರುವ ಜಿನೆಸಿಸ್ ರಿಟ್ರೀಟ್ ಮಾರಾಟಕ್ಕಿದೆ ಎಂಬ ವದಂತಿ ಹಬ್ಬಿಸಿದ ವ್ಯಕ್ತಿಯ ವಿರುದ್ಧ ಮಾಲೀಕ ಜಿ.ಎಸ್. ಮಂಜುನಾಥ್ ಅವರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕರುಣಾದಿಂದ ಇಂದು ಮಜ್ಜಿಗೆ ವಿತರಣೆ
ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ತ್ರಿವೇಣಿ ಡಾ. ಮಲ್ಲೇಶ್, ದಿ. ಕೆ.ಎಸ್. ಶಂಕರ್ ನಾರಾಯಣರಾವ್ ದಿ. ಶ್ರೀಮತಿ ಸುಲೋಚನಮ್ಮ (ಹೊಸದುರ್ಗ) ಇವರು ಇಂದಿನ ದಾನಿಗಳಾಗಿದ್ದಾರೆ.
ನಗರದಲ್ಲಿ ಇಂದು ವಿಜ್ಞಾನ, ಮಹಿಳಾ ದಿನ
ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ವಿಜ್ಞಾನ ವೇದಿಕೆ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದಿಂದ ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಇಂದು ಬೆಳಿಗ್ಗೆ 11.30ಕ್ಕೆ ಕಾಲೇಜಿನ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ನಡೆಯಲಿದೆ.
ಎಸ್ಬಿಐ ಬ್ಯಾಂಕ್ ಕಳ್ಳತನ ಪ್ರಕರಣ : ಐವರ ಬಂಧನ
ನ್ಯಾಮತಿ : ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ನ (ಎಸ್ಬಿಐ) ನೆಹರೂ ರಸ್ತೆಯ ಶಾಖೆಯಲ್ಲಿ 6 ತಿಂಗಳ ಹಿಂದೆ ನಡೆದಿದ್ದ 17 ಕೆ.ಜಿ 705 ಗ್ರಾಂ ಚಿನ್ನಾಭರಣ ಕಳವು ಪ್ರಕರಣ ಭೇದಿಸಿರುವ ಪೊಲೀಸರು, ತಮಿಳುನಾಡಿನ ಇಬ್ಬರು ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐಎಎಸ್ ಹಾಗೂ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50 ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಚೇರಿಯಲ್ಲಿ ನಡೆಸಲಾಗುವುದು.
ಮೇ. 2ಕ್ಕೆ ತ್ರಿಮತಸ್ಥ ವಿಪ್ರವಟುಗಳಿಗೆ ಉಪನಯನ
ನಗರದ ಶ್ರೀ ಶಂಕರ ಸೇವಾ ಸಂಘದ ವತಿಯಿಂದ ಮೇ 2ರಂದು ಆದಿ ಗುರು ಶ್ರೀ ಶಂಕರ ಜಯಂತಿ ಅಂಗವಾಗಿ ತ್ರಿಮತಸ್ಥ ವಿಪ್ರ ವಟುಗಳಿಗೆ ಸಾಮೂಹಿಕ ಉಪನಯನ ಹಮ್ಮಿಕೊಳ್ಳಲಾಗಿದೆ.
ಕೋಡಿ ಕ್ಯಾಂಪ್ ಕೊಟ್ಟೂರೇಶ್ವರ ಮಠದಲ್ಲಿ ನಾಳೆ ಅಮಾವಾಸ್ಯೆ
ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ನಿಂದ ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಇರುವ ಶ್ರೀ ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಯುಗಾದಿ ಅಮಾವಾಸ್ಯೆ ಪ್ರಯುಕ್ತ ನಾಡಿದ್ದು ದಿನಾಂಕ 29ರ ಶನಿವಾರ ಬೆಳಿಗ್ಗೆ 6.30ಕ್ಕೆ ಅಭಿಷೇಕ - ಪೂಜೆ ನಡೆಯಲಿದೆ.
ನಗರದಲ್ಲಿ ನಾಳೆ ಶನಿಮೌನಿ ಅಮಾವಾಸ್ಯೆ, ಸೂರ್ಯಗ್ರಹಣ
ವಿಶ್ವಾಸುನಾಮ ಸಂವತ್ಸರಂಭದ ಪ್ರಯುಕ್ತ ನಾಡಿದ್ದು ದಿನಾಂಕ 29 ರ ಶನಿವಾರ ಬೆಳಿಗ್ಗೆ ಪಂಚದೇವರಗಳಿಗೆ, ಶ್ರೀಕಾಶಿ ವಿಶ್ವನಾಥಲಿಂಗ ಶ್ರೀಶನೇಶ್ವರಸ್ವಾಮಿಗೆ ತೈಲಾಭಿಷೇಕ, ಬೆಳಿಗ್ಗೆ 9ಕ್ಕೆ ಶ್ರೀ ಶನೇಶ್ವರಸ್ವಾಮಿ ಸಹಿತ ಪಂಚದೇವರಗಳ ಪಲ್ಲಕ್ಕಿ ಉತ್ಸವ ಇರುತ್ತದೆ
ರಾಜ್ಯ ಮಟ್ಟದ ಕವನ ಬರೆಯುವ ಸ್ಪರ್ಧೆ
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ರಾಜ್ಯ ಮಟ್ಟದ ಉಚಿತ ಕವನ ಬರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕ
ನಗರದಲ್ಲಿ ಇಂದು ವಿಶ್ವ ಕ್ಷಯರೋಗ ದಿನಾಚರಣೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಾಳೆ ದಿನಾಂಕ 24ರ ಸೋಮವಾರ ಬೆಳಿಗ್ಗೆ 10.30ಕ್ಕೆ ಕುವೆಂಪು ಕನ್ನಡ ಭವನದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಆಚರಿಸಲಾಗುತ್ತಿದೆ.
ಬ್ಯಾಂಕ್ ನೌಕರರ ಮುಷ್ಕರ ಮುಂದಕ್ಕೆ
ನಾಳೆ ದಿನಾಂಕ 24 ಮತ್ತು 25 ರಂದು ನಡೆಸಲು ಉದ್ದೇಶಿಸಲಾಗಿದ್ದ ಎರಡು ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ
ಮೇ 7ರಿಂದ ಅಂತರ ರಾಷ್ಟ್ರೀಯ ಕನ್ನಡ ಸಮ್ಮೇಳನ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿಶ್ವ ಕನ್ನಡಿಗರ ಟ್ರಸ್ಟ್ ವತಿಯಿಂದ ನಗರದಲ್ಲಿ ಬರುವ ಮೇ 7ರಿಂದ 12 ರವರೆಗೆ 6 ದಿನಗಳ ಕಾಲ ಅಂತರರಾಷ್ಟ್ರೀಯ ಕನ್ನಡ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದ್ದಾರೆ.
ಕರ್ನಾಟಕ ಕ್ರೀಡಾ ಪ್ರಾಧಿಕಾರ : ಅರ್ಜಿ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 14 ಹಿರಿಯ ಕ್ರೀಡಾ ವಸತಿ ನಿಲಯದ ಕ್ರೀಡಾ ಪಟುಗಳಿಗೆ ಫಿಟ್ನೆಸ್ ತರಬೇತಿ ನೀಡುವ ಸಲುವಾಗಿ 14 ಫಿಟ್ನೆಸ್ ತರಬೇತುದಾರರ ಸೇವೆ ಪಡೆಯಲು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ನಗರದಲ್ಲಿ ನಾಳೆ ಉದ್ಯೋಗ ಮೇಳ
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರದ ವತಿಯಿಂದ ನಾಡಿದ್ದು ದಿನಾಂಕ 25 ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದದಲ್ಲಿರುವ ಉದ್ಯೋಗ ವಿನಿ ಮಯ ಕೇಂದ್ರದಲ್ಲಿ `ಉದ್ಯೋಗ ಮೇಳ' ನಡೆಯ ಲಿದೆ.
ನಗರದ ಬಿಐಇಟಿಯಲ್ಲಿ ಇಂದು `ಮಂಥನ-2025′
`ಮಂಥನ-2025' ಕಾರ್ಯಕ್ರಮವು ಇಂದು ಬೆಳಿಗ್ಗೆ 10.30ಕ್ಕೆ ಬಿಐಇಟಿ ಕಾಲೇಜಿನ ಆವರಣದಲ್ಲಿರುವ ಎಸ್.ಎಸ್.ಮಲ್ಲಿಕಾರ್ಜುನ್ ಸಾಂಸ್ಕೃತಿಕ ಸಭಾಭವನದಲ್ಲಿ ನಡೆಯಲಿದೆ.
ಅಂತರ್ಜಾಲ ಕವಿಗೋಷ್ಠಿಗೆ ಆಹ್ವಾನ
ಬೆಳಗಾವಿ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ಅಂತರರಾಷ್ಟ್ರೀಯ ಮಟ್ಟದ ಅಂತರ್ಜಾಲ ಕವಿಗೋಷ್ಠಿಯನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಎಂದು ವೇದಿಕೆಯ ಗೌರವ ಸಲಹೆಗಾರ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಹಲಗೇರಿ ಬನಶಂಕರಿ ಉತ್ಸವ
ರಾಣೇಬೆನ್ನೂರು : ತಾಲ್ಲೂಕಿನ ಹಲಗೇರಿ ಗ್ರಾಮದ ಶ್ರೀ ಬನಶಂಕರಿದೇವಿ ಉತ್ಸವವು ಮಾ.31 ಹಾಗೂ ಏ.1ರಂದು ನಡೆಯಲಿದೆ ಎಂದು ದೇವಸ್ಥಾನ ಕಮಿಟಿ ತಿಳಿಸಿದೆ.
ಮಲೇಬೆನ್ನೂರಿನಲ್ಲಿಂದು ರೈತರ ಪ್ರತಿಭಟನೆ
ಕೋಡಿಹಳ್ಳಿ, ಗಂಗನರಸಿ, ಗುತ್ತೂರು, ಅಮರಾವತಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಕ್ಕೆ ಚಾನಲ್ ಮೂಲಕ ನೀರು ಬರದೇ ಇರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಮಧ್ಯಾಹ್ನ 12ಕ್ಕೆ ಮಲೇಬೆನ್ನೂರಿನ ನೀರಾವರಿ ಇಲಾಖೆಯ ಮುಂಭಾಗ ಪ್ರತಿಭಟನೆ ನಡೆಯಲಿದೆ
ಕುಂದೂರಿನಲ್ಲಿ ಇಂದು ಆಂಜನೇಯ ಸ್ವಾಮಿ ರಥೋತ್ಸವ
ಹೊನ್ನಾಳಿ ತಾಲ್ಲೂಕು ಕುಂದೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವವು ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.
ಇಂದು ರಾಣೇಬೆನ್ನೂರು ಬಂದ್ ಇಲ್ಲ
ಕೆಎಸ್ಆರ್ಟಿಸಿ ಬಸ್ ನಿರ್ವಾಹಕನಿಗೆ ಮಸಿ ಬಳೆದು, ಹಲ್ಲೆ ಮಾಡಿರುವುದನ್ನು ಖಂಡಿಸಿ ವಾಟಾಳ್ ನಾಗರಾಜ್ ಅವರು ಇಂದು ಕರೆದಿರುವ ಕರ್ನಾಟಕ ಬಂದ್ಗೆ ಬೆಂಬಲಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಅರ್ಪಿಸಲಾಗುವುದು ಎಂದು ರೈತ ಸಂಘ ಹಾಗೂ ಕನ್ನಡ ಪರ ಸಂಘಟನೆಗಳ ನಿರ್ಣಯವನ್ನು ರವೀಂದ್ರಗೌಡ ಪಾಟೀಲ ತಿಳಿಸಿದ್ದಾರೆ.
ಫೋಟೋಗ್ರಾಫರ್ಸ್, ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ನೂತನ ಪದಾಧಿಕಾರಿಗಳ ಪದಗ್ರಹಣ ಇಂದು
ದಾವಣಗೆರೆ ಜಿಲ್ಲಾ ಪೋಟೋಗ್ರಾಫರ್, ವಿಡಿಯೋ ಗ್ರಾಫರ್ ಅಸೋಸಿಯೇಷನ್ ವತಿಯಿಂದ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇಂದು ಬೆಳಿಗ್ಗೆ 10.30ಕ್ಕೆ ಗುರುಭವನದಲ್ಲಿ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್ ಜಾಧವ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಜ್ಞಾನೇಶ್ವರಿ ಮಹಿಳಾ ಮಂಡಳಿಯಿಂದ ನಗರದಲ್ಲಿ ಇಂದು ಮಹಿಳಾ ದಿನಾಚರಣೆ
ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘ, ಧಾರವಾಡ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಹಾಗೂ ಶ್ರೀ ಜ್ಞಾನೇಶ್ವರಿ ಮಹಿಳಾ ಮಂಡಳಿ ಸಂಯುಕ್ತಾಶ್ರಯದಲ್ಲಿ ನಾಳೆ ದಿನಾಂಕ 22ರ ಶನಿವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅನ್ನ ಪ್ರಸಾದ : ವಿಧಾನ ಸಭೆೆಯಲ್ಲಿ ಪ್ರಸ್ತಾಪ
ನಗರದ ವಿಲಾಸ್ ಕಪೂರ್ ಅವರು ಬೆಂಗಳೂರಿನ ಸಾರ್ವಜನಿಕ ಕಾರ್ಯಕ್ರಮದಲ್ಲಿ ಈಚೆಗೆ ಪ್ರಸಾದ ಹಾಳಾಗುವುದನ್ನು ತಡೆಗಟ್ಟಲು ಮಾಡಿದಂತಹ ಕಾರ್ಯದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಬಂದ್ಗೆ ನೈತಿಕ ಬೆಂಬಲ
ಬೆಳಗಾವಿಯಲ್ಲಿ ಪದೇ ಪದೇ ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ ಕನ್ನಡಪರ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್ಗೆ ಜಿಲ್ಲಾ ಶಾಶ್ವತ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಸಂಘ ನೈತಿಕ ಬೆಂಬಲ ನೀಡಿದೆ ಎಂದು ಸಂಘದ ಅಧ್ಯಕ್ಷ ತ್ಯಾವಣಿಗಿ ವೀರಭದ್ರಸ್ವಾಮಿ, ಉಪಾಧ್ಯಕ್ಷ ಮಲ್ಲೇಶಪ್ಪ ಶ್ಯಾಗಲೆ, ಕಾರ್ಯದರ್ಶಿ ಹೆಚ್.ಜಿ. ಪ್ರಕಾಶ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ಪ್ರತಿಭಟನೆ
ಬೆಳಗಾವಿಯಲ್ಲಿ ಇತ್ತೀಚಿಗೆ ಬಸ್ ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಸುಳ್ಳು ಕೇಸುಗಳನ್ನು ದಾಖಲಿಸಿರುವ ಕ್ರಮವನ್ನು ಖಂಡಿಸಿ, ಇಂದು ಬೆಳಿಗ್ಗೆ 11 ಕ್ಕೆ ಅಂಬೇಡ್ಕರ್ ವೃತ್ತ, ಜಯದೇವ ವೃತ್ತದ ಮೂಲಕ ಎಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು.
ಯೋಗ ಪ್ರಶಸ್ತಿಗೆ ಅರ್ಜಿ
ಪ್ರಧಾನ ಮಂತ್ರಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಅತ್ಯುನ್ನತ ಯೋಗ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಈ ಸಂಬಂಧ ಯೋಗ ಕ್ರೀಡೆಗೆ ಅತ್ಯುನ್ನತವಾದ ಕೊಡುಗೆ ನೀಡಿರುವಂತಹ ಕ್ರೀಡಾ ಪಟುಗಳು ಅಥವಾ ಯೋಗ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅ
ನಗರದಲ್ಲಿ ಇಂದು ಅಟಲ್ ಜಿ ವಿರಾಸತ್ ಜಿಲ್ಲಾ ಸಮ್ಮೇಳನ
ಜಿಲ್ಲಾ ಬಿಜೆಪಿ ವತಿಯಿಂದ ದಾವಣಗೆರೆ - ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಇಂದು ಬೆಳಿಗ್ಗೆ 11ಕ್ಕೆ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಅಂಗವಾಗಿ `ಅಟಲ್ ಜಿ ವಿರಾಸತ್ ಜಿಲ್ಲಾ ಸಮ್ಮೇಳನ' ನಡೆಯಲಿದೆ.
ಹರಿಹರದಲ್ಲಿ ಇಂದು – ನಾಳೆ `ಹೋರಾಟದ ಹಾಡುಗಳ ಕಮ್ಮಟ’
ಮಾನವ ಬಂಧುತ್ವ ವೇದಿಕೆ, ದಲಿತ ಕಲಾ ಮಂಡಳಿ ಹಾಗೂ ಭಾರತೀಯ ಜನ ಕಲಾ ಸಮಿತಿ ಸಹಯೋಗದಲ್ಲಿ ನಾಳೆ ದಿನಾಂಕ 22 ಹಾಗೂ 23ರಂದು ಹರಿಹರದ ಪ್ರೊ.ಬಿ. ಕೃಷ್ಣಪ್ಪ ಭವನದಲ್ಲಿ `ಹೋರಾಟದ ಹಾಡುಗಳ ಕಮ್ಮಟ' ಹಮ್ಮಿಕೊಂಡಿರುವುದಾಗಿ ಮಾನವ ಬಂಧುತ್ವ ವೇದಿಕೆಯ ಡಾ.ಎ.ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಇಂದು ಹೃದಯ ತಪಾಸಣಾ ಶಿಬಿರ
ಎಸ್.ಎಸ್. ನಾರಾಯಣ ಹೆಲ್ತ್ ಸೆಂಟರ್ ಹಾಗೂ ಅಭಿ ಕಾಟನ್ ಸಹಯೋಗದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಜನ್ಮ ದಿನದ ಅಂಗವಾಗಿ ನಾಳೆ ದಿನಾಂಕ 22ರ ಶನಿವಾರ ಉಚಿತ ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ದೂಡಾ ಸದಸ್ಯೆ ವಾಣಿ ಬಕ್ಕೇಶ್ ತಿಳಿಸಿದರು.
25 ರಂದು ಉದ್ಯೋಗ ಮೇಳ
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರದ ವತಿಯಿಂದ ಇದೇ ದಿನಾಂಕ 25 ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ-51ರಲ್ಲಿನ ಉದ್ಯೋಗ ವಿನಿಮಯ ಕೇಂದ್ರದಲ್ಲಿ `ಉದ್ಯೋಗ ಮೇಳ' ನಡೆಯಲಿದೆ.
ಹರಿಹರ ಜಾತ್ರೆಯಲ್ಲಿ ದುರಂತ
ಹರಿಹರ : ಊರಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಬೆಲ್ಲದ ಬಂಡಿ ಮೆರವಣಿಗೆಯಲ್ಲಿ ಹೋರಿಯೊಂದು ಬೆದರಿ ಚಿನ್ನಾಟವಾಡಿ ದ್ದರಿಂದ ರಾಮತೀರ್ಥ ಗ್ರಾಮದ ವೀರಾಚಾರಿ (72) ಎಂಬ ವೃದ್ಧ ಮೃತಪಟ್ಟಿದ್ದಾರೆ.
ವೃದ್ಧನ ಶವ ಪತ್ತೆ
ನಗರದ ರೈಲ್ವೆ ಹಳಿಯ ಹತ್ತಿರ ಸುಮಾರು 70 ವರ್ಷದ ಅಪರಿಚಿತ ವೃದ್ಧ ಸಾವಿಗೀಡಾಗಿದ್ದಾನೆ. ಸಾಧಾರಣ ಮೈಕಟ್ಟು ಹೊಂದಿದ್ದು, ಕೋಲು ಮುಖ, ಹಣೆಯ ಮೇಲೆ ಕೂದಲು ಇರುವುದಿಲ್ಲ.

ಜಗಳೂರು : ಪುರ ಪಿತೃಗಳ ನೆರವಿಲ್ಲದೇ ನಾಮಫಲಕ ಅಳವಡಿಕೆ
ಜಗಳೂರು : ಹಲವಾರು ವರ್ಷಗಳಾದರೂ ಪಟ್ಟಣದ 12ನೇ ವಾರ್ಡ್ನಲ್ಲಿರುವ ಜೆಡಿ ಲೇಔಟ್ಗೆ ಪ.ಪಂ. ಕೌನ್ಸಲರ್ಗಳು ನಾಮ ಫಲಕ ಅಳವಡಿಸದ ಹಿನ್ನೆಲೆಯಲ್ಲಿ ಲೇಔಟ್ ನಿವಾಸಿಗಳೇ ಸದಸ್ಯರು ನಾಚುವಂತೆ ಸ್ವಂತ ಹಣದಲ್ಲಿ ಜೆಡಿ ಲೇಔಟ್ಗೆ ನಾಮ ಫಲಕಗಳನ್ನು ಶುಕ್ರವಾರ ಅಳವಡಿಸಿದರು.

ಮೋಟಾರು ವಾಹನ ಕಾಯ್ದೆಯು ಸೀಟು ಆಟೋಗಳಿಗೆ ಅನ್ವಯಿಸದೇ ?
ನಗರದಲ್ಲಿ ಸೀಟು ಆಟೋಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಇದರಲ್ಲಿ ದರ ಪ್ರಮಾಣ ಕಡಿಮೆ ಎಂದು ತಮ್ಮ ಜೀವಗಳನ್ನು ಲೆಕ್ಕಿಸದೇ ನಿತ್ಯ ಪ್ರಯಾಣಿಸುತ್ತಿದ್ದಾರೆ.

ಶ್ರೀ ದಾನಮ್ಮ ದೇವಸ್ಥಾನದಲ್ಲಿ ನಾಳೆ ಯುಗಾದಿ ಅಮಾವಾಸ್ಯೆ ಪೂಜೆ
ನಗರದ ದೊಡ್ಡಪೇಟೆಯ ಶ್ರೀ ಬಸವೇಶ್ವರ ಮತ್ತು ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ಯುಗಾದಿ ಅಮಾವಾಸ್ಯೆ ಪ್ರಯುಕ್ತ ನಾಡಿದ್ದು ದಿನಾಂಕ 29ರ ಶನಿವಾರ ಬೆಳಿಗ್ಗೆ ಶ್ರೀ ಸ್ವಾಮಿಗೆ ಅಭಿಷೇಕ, ಪೂಜೆ, ಹೂವಿನ ಅಲಂ ಕಾರ ನಡೆ ಯುವುದು

ಹರಿಹರ : ಆತ್ಮಹತ್ಯೆಗೆ ಯತ್ನಿಸಿದವರ ರಕ್ಷಣೆ
ಹರಿಹರ : ಬಡತನದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದರು ಎನ್ನಲಾದ ಐವರನ್ನು ನಗರದ ತುಂಗಾರತಿ ಸ್ಥಳದಲ್ಲಿ ಪ್ರವಾಸೋದ್ಯಮ ಇಲಾಖೆಯ, ಪ್ರವಾಸಿ ಮಿತ್ರರಾದ ಹನುಮಂತರಾಜು ಮತ್ತು ಸಾವಿತ್ರಮ್ಮ ರಕ್ಷಿಸುವ ಕೆಲಸ ಮಾಡಿದ್ದಾರೆನ್ನಲಾಗಿದೆ.

ಆತ್ಮ ಕಲ್ಯಾಣವಾಗಲು ಗುರುವಿನ ಕಾಯಕ ಅವಶ್ಯಕ
ಹರಪನಹಳ್ಳಿ : ಆತ್ಮ ಕಲ್ಯಾಣವಾಗಲು ಗುರುವಿನ ಕಾಯಕ ಅವಶ್ಯಕ. ಹರ ಮುನಿದರೆ ಗುರು ಕಾಯುವನು. ಹಾಗಾಗಿ ಗುರುವಿಗಿಂತ ಮಿಗಿಲಾದದ್ದು ಯಾವುದು ಇಲ್ಲವೆಂದು ಲಿಂಗನಾಯಕನಹಳ್ಳಿಯ ಶ್ರೀ ಚನ್ನವೀರ ಸ್ವಾಮೀಜಿ ತಿಳಿಸಿದರು.

ಶಿವಕುಮಾರ್ ಕಣಸೋಗಿ ಅವರಿಗೆ ಡಿ.ಲಿಟ್
ದಾವಣಗೆರೆ ವಿಶ್ವವಿ ದ್ಯಾನಿಲಯ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಶಿವಕುಮಾರ ಕಣಸೋಗಿ ಅವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಡಿ. ಲಿಟ್ ಪದವಿ ಪ್ರದಾನ ಮಾಡಿದೆ.

ಹಿರಿಯ ಮಹಿಳೆ ಜಯಮ್ಮಗೆ ಗೌರವ
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿನ ಮಹಿಳಾ ಮಂಡಳಿ ವತಿಯಿಂದ ಹಿರಿಯ ಪತ್ರಕರ್ತ ಬಿ.ಜೆ. ಅನಂತಪದ್ಮನಾಭ ರಾವ್ ಅವರ ತಾಯಿ - 95 ವರ್ಷದ ಶ್ರೀಮತಿ ಜಯಮ್ಮ ಅವರಿಗೆ ಹಿರಿಯ ಮಹಿಳೆಯೆಂದು ಗುರು ತಿಸಿ, ಅವರ ಸ್ವಗೃಹದಲ್ಲಿ ಸನ್ಮಾನಿಸ ಲಾಯಿತು.

ಸ್ವಯಂ ಉದ್ಯೋಗವಾಗಿ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳಿ
ಹರಿಹರ : ಷೇರು ಮಾರುಕಟ್ಟೆಯು ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಇರುವ ವೇದಿಕೆಯಾಗಿದ್ದು, ಹಣಕಾಸಿನ ಬೆಳವಣಿಗೆಯನ್ನು ಗುರಿಯಾಗಿಟ್ಟುಕೊಂಡು ಹೂಡಿಕೆದಾರರೊಂದಿಗೆ ಬಂಡವಾಳ ವನ್ನು ಹುಡುಕುವ ಕಂಪನಿಗಳಿಗೆ ಇದು ಸೇತುವೆಯಾಗಿದೆ.

ಪಂಚಮಸಾಲಿ ಸಮಾಜದ ಒಗ್ಗಟ್ಟಿಗೆ ಕರೆ
ನಗರದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಕಚೇರಿಯಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮವು ಸಮಾಜದ ಒಗ್ಗಟ್ಟಿಗೆ ಕರೆ ನೀಡುವ ವೇದಿಕೆಯಾಯಿತು.

ಮಕ್ಕಳಲ್ಲಿ ಸರ್ವ ಧರ್ಮಗಳ ಸೌಹಾರ್ದತೆ ಮೂಡಿಸುವುದು ಅವಶ್ಯಕ
ಹರಪನಹಳ್ಳಿ : ಸಮ ಸಮಾಜ ನಿರ್ಮಾಣಕ್ಕೆ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸುವುದರ ಜತೆಗೆ ಸರ್ವ ಧರ್ಮಗಳ ಕುರಿತು ಸೌಹಾರ್ದತೆ ಮೂಡಿಸುವ ಅವಶ್ಯಕತೆ ಇದೆ ಎಂದು ತೆಗ್ಗಿನ ಮಠ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡದೇ ಕಾಲಹರಣ : ಮನವಿ
ಹೊನ್ನಾಳಿ : ಸುಪ್ರೀಕೋರ್ಟ್ನ ತೀರ್ಪುಬಂದು 7 ತಿಂಗಾಳದರೂ ಒಳನಮೀಸಲಾತಿ ಜಾರಿ ಮಾಡದಂತೆ ರಾಜ್ಯದ ಕಾಂಗ್ರೆಸ್ ಸರ್ಕಾರವು ಕಾಲಹರಣ ಮಾಡುತ್ತದೆ ಎಂದು ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘವು ತಹಶೀಲ್ದಾರ್ ಪಟ್ಟರಾಜಗೌಡರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ರಕ್ತದಾನದಿಂದ ಅನೇಕರ ಜೀವ ಉಳಿಸಬಹುದು : ಉಳವಯ್ಯ
ನಗರದ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಲಯನ್ಸ್ ಕ್ಲಬ್, ಲಯನ್ಸ್ ಕ್ಲಬ್ ಆಸರೆ, ಲಯನ್ಸ್ ಕ್ಲಬ್ ವಿದ್ಯಾನಗರ, ಲಯನ್ಸ್ ಬ್ಲಡ್ ಸೆಂಟರ್, ಹೆಚ್ಡಿಎಫ್ಸಿ ಮತ್ತು ಎನ್.ಎಸ್.ಎಸ್. ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಹರಿಹರ ಜಾತ್ರೆ ಉತ್ಸವ : ಕುಸ್ತಿ ಪಂದ್ಯಕ್ಕೆ ಚಾಲನೆ
ಹರಿಹರ : ನಗರದ ಗಾಂಧಿ ಮೈದಾನದಲ್ಲಿ ಗ್ರಾಮ ದೇವತೆ ಊರಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಕೊನೆಯ ದಿನದ ಕುಸ್ತಿ ಪಂದ್ಯಕ್ಕೆ ಚಾಲನೆ ನೀಡಿದರು.

ಮೊಳಕಾಲ್ಮೂರಿನಲ್ಲಿ ನಿಧಿಗಳ್ಳರ ಬಂಧನ
ಮೊಳಕಾಲ್ಮೂರು : ತಾಲ್ಲೂಕಿನ ಬೈರಾಪುರ - ಹಿರೇಕೆರೆಹಳ್ಳಿ ವಿಭೂತಿ ಗುಡ್ಡದ ಬಳಿ ನಿಧಿಗಾಗಿ ಶೋಧ ನಡೆಸುತ್ತಿದ್ದ 9 ಜನರನ್ನು ಬಂಧಿಸುವಲ್ಲಿ ಮೊಳಕಾಲ್ಮೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿಯಿಂದ ಲಕ್ಷ್ಮಣರಾವ್ ಸಾಳಂಕಿ ಅವರಿಗೆ ಸನ್ಮಾನ
ಸ್ಥಳೀಯ ವಿನೋಬನಗರದ ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿಯ ಸದಸ್ಯ ಲಕ್ಷ್ಮಣರಾವ್ ಸಾಳಂಕಿ ಪಾದಯಾತ್ರೆಯ ಮೂಲಕ 10 ಜ್ಯೋತಿರ್ಲಿಂಗಗಳ ದರ್ಶನ ಮಾಡಿದ್ದು, ಅವರನ್ನು ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು.

ಚಿತ್ರದುರ್ಗ : ರಸ್ತೆ ಅಪಘಾತದಲ್ಲಿ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ಸಾವು
ಜೆ.ಸಿ.ಆರ್. ಬಡಾವಣೆ ಹತ್ತಿರ ರಾಷ್ಟ್ರೀಯ ಹೆದ್ದಾರಿ 13ರ ಸೇತುವೆ ಬಳಿ ಮಧ್ಯರಾತ್ರಿ ಬೈಕ್ ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಪ್ರಥಮ ವರ್ಷದ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಾದ ಯಾಸೀನ್ ಮತ್ತು ಅಲ್ತಾಫ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆ ಕೊನೆಯಾಗಲಿ
ಜಗಳೂರು : ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆ ಕೊನೆಯಾಗಬೇಕು ಮತ್ತು ಕನ್ನಡಿಗರಿಗೆ ಕಾನೂನು ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ಯುವ ಕರ್ನಾಟಕ ವೇದಿಕೆ ಶನಿವಾರ ಪ್ರತಿಭಟನೆ ನಡೆಸಿತು.

ವೈಭವದ ನೀರಭತ್ತೇಶ್ವರ ಸ್ವಾಮಿ ಜಾತ್ರೆ
ಮಾಯಕೊಂಡ : ಸಮೀಪದ ದೊಡ್ಡ ಮಾಗಡಿಯಲ್ಲಿ ಶನಿವಾರ ನೀರಭತ್ತೇಶ್ವರ ಸ್ವಾಮಿ ಜಾತ್ರೆ ನೆರವೇರಿತು. ನೀರಿನಲ್ಲಿ ದೀಪ ಬೆಳಗುವ ಪವಾಡ ವೀಕ್ಷಿಸಲು ಸಾವಿರಾರು ಭಕ್ತರು ಸೇರಿದ್ದರು.

ಕನ್ನಡ ಸಮ್ಮೇಳನದ ವೆಬ್ಸೈಟ್ ಲೋಕಾರ್ಪಣೆ
ಕನ್ನಡ ಸಮ್ಮೇಳನ ಹಾಗೂ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕಾರ್ಯಕ್ರಮದ ಕುರಿತಂತೆ ವೆಬ್ಸೈಟನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಬೆಂಗಳೂರಿ ನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಿದರು.

ಸ್ಪೀಕರ್ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ
ಹರಿಹರ : ವಿಧಾನಸಭೆಯಲ್ಲಿ ನಿನ್ನೆ ಸಭಾಪತಿ ಯು.ಟಿ. ಖಾದರ್ ಅವರು ಬಿಜೆಪಿ ಶಾಸಕರನ್ನು ಪುಡಿ ರೌಡಿಗಳೆನ್ನುವ ರೀತಿಯಲ್ಲಿ ಹೊರಗಡೆ ಎತ್ತಿ ಹಾಕಿಸಿ ರುವ ಪ್ರವೃತ್ತಿ ಖಂಡನೀಯವಾಗಿದೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹಿಂಡಸಗಟ್ಟೆ ಲಿಂಗರಾಜ್ ಹೇಳಿದರು.

ಕೆರೆಬಿಳಚಿ ಸರ್ಕಾರಿ ಶಾಲೆ ಮಕ್ಕಳಿಗೆ ಸ್ವೆಟರ್ ವಿತರಣೆ
ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಮತ್ತು ಬೆಂಗಳೂರು ಇಂಟ್ರಾಸೆಕ್ಟ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದೊಂದಿಗೆ ಕೆರೆಬಿಳಚಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬೆಚ್ಚುಡುಪುಗಳನ್ನು (ಸ್ವೆಟರ್) ವಿತರಿಸಲಾಯಿತು.

ಅಕ್ಕಮಹಾದೇವಿ ಸಮಾಜದಲ್ಲಿ ಮಹಿಳಾ ದಿನಾಚರಣೆ
ಶ್ರೀ ಅಕ್ಕಮಹಾದೇವಿ ಸಮಾಜದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹೋಳಿ ಹುಣ್ಣಿಮೆ ಕಾರ್ಯಕ್ರಮ ಜರುಗಿತು.

ನೀರಿನ ದಾಹ ನೀಗಿಸಿಕೊಂಡ ಕೋತಿ…
ಬೇಸಿಗೆ ಬಿಸಿಲಿನ ತಾಪ ದಿನೇ ದಿನೇ ಹೆಚ್ಚಾಗುತ್ತಿದ್ದು, ಜನ - ಜಾನುವಾರು ಮತ್ತು ಪ್ರಾಣಿ - ಪಕ್ಷಿಗಳು ಸೇರಿದಂತೆ ಸಕಲ ಜೀವ ಸಂಕುಲಕ್ಕೆ ನೀರಿನ ಅಗತ್ಯತೆ ಕೂಡಾ ಹೆಚ್ಚಾಗುತ್ತಿದೆ.

ವಿದ್ಯಾವಂತರು ಸ್ವಾರ್ಥಿಗಳಾಗದೇ ಊರಿಗೆ, ಬಂಧು-ಮಿತ್ರರಿಗೆ ಆದ್ಯತೆ ಕೊಡಿ
ಮಲೇಬೆನ್ನೂರು : ಒಂದು ಊರು ಕೇವಲ ಆರ್ಥಿಕ ಅಭಿವೃದ್ಧಿ ಎಂದು ನಾವು ಹೇಳಲ್ಲ, ಆರ್ಥಿಕವಾಗಿ ಯಾರೂ ಬೇಕಾದರೂ ಅಭಿವೃದ್ಧಿ ಆಗಬಹುದು. ಆದರೆ, ಸಾಹಿತ್ಯಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಆ ಊರು ಪ್ರಗತಿ ಕಂಡರೆ ಅದನ್ನು ನಿಜವಾದ ಸಾಧನೆ ಎನ್ನುತ್ತೇವೆ

ಸ್ನೇಹ ಮಹಿಳಾ ಬಳಗದಿಂದ ಮಹಿಳಾ ದಿನಾಚರಣೆ
ಸ್ನೇಹ ಮಹಿಳಾ ಬಳಗದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.

ಕದಳಿ ವೇದಿಕೆಯಿಂದ ಕದಳಿ ಕಮ್ಮಟ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆ ಕದಳಿ ಮಹಿಳಾ ವೇದಿಕೆಯ 164ನೇ ಕದಳಿ ಕಮ್ಮಟ ಹಾಗೂ ದತ್ತಿ ಶರಣೆ ಲಿಂ. ಗಂಗಮ್ಮ ಸಿದ್ದಬಸಪ್ಪ ಮತ್ತು ಶರಣ ಲಿಂ. ಬಿ. ಸಿದ್ದಬಸಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಸಂಜೀವಿನಿ ನರ್ಸಿಂಗ್ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.

ನಗರದಲ್ಲಿ ಇಂದು ದತ್ತಿ ಉಪನ್ಯಾಸ
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲಾ-ಕಾಲೇಜಿನ ಅಂಗಳದಲ್ಲಿ ಸಾಹಿತ್ಯೋ ತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವು ಇಂದು ಬೆಳಿಗ್ಗೆ 11ಕ್ಕೆ ಮೃತ್ಯುಂಜಯ ಶುಶ್ರೂಷಾ ಶಾಲೆ ಆವರಣದಲ್ಲಿ ನಡೆಯಲಿದೆ.

ಯಲವಟ್ಟಿಯಲ್ಲಿ ಸಂಭ್ರಮದ ರಥೋತ್ಸವ
ಮಲೇಬೆನ್ನೂರು : ಯಲವಟ್ಟಿ ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸ ವವು ಭಾನುವಾರ ಬೆಳಿಗ್ಗೆ ಗ್ರಾಮಸ್ಥರ ಸಮ್ಮುಖದಲ್ಲಿ ಜಿಗಳಿ ರಂಗನಾಥ ಸ್ವಾಮಿ ಜೊತೆ ಗೂಡಿ ಸಂಭ್ರಮದಿಂದ ಜರುಗಿತು

ರಾಣೇಬೆನ್ನೂರಿನ ಶಾಲೆಗಳಿಗೆ ಶೀಘ್ರವೇ ಡಿಜಿಟಲ್ ಲೈಬ್ರರಿ
ರಾಣೇಬೆನ್ನೂರು : ಸೌರವ್ಯೂಹದ ಕುರಿತು ಜ್ಞಾನ ನೀಡುವ `ಸೈನ್ಸ್ ಪಾರ್ಕ್' ಡಿಜಿಟಲ್ ಲೈಬ್ರರಿಗಳನ್ನು ನಗರದ ಹಾಗೂ ನನ್ನ ವಿಧಾನಸಭಾ ಕ್ಷೇತ್ರದ ಎಲ್ಲ ಶಾಲೆಗಳಲ್ಲಿ ಇನ್ನೊಂದು ತಿಂಗಳಲ್ಲಿ ಪ್ರಾರಂಭಿಸಲಾ ಗುವುದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಚೇತನಾ ಶಿವಕುಮಾರ್ಗೆ ಪ್ರಶಸ್ತಿ
ಇದೇ ದಿನಾಂಕ 24 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಸರ್ವೇಜನಾ ಆರ್ಟ್ ಅಂಡ್ ಕಲ್ಚರಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಕೆಂಗಲ್ ಹನುಮಂತಯ್ಯ ಸದ್ಭಾವನಾ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಿದ್ದಾರೆ.

ಯಲವಟ್ಟಿ : ನಾಳೆ ಆಂಜನೇಯ ಸ್ವಾಮಿ ರಥೋತ್ಸವ
ಮಲೇಬೆನ್ನೂರು : ಯಲವಟ್ಟಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋ ತ್ಸವವು ಜಿಗಳಿ ರಂಗನಾಥಸ್ವಾಮಿ ಜೊತೆಗೂಡಿ ನಾಡಿದ್ದು ದಿನಾಂಕ 23ರ ಭಾನುವಾರ ಬೆಳಿಗ್ಗೆ 7 ಗಂಟೆಗೆ ಜರುಗಲಿದೆ.

ಎಂ. ಬಸವರಾಜ್ ಸೇರಿದಂತೆ ಐವರಿಗೆ ಕನ್ನಡ ಫಿಲಂ ಚೇಂಬರ್ ಸಂಸ್ಥೆಯ ಪ್ರಶಸ್ತಿ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಾಗೂ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ರಾಜ್ಯಮಟ್ಟದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಾಡಿದ್ದು ದಿನಾಂಕ 23ರ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ.

ಶಾಂತ ಯಾವಗಲ್ಗೆ `ಅಕ್ಕ’ ಪ್ರಶಸ್ತಿ
ನಗರದ ಅಕ್ಕಮಹಾದೇವಿ ಸಮಾಜದ ವತಿಯಿಂದ ಪ್ರತಿ ವರ್ಷ ಕೊಡ ಮಾಡುವ `ಅಕ್ಕ' ಪ್ರಶಸ್ತಿಗೆ ಈ ಬಾರಿ ಶ್ರೀಮತಿ ಶಾಂತಾ ಎಸ್. ಯಾವಗಲ್ ಆಯ್ಕೆಯಾಗಿದ್ದಾರೆ.