ಜಗಳೂರು : ದೇಶದ ಮಹಾನ್ ನಾಯಕ ಮಹಾತ್ಮ ಗಾಂಧೀಜೀಯವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು, ಮುನ್ನಡೆಯಬೇಕೆಂದು ಹಿರಿಯ ನಾಗರಿಕರ ಸಂಘದ ಉಪಾಧ್ಯಕ್ಷ, ಸಮಾಜ ಸೇವಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಹೇಳಿದರು.
ಜಗಳೂರು ಪ.ಪಂ.ಗೆ ಲೋಕಾನಾಯ್ಕ್ ಮುಖ್ಯಾಧಿಕಾರಿ
ಜಗಳೂರು : ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಯಾಗಿ ಲೋಕಾನಾಯ್ಕ್ ಅಧಿಕಾರ ವಹಿಸಿ ಕೊಂಡರು. ಹಿಂದಿನ ಮುಖ್ಯಾಧಿಕಾರಿ ರಾಜು ಬಣಕಾರ್ ಅವರ ವರ್ಗಾವಣೆ ಯಿಂದ ಈ ಸ್ಥಾನ ತೆರವಾಗಿತ್ತು.
ಜಗಳೂರು : ಬೋಗಸ್ ಕಾರ್ಡ್ ಕಡಿವಾಣಕ್ಕೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ
ಜಗಳೂರು : ಬೋಗಸ್ ಕಾರ್ಡ್ಗಳಿಗೆ ಕಡಿವಾಣ ಹಾಕಿ ಅರ್ಹ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಒತ್ತಾಯಿಸಿ ಎಐಟಿಯುಸಿ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ನಿನ್ನೆ ಪ್ರತಿಭಟನೆ ನಡೆಸಿದರು.
ಜಗಳೂರು : ಕೋವಿಡ್ ಕೇರ್ ಸೆಂಟರ್ಗೆ ಎಸಿ ಭೇಟಿ
ಜಗಳೂರು : ತಾಲ್ಲೂಕಿನ ಮೆದಗಿನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿರ್ಮಿಸಿರುವ ಕೋವಿಡ್ ಕೇರ್ ಸೆಂಟರ್ಗೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಇಂದು ಭೇಟಿ ನೀಡಿ ಪರಿಶೀಲಿಸಿದರು.
ಕಾರ್ಮಿಕರ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ
ಜಗಳೂರು : ದೇಶದಲ್ಲಿನ ಜಾತಿ, ಧರ್ಮ, ಭಾಷೆ ರಹಿತವಾಗಿ ಶೋಷಿತರ, ಬಡ ಕಾರ್ಮಿಕರ ಧ್ವನಿಯಾಗಿ 1920 ರಿಂದ ಎಐಟಿಯುಸಿ ಸಂಘಟನೆ ಜನಪರ ಹೋರಾಟ ನಡೆಸುತ್ತಾ, ಶತಮಾನೋತ್ಸವದ ಹಾದಿಯಲ್ಲಿ ಸಾಗಿದ್ದು, ಸಂಘಟಿತ ಹೋರಾಟದ ಫಲವಾಗಿ ಕಾರ್ಮಿಕರಿಗೆ ಸೌಲಭ್ಯ, ಜೀವನ ಭದ್ರತೆ ಲಭಿಸಿವೆ
ಡಾ. ಬಾಬೂಜೀ ಕೊಡುಗೆ ಅಪಾರ
ಜಗಳೂರು : ದೇಶಕ್ಕೆ ಹಸಿರು ಕ್ರಾಂತಿಯ ಹರಿಕಾರ ಮಾಜಿ ಪ್ರಧಾನಿ ಡಾ|| ಬಾಬು ಜಗಜೀವನ್ರಾಮ್ ಅವರ ಕೊಡುಗೆ ಅಪಾರವಾಗಿದೆ ಎಂದು ಶಾಸಕರು ಹಾಗೂ ಎಸ್ಟಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ವಿ.ರಾಮಚಂದ್ರ ಹೇಳಿದರು.
ಅಸ್ಪೃಶ್ಯತೆ ನಿವಾರಣೆಗೆ ಸಂಕಲ್ಪ ಅಗತ್ಯ
ಜಗಳೂರು : ಅಸ್ಪೃಶ್ಯತೆ ಆಚರಿಸಿದಲ್ಲಿ ಕಠಿಣ ಕಾನೂನು ಕ್ರಮಗಳು ಜಾರಿಯಲ್ಲಿದ್ದರೂ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿರುವುದು ವಿಷಾದನೀಯ. ಅದರ ನಿವಾರಣೆಗಾಗಿ ಸಂಕಲ್ಪ ಅಗತ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಅಭಿಪ್ರಾಯಪಟ್ಟರು.
ಆರೋಗ್ಯದ ನಿರ್ಲಕ್ಷ್ಯ ಸಲ್ಲದು
ಜಗಳೂರು : ದಿನನಿತ್ಯ ಒತ್ತಡದ ಜೀವನದಲ್ಲಿ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸುವಂತೆ ಆಗಿದೆ ಎಂದು ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆ ವೈದ್ಯ ಡಾ. ಚೆನ್ನಾರೆಡ್ಡಿ ಹೇಳಿದರು.
ನಾಯಕನಹಟ್ಟಿ ರಥೋತ್ಸವ : ಒಳಮಠ, ಹೊರಮಠದಲ್ಲಿ ಎಸ್ಸೆಸ್ ಪೂಜೆ ಸಲ್ಲಿಕೆ
ಜಗಳೂರು : ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ತಿಪ್ಪೇಸ್ವಾಮಿ ರಥೋತ್ಸವ ಶಾಸ್ತ್ರೋಕ್ತವಾಗಿ ನಡೆಯಲಿದ್ದು, ಇಂದು ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರು ನಾಯಕನಹಟ್ಟಿಯ ಒಳಮಠ ಮತ್ತು ಹೊರಮಠದಲ್ಲಿ ಪೂಜೆ ಸಲ್ಲಿಸಿದರು.
ಮೆಗಾ ಲೋಕ್ ಅದಾಲತ್ : 273 ಪ್ರಕರಣಗಳು ಇತ್ಯರ್ಥ
ಜಗಳೂರು : ಇಂದು ನಡೆದ ಮೆಗಾ ಅದಾಲತ್ನಲ್ಲಿ, ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಒಟ್ಟು 273 ಪ್ರಕರಣಗಳು ಇತ್ಯರ್ಥಗೊಂಡಿರುತ್ತವೆ ಹಾಗೂ ಒಟ್ಟು 70,63,506 ರೂ. ಮೊತ್ತ ರಾಜೀ ಸಂಧಾನದ ಮೂಲಕ ಕಕ್ಷಿದಾರರು ಪಡೆದಿರುತ್ತಾರೆ.