ಕೊಟ್ಟೂರು ನಗರ ಘಟಕದ ಬಿಜೆಪಿ ಅಧ್ಯಕ್ಷರಾಗಿ ಭರಮನಗೌಡ್ರು ರಾಮನಗೌಡ್ರು ವಿಕ್ರಮ್ ಅವರು ಆಯ್ಕೆಯಾಗಿದ್ದಾರೆ.
ಆಯ್ಕೆ-ನೇಮಕ
ಸಹಕಾರ ಬ್ಯಾಂಕು ಮಹಾಮಂಡಳದ ನಿರ್ದೇಶಕರಾಗಿ ಕೋಗುಂಡಿ ಬಕ್ಕೇಶಪ್ಪ
ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾ ಮಂಡಳದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮಾಜಿ ಸಚಿವರೂ ಆಗಿರುವ ರಾಜ್ಯದ ಹಿರಿಯ ಸಹಕಾರಿ ಧುರೀಣ ಹೆಚ್.ಕೆ. ಪಾಟೀಲ್ ನೇತೃತ್ವದಲ್ಲಿ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಲಾಕುಂಚದ ಎಸ್.ಎಸ್. ಬಡಾವಣೆ ಶಾಖೆ ಅಧ್ಯಕ್ಷರಾಗಿ ಸುಜಾತ ಬಸವರಾಜ್
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಡಿ.ಸಿ.ಎಂ.ಟೌನ್ಶಿಪ್ ಶಾಖೆ ಪ್ರಾರಂಭವಾಗಿದ್ದು, ಶ್ರೀಮತಿ ಸುಜಾತ ಬಸವರಾಜ್ ಶಾಖೆಯ ಅಧ್ಯಕ್ಷರಾಗಿ ಅವಿರೋಧವಾಗಿ ನೇಮಕಗೊಂಡಿದ್ದಾರೆ ಎಂದು ಕಲಾಕುಂಚದ ಅಧ್ಯಕ್ಷ ಕೆ.ಹೆಚ್.ಮಂಜುನಾಥ್ ತಿಳಿಸಿದ್ದಾರೆ.
ಬಿಜೆಪಿ ದಕ್ಷಿಣ ರೈತ ಮೋರ್ಚಾ ಅಧ್ಯಕ್ಷರಾಗಿ ಮಂಜುನಾಥ್
ಜೆಪಿ ದಾವಣಗೆರೆ ದಕ್ಷಿಣ ರೈತ ಮೋರ್ಚಾ ಅಧ್ಯಕ್ಷರಾಗಿ ಎ.ಎಂ. ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾಗಿ ಶಿವಮೂರ್ತೆಪ್ಪ ಹೊಸಹಳ್ಳಿ, ಕೆ.ಬಿ. ಹನುಮಂತಪ್ಪ ಜರೀಕಟ್ಟೆ ನೇಮಕಗೊಂಡಿದ್ದಾರೆ.
ವಾಲ್ಮೀಕಿ ಜಾತ್ರೆಯ ಸಂಯೋಜಕರಾಗಿ ಹೊದಿಗೆರೆ ರಮೇಶ್
ರಾಜನಹಳ್ಳಿಯಲ್ಲಿ ನಡೆಯಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಂಯೋಜಕರನ್ನಾಗಿ ಚನ್ನಗಿರಿ ತಾಲ್ಲೂಕಿನ ಮುಖಂಡ ಹೊದಿಗೆರೆ ರಮೇಶ್ ಅವರನ್ನು ನೇಮಿಸಲಾಗಿದೆ.
ಹಿರಿಯ ಪತ್ರಕರ್ತರ ಸಂಘಕ್ಕೆ ಆಯ್ಕೆ
ಜಿಲ್ಲೆಯಲ್ಲಿ ನೂತನ ವಾಗಿ ಅಸ್ತಿತ್ವಕ್ಕೆ ತರಲಾಗಿರುವ ಹಿರಿಯ ಪತ್ರ ಕರ್ತರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ರಾಗಿ ಬಕ್ಕೇಶ್ ನಾಗನೂರು ಮತ್ತು ಖಜಾಂಚಿ ಯಾಗಿ ಪಿ. ಸೀತಾರಾಂ ಆಯ್ಕೆಯಾಗಿದ್ದಾರೆ.
ಹಿರಿಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ರಚನೆ
ಶ್ರೀ ಜಯದೇವ ವೃತ್ತದ ಬಳಿಯ ಕಾರಿಗನೂರು ಪರಮೇಶ್ವರಪ್ಪ ಕಾಂಪ್ಲೆಕ್ಸ್ ನಲ್ಲಿ ಹಿರಿಯ ಪತ್ರಕರ್ತರಾದ ಎಸ್.ಬಿ.ಜಿನದತ್ತ ಹಾಗೂ ಬಕ್ಕೇಶ್ ನಾಗನೂರು ಅವರುಗಳ ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಹಿರಿಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವನ್ನು ಅಸ್ತಿತ್ವಕ್ಕೆ ತರಲಾಯಿತು.

ನಗರದಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಮಹಾಂತೇಶ ಪಾಟೀಲ್
ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷರೂ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಮಹಾಂತೇಶ ಪಾಟೀಲ್ ನಗರಕ್ಕೆ ಆಗಮಿಸಿದ್ದರು.
ಹರಿಹರ ಬಿಜೆಪಿ ಮಂಡಲ, ಮೋರ್ಚಾಗೆ ನೇಮಕ
ಹರಿಹರದ ಬಿಜೆಪಿ ಮಂಡಲದ ಅಧ್ಯಕ್ಷ ಅಜಿತ್ ಸಾವಂತ್ ರವರ ಆದೇಶದ ಮೆರೆಗೆ ಮಂಡಲ ಸಮಿತಿ ಹಾಗೂ ಮೋರ್ಚಾ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.
ದಿದ್ದಿಗೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಾಕಮ್ಮ ಅಧ್ಯಕ್ಷೆ
ಜಗಳೂರು ತಾಲ್ಲೂಕಿನ ದಿದ್ದಿಗೆ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇಂದು ನಡೆದ ಚುನಾವಣೆಯಲ್ಲಿ ಶ್ರೀಮತಿ ಸಾಕಮ್ಮ ಬಣಕಾರ ಸಿದ್ದಪ್ಪ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಿ.ಎಂ. ಮರುಳಸಿದ್ದಯ್ಯ ತಿಳಿಸಿದ್ದಾರೆ.
ಜಿಲ್ಲಾ ಸರ್ಕಾರಿ ಪಡಿತರ ವಿತರಕರ ಸಂಘಕ್ಕೆ ನೇಮಕ
ಜಿಲ್ಲಾ ಸರ್ಕಾರಿ ಪಡಿತರ ವಿತರಕರ ಸಂಘದ ಉಪಾಧ್ಯ ಕ್ಷರನ್ನಾಗಿ ಈ. ಬಸವರಾಜ್ ಮತ್ತು ಸಹ ಕಾರ್ಯದರ್ಶಿಯನ್ನಾಗಿ ಎಂ.ಎನ್. ನಾಗರಾಜ್ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಜಿ.ಡಿ. ಗುರುಸ್ವಾಮಿ ತಿಳಿಸಿದ್ದಾರೆ.
ಕಾಡಾ ಸಮಿತಿ ಸದಸ್ಯರಾಗಿ ಬಿ.ಎಂ. ಷಣ್ಮುಖಯ್ಯ ನೇಮಕ
ಕಾಡಾ ಸಮಿತಿಯ ನೂತನ ಸದಸ್ಯರಾಗಿ ಕರ್ನಾಟಕ ಸರ್ಕಾರದಿಂದ ನೇಮಕಗೊಂಡ ಆವರಗೊಳ್ಳದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರೂ, ರೈತ ಮುಖಂಡರೂ ಆದ ಬಿ. ಎಂ. ಷಣ್ಮಖಯ್ಯ ಅವರನ್ನು ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಗಳು ಸನ್ಮಾನಿಸಿದರು.
ಜಾನಪದ ಅಕಾಡೆಮಿ ಸಹ ಸದಸ್ಯರಾಗಿ ರುದ್ರಾಕ್ಷಿ ಬಾಯಿ
ಸಿದ್ದಗಂಗಾ ಶಾಲೆಯ ಸಂಗೀತ ಶಿಕ್ಷಕಿ, ಜಾನಪದ ಕಲಾವಿದೆ ಶ್ರೀಮತಿ ಸಿ.ಕೆ. ರುದ್ರಾಕ್ಷಿ ಬಾಯಿ ಅವರು ಕರ್ನಾಟಕ ಜಾನಪದ ಅಕಾಡೆಮಿ ಸಹ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಎನ್.ಟಿ.ಪಿ. ಶ್ರೀನಿತ್ಯ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ಇಂದ್ರಪ್ಪ
ಎನ್.ಟಿ.ಪಿ. ಶ್ರೀನಿತ್ಯ ಸೌಹಾರ್ದ ಕೋ-ಆಪರೇಟಿವ್ ಅಧ್ಯಕ್ಷರಾಗಿ ಹೆಚ್. ಇಂದ್ರಪ್ಪ, ಉಪಾಧ್ಯಕ್ಷರಾಗಿ ಎ. ಪರಮೇಶ್ವರಪ್ಪ ಅವರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.
ವಕೀಲರ ಸಂಘದ ಅಧ್ಯಕ್ಷರಾಗಿ ಬುರಡಿಕಟ್ಟಿ, ಉಪಾಧ್ಯಕ್ಷರಾಗಿ ಮಡಿವಾಳರ ಆಯ್ಕೆ
ರಾಣೆಬೆನ್ನೂರು : ಇಲ್ಲಿನ ವಕೀಲರ ಸಂಘದ ಚುನಾವಣೆಯು ಬಿರುಸಿನಿಂದ ನಿನ್ನೆ ನಡೆಯಿತು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಗೊ.ರು.ಚ
ರಾಣೆಬೆನ್ನೂರು : ಇಲ್ಲಿನ ವಕೀಲರ ಸಂಘದ ಚುನಾವಣೆಯು ಬಿರುಸಿನಿಂದ ನಿನ್ನೆ ನಡೆಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಸಿದ್ದಪ್ಪ ಸಂಗಣ್ಣನವರ್
ಮಲೇಬೆನ್ನೂರು : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಗೋವಿನಹಾಳ್ ಸ.ಹಿ.ಪ್ರಾ ಶಾಲೆಯ ಶಿಕ್ಷಕ ಸಿದ್ದಪ್ಪ ಸಂಗಣ್ಣನವರ್ ನೇಮಕಗೊಂಡಿದ್ದಾರೆ. ಅವರು ಹರಿಹರ ತಾ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾಗಿಯೂ ಕಳೆದ ವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.
ಜಿ.ಪಂ. ನೂತನ ಅಧ್ಯಕ್ಷರಾಗಿ ಕೆ.ವಿ. ಶಾಂತಕುಮಾರಿ ಆಯ್ಕೆ
ಜಿಲ್ಲಾ ಪಂಚಾಯತಿ ನೂತನ ಅಧ್ಯಕ್ಷರಾಗಿ ಜಗಳೂರು ತಾಲ್ಲೂಕು ದೊಣ್ಣೆಹಳ್ಳಿ ಕ್ಷೇತ್ರದ ಜಿ.ಪಂ. ಸದಸ್ಯೆ ಕೆ.ವಿ. ಶಾಂತ ಕುಮಾರಿ ಆಯ್ಕೆಯಾದರು.
ಹರಿಹರ ತಾ. ಶಿಕ್ಷಕರ ಸಂಘಕ್ಕೆ ಆಯ್ಕೆ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹರಿಹರ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಧೂಳೆಹೊಳೆ ಸ.ಹಿ. ಪ್ರಾ. ಶಾಲೆಯ ಶಿಕ್ಷಕ ಶರಣಕುಮಾರ್ ಹೆಗಡೆ, ಖಜಾಂಚಿಯಾಗಿ ಹಳ್ಳಿಹಾಳ್ ಸ.ಹಿ.ಪ್ರಾ. ಶಾಲೆಯ ಶಿಕ್ಷಕಿ ಶ್ರೀಮತಿ ವಿನೋದ ಅವರು ಆಯ್ಕೆಯಾಗಿದ್ದಾರೆ.
ಹರಿಹರ ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹೆಚ್.ಚಂದ್ರಪ್ಪ
ಹರಿಹರ : ರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ದೊಗ್ಗಳ್ಳಿ ಸ.ಹಿ.ಪ್ರಾ ಶಾಲೆಯ ಶಿಕ್ಷಕ ಹೆಚ್.ಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕುಂಬಳೂರು ಗ್ರಾ.ಪಂ.ಗೆ ನಾಲ್ವರು ಅವಿರೋಧ ಆಯ್ಕೆ
ಕುಂಬಳೂರು ಗ್ರಾಮ ಪಂಚಾಯಿತಿ ನ ಒಟ್ಟು 18 ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 14 ಸ್ಥಾನಗಳಿಗೆ ಇದೇ ದಿನಾಂಕ 27 ರಂದು ಚುನಾವಣೆ ನಡೆಯಲಿದೆ.
ದಿಬ್ಬದಹಳ್ಳಿಯಿಂದ ಅವಿರೋಧ ಆಯ್ಕೆ
ಮಲೇಬೆನ್ನೂರು : ಹಾಲಿ ವಾಣ ಗ್ರಾಮ ಪಂಚಾಯ್ತಿಗೆ ದಿಬ್ಬದಹಳ್ಳಿ ಗ್ರಾಮದ ಸಾಮಾನ್ಯ ಕ್ಷೇತ್ರದಿಂದ ಡಿ.ಈ.ಓಂಕಾರಪ್ಪ ಅವರು ಅವಿ ರೋಧವಾಗಿ ಆಯ್ಕೆಯಾಗಿದ್ದಾರೆ.
ಯಲವಟ್ಟಿ ಗ್ರಾ.ಪಂ ಗೆ ನಾಲ್ವರು ಅವಿರೋಧ ಆಯ್ಕೆ
ಮಲೇಬೆನ್ನೂರು : ಯಲವಟ್ಟಿ ಗ್ರಾಮ ಪಂಚಾಯ್ತಿಯ ಒಟ್ಟು 13 ಸ್ಥಾನಗಳಲ್ಲಿ ಕಮಲಾಪುರ ಗ್ರಾಮದ ಎಲ್ಲಾ 4ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಉಳಿದ 9 ಸ್ಥಾನಗಳಿಗೆ 27ರಂದು ಚುನಾವಣೆ ಜರುಗಲಿದೆ.

ಬ್ರಾಹ್ಮಣ ಸಮಾಜದ ಅಧ್ಯಕ್ಷರಾಗಿ ಸತ್ಯನಾರಾಯಣ ರಾವ್ ಆಯ್ಕೆ
ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಎಸ್.ಪಿ. ಸತ್ಯನಾರಾಯಣರಾವ್, ಉಪಾಧ್ಯಕ್ಷರುಗಳಾಗಿ ಮೋತಿ ಆರ್. ಪರಮೇಶ್ವರರಾವ್, ಸಿ.ಕೆ. ಆನಂದತೀರ್ಥಾಚಾರ್ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.

ನ್ಯಾಮತಿ ಕಾಂಗ್ರೆಸ್ಗೆ ವಾಗೀಶ್ ಅಧ್ಯಕ್ಷ
ನ್ಯಾಮತಿ ತಾಲ್ಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ನ್ಯಾಮತಿ ನುಚ್ಚಿನ ವಾಗೀಶ್ ಆಯ್ಕೆಯಾಗಿದ್ದಾರೆ.
ಬಿಜೆಪಿ ಪ್ರಬುದ್ಧರ ವೇದಿಕೆ ಸದಸ್ಯರಾಗಿ ಕೆ.ಎನ್.ಓಂಕಾರಪ್ಪ
ಬಿಜೆಪಿ ಪ್ರಬು ದ್ಧರ ವೇದಿ ಕೆಯ ರಾಜ್ಯ ಸಮಿತಿ ಸದಸ್ಯರಾಗಿ ನಗರದ ಬಿಜೆಪಿ ಹಿರಿಯ ಮುಖಂಡರೂ ಆದ ಚೇತನ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎನ್. ಓಂಕಾರಪ್ಪ ನೇಮಕ ಗೊಂಡಿದ್ದಾರೆ. ಈ ಸಂಬಂಧ ವೇದಿ ಕೆಯ ರಾಜ್ಯ ಸಂಚಾಲಕ ರವಿ ಮತ್ತು ಸಹ ಸಂಚಾಲಕ ಡಾ. ಪ್ರಕಾಶ್ ಆದೇಶ ಹೊರಡಿಸಿದ್ದಾರೆ.
ವಿವೇಕಾನಂದ ಬಡಾವಣೆ ನಾಗರಿಕ ಸಮಿತಿಗೆ ಆಯ್ಕೆ
ಸ್ವಾಮಿ ವಿವೇಕಾನಂದ ಬಡಾವ ಣೆಯ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿ ಉಮೇಶ್ ಎನ್. ಪಾಟೀಲ್ ಆಯ್ಕೆಯಾಗಿದ್ದಾರೆ.
ಬಿಜೆಪಿ ಕಾನೂನು ಪ್ರಕೋಷ್ಠದ ಸದಸ್ಯರಾಗಿ ವಕೀಲ ಎ.ಸಿ. ರಾಘವೇಂದ್ರ ನೇಮಕ
ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರಾಗಿ ನಗರದ ವಕೀಲ ಎ.ಸಿ. ರಾಘವೇಂದ್ರ ಅವರು ನೇಮಕಗೊಂಡಿರುವುದಾಗಿ ಪ್ರಕೋ ಷ್ಠದ ಸಂಚಾಲಕ ಎಸ್.ಎಸ್. ವಿಟ್ಟಲಕೋಡ್ ತಿಳಿಸಿದ್ದಾರೆ.
ನಗರದ ಕಲಾ ಪ್ರಕಾಶ ವೃಂದಕ್ಕೆ ರಮಣಲಾಲ್ ಸಂಘವಿ ಅಧ್ಯಕ್ಷ ಕಾರ್ಯದರ್ಶಿಯಾಗಿ ಎಸ್.ಕೆ. ವೀರಣ್ಣ
ದಾವಣಗೆರೆ - ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಸಹಯೋಗದಲ್ಲಿರುವ ಸಹಕಾರ ಭವನ - ಕಲಾ ಪ್ರಕಾಶ ವೃಂದದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರಮಣ ಲಾಲ್ ಸಂಘವಿ, ಕಾರ್ಯದರ್ಶಿಯಾಗಿ ಎಸ್.ಕೆ. ವೀರಣ್ಣ, ಉಪಾಧ್ಯಕ್ಷರಾಗಿ ಪೆ.ನಾ. ಗೋಪಾಲರಾವ್ ಆಯ್ಕೆಯಾಗಿದ್ದಾರೆ.
ಖಾಸಗಿ ಶಾಲೆ ಒಕ್ಕೂಟಕ್ಕೆ ಮೈನುದ್ದೀನ್
ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟದ ಸಂಘಟನಾ ಕಾರ್ಯದರ್ಶಿಯಾಗಿ ಜೆ.ಜೆ. ಕಾನ್ವೆಂಟ್ ಪ್ರೌಢಶಾಲೆಯ ಕಾರ್ಯದರ್ಶಿ ಹೆಚ್.ಜೆ. ಮೈನುದ್ದೀನ್ ನೇಮಕಗೊಂಡಿದ್ದಾರೆ.