ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯಲ್ಲಿ ಈ ಹಿಂದೆ ಇಬ್ಬರು ನಿರ್ದೇಶಕರು ನಿಧನರಾದ ಹಿನ್ನೆಲೆಯಲ್ಲಿ, ಆ ನಿರ್ದೇಶಕರ ತೆರವಾದ ಸ್ಥಾನಗಳಿಗೆ ಬುಧವಾರದಂದು ಕಾರ್ಯಕಾರಿಣಿ ಸಭೆಯಲ್ಲಿ ನೂತನವಾಗಿ ನಿರ್ದೇಶಕರಾದ ಪಿ. ಹನುಮಂತಪ್ಪ, ಹಿದಾಯಿತ್ ಇವರುಗಳನ್ನು ನೇಮಕ ಮಾಡಿ ಸಭೆಯಲ್ಲಿ ತೀರ್ಮಾನಿಸಲಾಯಿತು
ಆಯ್ಕೆ-ನೇಮಕ

ಹರಿಹರದ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಚಂದ್ರಪ್ಪ ಮಡಿವಾಳ
ಹರಿಹರ : ನಗರದ ಪಿ.ಎಲ್.ಡಿ. ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಹೆಚ್.ಚಂದ್ರಪ್ಪ ಮಡಿವಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಬಿ.ರಮೇಶ್ ಘೋಷಿಸಿದರು.

ಜಿಗಳಿ ಗ್ರಾ.ಪಂ. ಅಧ್ಯಕ್ಷರಾಗಿ ರೇಣುಕಮ್ಮ
ಮಲೇಬೆನ್ನೂರು : ಜಿಗಳಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಜಿ. ಬೇವಿನಹಳ್ಳಿಯ ಶ್ರೀಮತಿ ರೇಣುಕಮ್ಮ ಮಡಿವಾಳರ ರಂಗಪ್ಪ ಮತ್ತು ಉಪಾಧ್ಯಕ್ಷ ರಾಗಿ ಜಿಗಳಿಯ ಡಿ.ಎಂ. ಹರೀಶ್ ಅವರು ಆಯ್ಕೆಯಾಗಿದ್ದಾರೆ.
ಕಲಾಕುಂಚ ಎಲೆಬೇತೂರು ಶಾಖೆ ಅಧ್ಯಕ್ಷರಾಗಿ ಡಾ. ನಿರ್ಮಲಾ
ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಎಲೆಬೇತೂರಿನಲ್ಲಿ ಶಾಖೆಯ ಅಧ್ಯಕ್ಷ ರಾಗಿ ಡಾ. ನಿರ್ಮಲಾ ಕುಲಕರ್ಣಿ ಅವರು ನೇಮಕಗೊಂಡಿದ್ದಾರೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಿ.ಜಿ.ಲೋಕೇಶ್ ತಿಳಿಸಿದ್ದಾರೆ.

ಜಗಳೂರು ಟೌನ್ ಕೋ- ಸೊಸೈಟಿ ಅಧ್ಯಕ್ಷರಾಗಿ ಶಿವನಗೌಡ ಆಯ್ಕೆ
ಜಗಳೂರು : ಟೌನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ ನೂತನ ಅಧ್ಯಕ್ಷರಾಗಿ ಜೆ.ಎನ್. ಶಿವನಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ವೀರಶೈವ ಪಂಚಮಸಾಲಿ ಸಮಾಜಕ್ಕೆ ನೇಮಕ
ಹೊನ್ನಾಳಿ : ವೀರಶೈವ ಪಂಚಮ ಸಾಲಿ ಸಮಾಜದ ರಾಜ್ಯ ಉಪಾಧ್ಯಕ್ಷರನ್ನಾಗಿ ಹೊನ್ನಾಳಿ ಪಟ್ಟಣಶೆಟ್ಟಿ ಪರ ಮೇಶ್ ನೇಮಕಗೊಂಡಿದ್ದಾರೆ ಎಂದು ವೀರಶೈವ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಜಿ.ಪಿ.ಪಾಟೀಲ್ ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಹಾಗೂ ಯೂತ್ ಫೆಸ್ಟಿವಲ್ಗೆ ಆಯ್ಕೆ
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಸ್ವಯಂ ಸೇವಕರಾದ ಕುಮಾರಿ ಶ್ವೇತಾ ನಂದಿಹಳ್ಳಿ ಇವರು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಹಾಗೂ ಕುಮಾರ ಸುನಿಲ್ ಘಟರೆಡ್ಡಿ ಬಾಗಲಕೋಟೆಯಲ್ಲಿ ನಡೆದ ರಾಜ್ಯಮಟ್ಟದ ಯೂತ್ ಫೆಸ್ಟಿವಲ್ ನಲ್ಲಿ ಭಾಗವಹಿಸಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದಾರೆ.
ಹೊನ್ನೂರು ಕೃಷಿ ಸಂಘಕ್ಕೆ ಆಯ್ಕೆ
ಹೊನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಗಿ ವಿ.ಎಸ್. ವೀರಭದ್ರಪ್ಪ, ಉಪಾಧ್ಯಕ್ಷರಾಗಿ ಜಯಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ.
ವರದಿಗಾರರ ಕೂಟದ ಅಧ್ಯಕ್ಷರಾಗಿ ಕೆ. ಏಕಾಂತಪ್ಪ ಆಯ್ಕೆ
ದಾವಣಗೆರೆ ವರದಿಗಾರರ ಕೂಟದ ನೂತನ ಅಧ್ಯಕ್ಷರಾಗಿ ಕೆ. ಏಕಾಂತಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ವರದಿಗಾರರ ಕೂಟ ದಲ್ಲಿ ನಿಕಟಪೂರ್ವ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರಾಗಿ ಕೆ. ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಡಾ. ಸಿ. ವರದರಾಜ್, ಖಜಾಂಚಿಯಾಗಿ ಮಧು ನಾಗರಾಜ್ ಕುಂದುವಾಡ ಅವಿರೋಧ ಆಯ್ಕೆ ಯಾಗಿದ್ದಾರೆ.

ಉಕ್ಕಡಗಾತ್ರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಜಯಮ್ಮ
ಮಲೇಬೆನ್ನೂರು : ಉಕ್ಕಡಗಾತ್ರಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಗೋವಿನಹಾಳ್ ಗ್ರಾಮದ ಶ್ರೀಮತಿ ಜಯಮ್ಮ ಕೋಂ ಎ.ಪಿ.ರಂಗಪ್ಪ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಷ್ಟ್ರಮಟ್ಟಕ್ಕೆ ಕುಸ್ತಿ ಪಟುಗಳ ಆಯ್ಕೆ
ಹರಿಯಾಣ ರಾಜ್ಯದ ಚಂಡಿಘಡದಲ್ಲಿ ಇದೇ ದಿನಾಂಕ 5 ರಿಂದ 8 ರವರೆಗೆ ಅಖಿಲ ಭಾರತ ನಾಗರಿಕ ಸೇವಾ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಈ ಸ್ಪರ್ಧೆಗೆ ನಗರದ ದಾವಣಗೆರೆ ನ್ಯಾಯಾಂಗ ಇಲಾಖೆಯ ಭೂಲಕ್ಷ್ಮಿ 59 ಕೆ.ಜಿ. ವಿಭಾಗ, ಟಿ.ಬಿ.ಸುರೇಶ್ 76 ಕೆ.ಜಿ. ವಿಭಾಗ ಹಾಗೂ ಇ.ಎಸ್.ಐ. ಆಸ್ಪತ್ರೆಯ ಶುಶ್ರೂಷಕಿ ಪಿ.ಎಂ. ಕವಿತ 57 ಕೆ.ಜಿ. ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸುವರು .
ವೃತ್ತಿ ಶಿಕ್ಷಕರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷರಾಗಿ ಎನ್.ವಿ. ಸತೀಶ್ ಆಯ್ಕೆ
ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ದಾವಣಗೆರೆ ಜಿಲ್ಲಾ ಶಾಖೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ರಾಘವೇಂದ್ರ ಶೆಟ್ಟಿ
ಹರಪನಹಳ್ಳಿ : ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ತಾಲ್ಲೂಕಿನ ಬಿಜೆಪಿ ಮುಖಂಡ ಕೆ. ರಾಘವೇಂದ್ರ ಶೆಟ್ಟಿ ಅವರು ನಾಮ ನಿರ್ದೇಶಕ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಕರವೇ ಮಹಿಳಾ ಜಿಲ್ಲಾ ಘಟಕದ ಗೌರವಾಧ್ಯಕ್ಷರಾಗಿ ಅಮೀರ ಬಾನು
ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಜಿಲ್ಲಾ ಗೌರವಾಧ್ಯಕ್ಷರಾಗಿ ಶ್ರೀಮತಿ ಅಮೀರ ಬಾನು ಅವರನ್ನು ಆಯ್ಕೆ ಮಾಡಲಾಯಿತು.
ಟೈಲ್ಸ್ ಅಂಗಡಿಯಲ್ಲಿ ಹಾಡಹಗಲೇ ಕಳ್ಳತನ
ಅಂಗಡಿ ಮಾಲೀಕ ಟೀ ಕುಡಿಯಲು ತೆರಳಿದ್ದಾಗ ಅಪರಿಚಿತ ವ್ಯಕ್ತಿ 10 ಸಾವಿರ ಕಳ್ಳತನ ಮಾಡಿಕೊಂಡು ಹೋದ ಘಟನೆ ನಗರದ ಹದಡಿ ರಸ್ತೆಯಲ್ಲಿರುವ ಟೈಲ್ಸ್ ಅಂಗಡಿಯಲ್ಲಿ ಹಾಡಹಗಲೇ ನಡೆದಿದೆ.
ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ಡಾ. ಹೊಂಬೇಶ್ ಆಯ್ಕೆ
ನಗರದ ಇಂಡಿಯನ್ ಡೆಂಟಲ್ ಅಸೋಸಿಯೇಷನ್ನಿನ ಸಾಮಾನ್ಯ ವಾರ್ಷಿಕ ಸಭೆ ಮೊನ್ನೆ ನಡೆದ ಸಂದರ್ಭದಲ್ಲಿ ಅಸೋಸಿಯೇಷನ್ನಿನ ಅಧ್ಯಕ್ಷರಾಗಿ ಡಾ|| ಎಂ.ಎನ್. ಹೊಂಬೇಶ್, ಕಾರ್ಯದರ್ಶಿಯಾಗಿ ಡಾ|| ಬಿ.ಜಿ. ಪ್ರಸನ್ನ, ಖಜಾಂಚಿಯಾಗಿ ಡಾ|| ಬಿ. ಪ್ರವೀಣ್ ಆಯ್ಕೆಯಾಗಿದ್ದಾರೆ.

ಅರಬಗಟ್ಟೆ ಗ್ರಾಪಂ ಅಧ್ಯಕ್ಷರಾಗಿ ಅನಿತಾ
ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ ಗ್ರಾಪಂ ಅಧ್ಯಕ್ಷೆಯಾಗಿ ಡಿ.ಕೆ. ಅನಿತಾ ಕರಿಬಸಪ್ಪ, ಉಪಾಧ್ಯಕ್ಷೆಯಾಗಿ ರೇಣುಕಮ್ಮ ಚಿಕ್ಕಪ್ಪ ಅವರುಗಳು ಅವಿರೋಧವಾಗಿ ಆಯ್ಕೆಯಾದರು. ಜಿ.ಪಂ. ಮಾಜಿ ಸದಸ್ಯ ಎಂ.ಆರ್. ಮಹೇಶ್ ನೂತನ ಅಧ್ಯಕ್ಷ - ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಮಳಲ್ಕೆರೆ ಸಹಕಾರಕ್ಕೆ ವೆಂಕಟೇಶ್ ಅಧ್ಯಕ್ಷ
ತಾಲ್ಲೂಕಿನ ಮಳಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಹೆಚ್.ವೆಂಕಟೇಶ್, ಉಪಾಧ್ಯಕ್ಷರಾಗಿ ಶ್ರೀಮತಿ ಎಂ.ಜಿ.ಗೀತಾ ಅವರುಗಳು ಅವಿರೋಧ ಆಯ್ಕೆಯಾಗಿದ್ದಾರೆ.
ಶಿವ ಸಹಕಾರಿ ಬ್ಯಾಂಕಿಗೆ ಡಾ. ಕುರ್ಕಿ, ನಂಜನಗೌಡರು
ನಗರದ ಪ್ರತಿಷ್ಠಿತ ಶಿವ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಯ ವೃತ್ತಿಪರ ನಿರ್ದೇಶಕರಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಮತ್ತು ಬ್ಯಾಂಕಿನ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಹರಪನಹಳ್ಳಿಯ ಹಿರಿಯ ಲೆಕ್ಕ ಪರಿಶೋಧಕ ಜಿ.ನಂಜನಗೌಡರು ನೇಮಕಗೊಂಡಿದ್ದಾರೆ.

ಅಡವಿಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಮುಮ್ತಾಜ್ ಬೀ
ಹರಪನಹಳ್ಳಿ ತಾಲ್ಲೂಕಿನ ಅಡವಿಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಮುಮ್ತಾಜ್ ಬೀ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ರಾಷ್ಟ್ರೀಯ ಗೋ ಸೇವಾ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ರಾಷ್ಟ್ರೀಯ ಗೋ ಸೇವಾ ಸಂಘ ಕರ್ನಾಟಕದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎಂ.ಡಿ. ಚೈನ್ರಾಜ್, ಉಪಾಧ್ಯಕ್ಷರಾಗಿ ಕಡ್ಲೆಬಾಳು ಬಸವರಾಜ್, ಕಾಶೀಪುರ ಸಿದ್ದೇಶ್, ಸಚಿವರಾಗಿ ಸುರೇಶ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಕೆ.ದೇವರಾಜ್, ಕಾರ್ಯದರ್ಶಿಗಳಾಗಿ ರುದ್ರೇಶ್ ತೆಲಗಿ, ಕೆ.ಜಿ.ಶರತ್, ಪ್ರಭು ಗೊಲ್ಲರಹಳ್ಳಿ, ಖಜಾಂಚಿಯಾಗಿ ಜಿ.ಎಸ್.ಶ್ಯಾಮ್, ಲೆಕ್ಕ ಪರಿಶೋಧಕರಾಗಿ ಕೆ.ಎಸ್.ಕಲ್ಲಪ್ಪ, ಮಾಧ್ಯಮ ಉಸ್ತುವಾರಿಯಾಗಿ ಆರ್.ಎಲ್.ಯೋಗೇಶ, ವಕ್ತಾರರಾಗಿ ಶೇಖರ್ ನಾಯ್ಕ ನೇಮಕಗೊಂಡಿದ್ದಾರೆ.
ವಾಸವಿ ಕ್ಲಬ್ ದೇವನಗರಿ ಅಧ್ಯಕ್ಷರಾಗಿ ಕೆ.ವಿ.ರಂಗನಾಥ್
ವಾಸವಿ ಕ್ಲಬ್ ದೇವನಗರಿಗೆ 2022ನೇ ಸಾಲಿನ ಅಧ್ಯಕ್ಷರಾಗಿ ಕೆ.ವಿ.ರಂಗನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಬಿ.ಸಿ.ವರಮಹಾಲಕ್ಷ್ಮಿ, ಖಜಾಂಚಿಯಾಗಿ ಪಿ.ಎಸ್. ರವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶಿವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ್ ಪುನರಾಯ್ಕೆ
ಮಲೇಬೆನ್ನೂರು : ಇಲ್ಲಿನ ಪ್ರತಿಷ್ಠಿತ ಶಿವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಡಾ. ಬಿ. ಚಂದ್ರಶೇಖರ್, ಉಪಾಧ್ಯಕ್ಷರಾಗಿ ಯಲವಟ್ಟಿ ಆಂಜನೇಯ ಅವರು ಸೋಮವಾರ ನಡೆದ ಚುನಾವಣೆಯಲ್ಲಿ 2ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸುವರ್ಣ ಆರುಂಡಿ ವಿಜಯನಗರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ
ಹರಪನಹಳ್ಳಿ : ನೂತನ ವಿಜಯನಗರ ಜಿಲ್ಲೆಯ ಬಿಜೆಪಿ ಮಹಿಳಾ ಮೋರ್ಚಾಕ್ಕೆ ಸುವರ್ಣ ಆರುಂಡಿ ನಾಗರಾಜ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ನಂದಿ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ಜಿಗಳಿ ಇಂದೂಧರ್
ಮಲೇಬೆನ್ನೂರು : ಇಲ್ಲಿನ ಶ್ರೀ ನಂದಿ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ಜಿಗಳಿಯ ಇಂದೂಧರ್ ಎನ್. ರುದ್ರೇಗೌಡ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಯಲವಟ್ಟಿ ಗ್ರಾ.ಪಂ. ಅಧ್ಯಕ್ಷರಾಗಿ ರಮೇಶ್
ಮಲೇಬೆನ್ನೂರು : ಯಲವಟ್ಟಿ ಗ್ರಾ.ಪಂ. ಅಧ್ಯಕ್ಷರಾಗಿ ಕಮಲಾಪುರದ ಕೆ.ಬಿ.ರಮೇಶ್ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ಗೆ ರಾಘವೇಂದ್ರ ನಾಯರಿ ಜಂಟಿ ಕಾರ್ಯದರ್ಶಿ
ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಜಂಟಿ ಕಾರ್ಯದರ್ಶಿಯಾಗಿ ನಗರದ ಕೆ.ರಾಘವೇಂದ್ರ ನಾಯರಿ ನೇಮಕಗೊಂಡಿದ್ದಾರೆ.

ಲೋಲಾಕ್ಷಮ್ಮ ಬಿಸ್ತುವಳ್ಳಿ ಗ್ರಾ.ಪಂ. ಅಧ್ಯಕ್ಷೆ
ಜಗಳೂರು, ಜ.11- ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಲೊಲಾಕ್ಷಮ್ಮ, ಉಪಾಧ್ಯಕ್ಷರಾಗಿ ಗೀತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾಗಿ ಕುಸುಮಾ ಲೋಕೇಶ್
ಜಿಲ್ಲಾ ಕದಳಿ ಮಹಿಳಾ ವೇದಿಕೆ ಗೌರವಾಧ್ಯಕ್ಷರಾಗಿ ಸಾವಿತ್ರಮ್ಮ ಸಿದ್ದಪ್ಪ, ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕುಸುಮಾ ಲೋಕೇಶ್, ಉಪಾಧ್ಯಕ್ಷರಾಗಿ ನಿರ್ಮಲ ಶಿವಕುಮಾರ್, ಕಾರ್ಯ ದರ್ಶಿ ಯಾಗಿ ಚಂದ್ರಿಕಾ ಮಂಜುನಾಥ್, ಖಜಾಂಚಿ ಯಾಗಿ ವಿಜಯಲಕ್ಷ್ಮಿಬಸವರಾಜ್, ಸಹ ಕಾರ್ಯ ದರ್ಶಿಯಾಗಿ ವಾಣಿ ರಾಜ್ ಆಯ್ಕೆಯಾಗಿದ್ದಾರೆ.

ಜಿಗಳಿ ಗ್ರಾ.ಪಂ.ಅಧ್ಯಕ್ಷರಾಗಿ ರೇಣುಕಾ ನಾಗರಾಜ್ ಉಪಾಧ್ಯಕ್ಷರಾಗಿ ಜಿ.ಬೇವಿನಹಳ್ಳಿಯ ದೇವರಾಜ್
ಮಲೇಬೆನ್ನೂರು : ಜಿಗಳಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ರೇಣುಕಾ ಪೂಜಾರ್ ನಾಗರಾಜ್ ಮತ್ತು ಉಪಾಧ್ಯಕ್ಷರಾಗಿ ಜಿ.ಬೇವಿನಹಳ್ಳಿಯ ಪಿ.ಹೆಚ್.ದೇವರಾಜ್ ಅವರು ಇಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.