ಬೆಲೆ ಏರಿಕೆ ತಡೆ ಮತ್ತು ನಿರುದ್ಯೋಗ ನಿವಾರಣೆ ಮಾಡುವಂತೆ ಒತ್ತಾಯಿಸಿ ಭಾರತ ಕಮ್ಯುನಿಷ್ಟ್ ಪಕ್ಷ (ಸಿಪಿಐ) ಮತ್ತು ಭಾರತ ಕಮ್ಯುನಿಸ್ಟ್ ಪಕ್ಷ (ಎಂ) (ಸಿಪಿಐಎಂ) ಪಕ್ಷಗಳು ಜಂಟಿಯಾಗಿ ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದವು.

ಮೂಲಭೂತ ಸೌಕರ್ಯಗಳ ಸರಿಪಡಿಸಲು ಆಗ್ರಹ
ನಗರ ಪಾಲಿಕೆ ವ್ಯಾಪ್ತಿಯ ಭಾಷಾ ನಗರದಲ್ಲಿನ ಚರಂಡಿ, ರಸ್ತೆ, ಬೀದಿ ದೀಪ ಸೇರಿದಂತೆ ಇನ್ನಿತರೆ ಮೂಲಭೂತ ಸೌಕರ್ಯಗಳ ಸರಿಪಡಿಸುವಂತೆ ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸ್ಥಳೀಯ ನಾಗರಿಕರು ನಗರದ ಅಕ್ತರ್ ರಜಾ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಉದ್ಯೋಗಾಕಾಂಕ್ಷಿಗಳಿಗೆ ಕನ್ನಡ ಕಲಿಕೆ ಅವಶ್ಯ
ಕನ್ನಡ ನಮ್ಮ ರಾಜ್ಯ ಭಾಷೆ, ಕಲಿಯಲು ಬಲು ಸುಲಭವಾದ ಭಾಷೆ. ನಾವು ಅದನ್ನು ಗೌರವಿಸುವುದರ ಜೊತೆಗೆ ನಾವು ಕನ್ನಡಿಗರು ಎಂದು ಹೆಮ್ಮೆ ಪಡ ಬೇಕು. ಕನ್ನಡದ ಪರ ಒಲವನ್ನು ಎಲ್ಲರೂ ಮೈ ಗೂಡಿಸಿಕೊಳ್ಳಬೇಕು, ಮುಖ್ಯವಾಗಿ ಉದ್ಯೋಗಾ ಕಾಂಕ್ಷಿಗಳು ಕನ್ನಡವನ್ನು ಅವಶ್ಯವಾಗಿ ಕಲಿಯ ಬೇಕು.

ವಿಶ್ವ ಲಿಪಿಗಳ ರಾಣಿ ಕನ್ನಡ ಭಾಷೆ
ಹರಪನಹಳ್ಳಿ : ಆಂಗ್ಲ ಭಾಷೆಗೆ ಸ್ವಂತ ಲಿಪಿಯಿಲ್ಲ. ಆದರೆ ಕನ್ನಡ ಭಾಷೆ ಪುರಾತನ ಭಾಷೆಯಾಗಿದ್ದು, ವಿಶ್ವ ಲಿಪಿಗಳ ರಾಣಿ ಕನ್ನಡ ಭಾಷೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ಹೇಳಿದರು.

ಖಾಲಿ ಇರುವ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಬಡ್ತಿಗಾಗಿ ಆಗ್ರಹ
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಯಿಂದ ಖಾಲಿ ಇರುವ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಬಡ್ತಿ ನೀಡಲು ಕ್ರಮವಹಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ,ಮನವಿ ಸಲ್ಲಿಸಲಾಯಿತು.

ಜ್ಞಾನಕ್ಕಿಂತ ಶ್ರೇಷ್ಠ ಜಗತ್ತಿನಲ್ಲಿ ಮತ್ತೊಂದಿಲ್ಲ
ಹರಿಹರ : ಜಗತ್ತಿನಲ್ಲಿ ಜ್ಞಾನಕ್ಕಿಂತ ಶ್ರೇಷ್ಠವಾದದ್ದು ಮತ್ತೊಂದಿಲ್ಲ. ವಿದ್ಯಾರ್ಥಿಗಳು ಹೆಚ್ಚು ಜ್ಞಾನ ಸಂಪಾದನೆ ಮಾಡಿದರೆ ಜಗತ್ತು ನಿಮಗೆ ಗೌರವ, ಸ್ಥಾನಮಾನವನ್ನು ನೀಡುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಮತ್ತು ತಿಪ್ಪೇರುದ್ರಸ್ವಾಮಿ ಪ್ರೌಢಶಾಲಾ ಮುಖ್ಯಶಿಕ್ಷಕ ಬಿ.ಬಿ. ರೇವಣ್ಣನಾಯ್ಕ್ ಅಭಿಪ್ರಾಯಪಟ್ಟರು.

ಹೊನ್ನಾಳಿ: ಬೀಜ-ಗೊಬ್ಬರದ ಕೊರತೆ ಇಲ್ಲ
ಹೊನ್ನಾಳಿ : ಅಸಾನಿ ಚಂಡಮಾರುತದ ಪರಿಣಾಮದಿಂದಾಗಿ ಹೊನ್ನಾಳಿ, ನ್ಯಾಮತಿ ತಾಲೂಕುಗಳ ವಿವಿಧ ಗ್ರಾಮಗಳಲ್ಲಿ ಭತ್ತ, ಅಡಕೆ, ಬಾಳೆ, ಮೆಕ್ಕೆಜೋಳ ಮತ್ತಿತರ ಬೆಳೆಗಳು ಹಾಳಾಗಿದ್ದು, ಹಾನಿ ಅನುಭವಿಸಿದ ರೈತರಿಗೆ ಸರಕಾರ ಶೀಘ್ರದಲ್ಲೇ ಪರಿಹಾರ ಒದಗಿಸಬೇಕು

ಒಡೆಯರ ಹತ್ತೂರು – ಗಂಗನಕೋಟೆ ಸಂಪರ್ಕ ಸೇತುವೆ ದುರಸ್ತಿಗೆ ರೇಣುಕಾಚಾರ್ಯ ಸೂಚನೆ
ನ್ಯಾಮತಿ : ಕಳೆದ ಕೆಲ ದಿನಗಳಿಂದ ಸುರಿದ ಬಾರೀ ಮಳೆಯಿಂದಾಗಿ ಒಡೆಯರಹತ್ತೂರು ಹಾಗೂ ಗಂಗನಕೋಟೆ ಸಂಪರ್ಕ ಸೇತುವೆ ಕೊಚ್ಚಿ ಹೋಗಿದ್ದು, ತಕ್ಷಣ ಸೇತುವೆ ದುರಸ್ತಿ ಮಾಡಿಸುವಂತೆ ಅಧಿಕಾರಿಗಳಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೂಚಿಸಿದರು.

ಶ್ರೀಧರ್ ಪಾಟೀಲ್ ಅಭಿಮಾನಿ ಬಳಗದಿಂದ ಅಂಬೇಡ್ಕರ್ ಪುತ್ಥಳಿ ನಿರ್ಮಾಣ
ಶ್ರೀಧರ್ ಪಾಟೀಲ್ ಅಭಿಮಾನಿ ಬಳಗದಿಂದ ಕೈಗೊಂಡಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ಇಂದು ಗುದ್ದಲಿ ಪೂಜೆ ನೆರವೇರಿಸುವ ಮುಖೇನ ಚಾಲನೆ ನೀಡಲಾಯಿತು.

ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿಗೆ ಸನ್ಮಾನ
ಹರಿಹರ : ನಗರದ ಶಿಕ್ಷಣ ಇಲಾಖೆ ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಹನಗವಾಡಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಕುಬೇಂದ್ರ ಮೆಕ್ಕಪ್ಪನವರ್ ಇವರಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಅರಣ್ಯ ರಕ್ಷಕ ಚಿಕ್ಕಬಾಸೂರು ವಿಕ್ರಂ ಸಾಧನೆಯ ಶಿಖರ !
ಹೊನ್ನಾಳಿ : ಸಾಮಾಜಿಕ ಅರಣ್ಯ ದಲ್ಲಿ ಅರಣ್ಯ ರಕ್ಷಕ ಹುದ್ದೆ ನಿರ್ವಹಿಸುತ್ತಿರುವ ವಿಕ್ರಂ ಅವರಿಗೆ ಚಾರಣ ಮಾಡುವುದು ಹವ್ಯಾಸ.ಈಗಾಗಲೇ ಮೌಂಟ್ ಎವರೆಸ್ಟ್, ಮೌಂಟ್ ಸತೋಪಂಥ್, ಆಫ್ರಿಕಾ ಖಂಡದ ಅತ್ಯಂತ ದೊಡ್ಡ ಶಿಖರ ಮೌಂಟ್ ಕಿಲಿಮಾಂಜರ್ ಏರಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ತಡೆಗೆ ಎಸ್ಎಫ್ಐ ಆಗ್ರಹ
ಹರಪನಹಳ್ಳಿ : ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ತಾಲ್ಲೂಕು ಸಮಿತಿ ಕಾರ್ಯಕರ್ತರು ಇಂದು ಇಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.

ಮಕ್ಕಳ ಸಂತೆ ಸ್ಫರ್ಧೋತ್ಸವ
ನಗರದ ಅನ್ವೇಷಕರು ಆರ್ಟ್ ಫೌಂಡೇಷನ್ ವತಿಯಿಂದ ಭಾನುವಾರ ನಗರದ ಗುರುಭವನದ ಎದುರು ಮಕ್ಕಳ ಸಂತೆ ಸ್ಪರ್ಧೋತ್ಸವ ಆಚರಿಸಲಾಯಿತು.

ಜೆಡಿಎಸ್ನಿಂದ 120 ಟಾರ್ಗೆಟ್
ಜನತಾ ಜಲಧಾರೆ ಮೂಲಕ ಜೆಡಿಎಸ್ ಪಕ್ಷವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಟಿ.ಅಸ್ಗರ್ ಹೇಳಿದರು.

ಸಮಾಜವನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ
ವೀರಶೈವ ಲಿಂಗಾಯತರೆಲ್ಲಾ ಒಂದಾದರೆ ಮಾತ್ರ ಶಕ್ತಿ ಪ್ರದರ್ಶನ ಮಾಡಲು ಸಾಧ್ಯವಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ತಮ್ಮ ಇಂಗಿತ ವ್ಯಕ್ತಪಡಿಸಿದರು.

ದಾವಣಗೆರೆ ರಾಜಧಾನಿಯಾಗಿದ್ದರೆ ನಾಡು ಹೆಚ್ಚು ಸುಭಿಕ್ಷ
ದಾವಣಗೆರೆ ರಾಜ್ಯದ ರಾಜಧಾನಿಯಾಗಿದ್ದರೆ ಈ ನಾಡು ಹೆಚ್ಚು ಸುಭಿಕ್ಷವಾಗಿರುತ್ತಿತ್ತು ಎಂದು ಲೇಖಕ, ಕನ್ನಡ ಪರ ಚಿಂತಕರೂ ಆದ ಕೆ.ರಾಜಕುಮಾರ್ ಅಭಿಪ್ರಾಯಿಸಿದರು.

ತಾಳಿ ಕಟ್ಟಿದ ನಂತರವೂ ತಾಳಿಕೊಂಡು ಬಾಳು ನಡೆಸಿ
ಚಿತ್ರದುರ್ಗ : ತಾಳಿ ಕಟ್ಟುವವರೆಗೆ ತಾಳಿ. ಕಟ್ಟಿದ ಮೇಲೂ ತಾಳಿಕೊಂಡು ನೆಮ್ಮದಿಯಿಂದ ಬಾಳು ನಡೆಸಬೇಕೆಂದು ಡಾ. ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.

ಕಳಪೆ ಬೀಜ; 148 ವರ್ತಕರ ಲೈಸನ್ಸ್ ರದ್ದು: ಪಾಟೀಲ್
ರಾಣೇಬೆನ್ನೂರು : ಬ್ಯಾಡಗಿಯಲ್ಲಿ ಕಳಪೆ ಬೀಜ ಮಾರಾಟ ಮಾಡುತ್ತಿದ್ದವರನ್ನು ಹುಡುಕಿ 755 ಮೊಕದ್ದಮೆಗಳನ್ನು ದಾಖಲಿಸಿ, 148 ವರ್ತಕರ ಲೈಸೆನ್ಸ್ ರದ್ದುಪಡಿಸಿದ್ದು, 14 ಸಾವಿರ ಕ್ವಿಂಟಾಲ್ ಕಳಪೆ ಬೀಜಗಳನ್ನು ವಶಪಡಿಸಿಕೊಳ್ಳ ಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಬಾಪೂಜಿ ಎಂಬಿಎ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ
ಅತ್ಯಾತಿ ಟೆಕ್ನಾಲಜೀಸ್ ಸಂಸ್ಥೆ ವತಿಯಿಂದ ನಗರದ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನವನ್ನು ಆಚರಿಸಲಾಯಿತು.
ಕಬಳಿಸಿದ ಜಾಗ ಹಿಂತಿರುಗಿಸಲು ಮನವಿ
ಹೊಸಕುಂದವಾಡ ಗ್ರಾಮದ ಆಂಜಿನಪ್ಪ ಎಂಬುವವರಿಂದ ಅಂಗನವಾಡಿ ಕೇಂದ್ರ ಹಾಗೂ ಹಿಟ್ಟಿನ ಗಿರಣಿ ಇರುವ ಸರ್ಕಾರಿ ಜಾಗವನ್ನು ಕಬಳಿಸಿದ್ದು, ಅದನ್ನು ಬಿಡಿಸಿ ಕೊಡುವಂತೆ ಗ್ರಾಮಸ್ಥರು ಇಂದು ಜಿಲ್ಲಾಡಳಿತ, ನಗರಾ ಡಳಿತ, ತಾಲ್ಲೂಕು ಅಡಳಿತಕ್ಕೆ ಮನವಿ ಸಲ್ಲಿಸಿದರು.
ಐಸಿಟಿಯೊಂದಿಗೆ ಬಿಐಇಟಿ ನೂತನ ಒಪ್ಪಂದ
ವಿದ್ಯಾರ್ಥಿಗಳ ಸರ್ವತೋಮುಖ ಶಿಕ್ಷಣಕ್ಕೆ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ಫೆ. 17 ರಂದು ಐಸಿಟಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಜಿಲ್ಲಾಡಳಿತದಿಂದ ಕವಿ ಶ್ರೀ ಸರ್ವಜ್ಞ ಜಯಂತಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತ್ರಿಪದಿ ಕವಿ ಶ್ರೀ ಸರ್ವಜ್ಞ ಜಯಂತಿಯನ್ನು ಭಾನುವಾರ ಜಿಲ್ಲಾಡಳಿತ ಭವನದಲ್ಲಿ ಸರಳವಾಗಿ ಆಚರಿಸಲಾಯಿತು.
ಶ್ರೀ ವಿನಾಯಕ ದೇವಸ್ಥಾನ ಅಭಿವೃದ್ಧಿಗೆ ಸಹಾಯ ಧನ
ನಗರದ ಶ್ರೀ ಶಂಕರ ವಿಹಾರ ಬಡಾವಣೆ ಬಿ ಬ್ಲಾಕ್ನ ಶ್ರೀ ಸರ್ವ ಸಿದ್ಧಿ ವಿನಾಯಕ ದೇವಸ್ಥಾನದ ಕಟ್ಟಡ ಅಭಿವೃದ್ಧಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ 1 ಲಕ್ಷ ರೂ.ಗಳನ್ನು
ಡಿ.ಡಿ. ಮುಖಾಂತರ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಶ್ರೀನಿವಾಸ್, ಸೇವಾ ಸಮಿತಿ ಗೌರವಾಧ್ಯಕ್ಷರಾದ ಆಶಾ ಉಮೇಶ್ ಹಾಗೂ ಅಧ್ಯಕ್ಷ ಮಹೇಶ್ವರಯ್ಯ ಅವರಿಗೆ ಹಸ್ತಾಂತರಿಸಲಾಯಿತು.
ಸಿದ್ದಮ್ಮನಹಳ್ಳಿಯಲ್ಲಿ ಶೇಂಗಾ ಬೆಳೆ ಪ್ರಾತ್ಯಕ್ಷಿಕೆ
ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಜಗಳೂರು ತಾಲ್ಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಎಣ್ಣೆಕಾಳು ಯೋಜನೆ ಅಡಿಯಲ್ಲಿ ಗುಚ್ಛ ಗ್ರಾಮಗಳ ಶೇಂಗಾ ಬೆಳೆಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದರು.
ಭಾರತ ವಿಶ್ವ ಗುರುವಾಗಲು ಮೌಲ್ಯಾಧಾರಿತ ಶಿಕ್ಷಣ ಅಗತ್ಯ
ಮೌಲ್ಯಾಧಾರಿತ ಶಿಕ್ಷಣದಿಂದ ಭಾರತವನ್ನು ಮತ್ತೊಮ್ಮೆ ವಿಶ್ವಗುರುವಾಗಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದ್ದು, ಅದಕ್ಕಾಗಿ ಎಲ್ಲರ ಸಹಕಾರ ಅಗತ್ಯವಿದೆ
ತಾಯಿ, ಜನ್ಮ ಭೂಮಿ, ಮಾತೃ ಭಾಷೆ ಸ್ವರ್ಗಕ್ಕಿಂತ ಮಿಗಿಲು
ಹರಿಹರ ನಗರದಲ್ಲಿ ಸೋಮವಾರ ಸಂಜೆ ಬೀಸಿದ ಭಾರೀ ಗಾಳಿ ಹಾಗೂ ಮಳೆ ಯಿಂದಾಗಿ ಆರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಮರ ಬಿದ್ದು ಐದು ವಾಹನಗಳು ಜಖಂಗೊಂಡಿವೆ.
ಶಿಕ್ಷಣ ಸಂಸ್ಥೆಗಳಿಂದ ಉದ್ಯೋಗಗಳ ಸೃಷ್ಟಿ
ಶಿಕ್ಷಣ ಸಂಸ್ಥೆಗಳನ್ನು ಉದ್ಯೋಗ ಸೃಷ್ಟಿಯ ತಾಣಗಳನ್ನಾಗಿ ಮಾಡುವುದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯ ಉದ್ದೇಶ ಎಂದು ಆಂಧ್ರಪ್ರದೇಶ ವಿಜಯನಗರ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ತೇಜಸ್ವಿ ವಿ. ಕಟ್ಟೀಮನಿ ಹೇಳಿದರು.
ಸೇವೆಯೊಂದಿಗೆ ಕಪ್ಪು ಪಟ್ಟಿ ಧರಿಸಿ ಶಿಕ್ಷಕರ ಪ್ರತಿಭಟನೆ
ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಇಂದು ಕೈಗೆ ಕಪ್ಪು ಪಟ್ಟಿ ಧರಿಸಿ, ತಮ್ಮ ಸೇವೆಯ ಜೊತೆಯಲ್ಲಿಯೇ ಸರ್ಕಾರದ ಗಮನ ಸೆಳೆದರು.
ನೆಮ್ಮದಿ ಜೀವನಕ್ಕೆ ಯೋಧರು ಪೊಲೀಸರ ನಿಸ್ವಾರ್ಥ ಸೇವೆ ಕಾರಣ
ಯೋಧರು ಮತ್ತು ಪೊಲೀಸರ ನಿಸ್ವಾರ್ಥ ಸೇವೆ, ಕರ್ತವ್ಯ ನಿಷ್ಠೆಯಿಂದಾಗಿ ಸಮಾಜದಲ್ಲಿ ಪ್ರತಿಯೊಬ್ಬರೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಹೆಗಡೆ ಹೇಳಿದರು.
ಗಾಂಧೀಜಿ ಹೆಸರು ಇಡೀ ಜಗತ್ತಿಗೇ ಅಹಿಂಸಾ ತತ್ವ
ಬಾಪೂಜಿ ಹುಟ್ಟಿದ ದಿನವನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಹಾತ್ಮ ಗಾಂಧಿ ಎಂಬ ಹೆಸರು ಭಾರತೀಯರಿಗೆ ಮಾತ್ರ ಪ್ರೇರಕ ಶಕ್ತಿಯಲ್ಲ. ಬದಲಾಗಿ ಇಡೀ ಜಗತ್ತಿಗೇ ಅಹಿಂಸಾ ತತ್ವವಾಗಿದೆ
ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಅಗತ್ಯ: ಸುಜಾತ ಕೃಷ್ಣ
ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿ ರೂಪಿಸುವ ಮಹತ್ತರ ಕಾರ್ಯ ಶಿಕ್ಷಕರಿಂದ ಮಾತ್ರ ಸಾಧ್ಯ. ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತಿದಾಗ ಸಂಸ್ಕಾರವಂತರಾಗಿ ರೂಪುಗೊಳ್ಳುತ್ತಾರೆ. ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡುವ ಅಗತ್ಯವಿದೆ
ಪೌಷ್ಠಿಕ ಆಹಾರಕ್ಕೆ ನಿರಂತರ ಅಭಿಯಾನ
ಆರೋಗ್ಯಕರ ಜೀವನಕ್ಕಾಗಿ ಪೌಷ್ಠಿಕ ಆಹಾರ ಅತ್ಯಗತ್ಯ. ರಸಗೊಬ್ಬರ ಹಾಗೂ ರಾಸಾಯನಿಕಗಳ ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೌಷ್ಠಿಕ ಬೆಳೆ ಮತ್ತು ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳ ಲೇಬೇಕಾಗಿದೆ ಎಂದು ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ಆರ್. ತಿಪ್ಪೇಸ್ವಾಮಿ ಹೇಳಿದ್ದಾರೆ.
400 ಜನರಿಗೆ ಕೋವಿಡ್ ಲಸಿಕೆ
ಕೊರೊನಾ ಲಸಿಕೆ ಹಾಕಿಸುವ ಮುಖೇನ ಅವರುಗಳ ಆರೋಗ್ಯದ ಕಾಳಜಿಯನ್ನು 24ನೇ ವಾರ್ಡಿನ ಪಾಲಿಕೆ ಸದಸ್ಯ ಕೆ. ಪ್ರಸನ್ನ ಕುಮಾರ್ ಮೆರೆದಿದ್ದಾರೆ.
ಮನೆ ಲೀಸ್ಗೆ ಇದೆ
ಉತ್ತಮ್ ಬಡಾವಣೆ, ಆವರಗೆರೆ, ದಾವಣಗೆರೆ # 634 `ಕಾಮಧೇನು'2 BHK, 30x40 ಅಳತೆಯ ಮನೆ ಲೀಸ್ಗೆ ಇದೆ. 70198 38199
ಯುವಕರು ಬೇಕಾಗಿದ್ದಾರೆ
ಸೂಪರ್ ಮಾರ್ಕೆಟ್ನಲ್ಲಿ ಕೆಲಸ ಮಾಡಲು ಯುವಕರು ಬೇಕಾಗಿದ್ದಾರೆ. ಸಂಪರ್ಕಿಸಿ: ಕಾಳಿಕಾದೇವಿ ಸರ್ಕಲ್, ಹೈಟೆಕ್ ಹಾಸ್ಪಿಟಲ್ ರೋಡ್, ದಾವಣಗೆರೆ.
ಅಗಸನಕಟ್ಟಿ ಬಸವರಾಜಪ್ಪ
ದಾವಣಗೆರೆ ಸಮೀಪದ ಹೊಸ ಕುಂದವಾಡ ಗ್ರಾಮದ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರಾದ ಅಗಸನಕಟ್ಟಿ ಬಸವರಾಜಪ್ಪ (85) ಅವರು, ದಿನಾಂಕ 03.02.2022 ರ ಗುರುವಾರ ರಾತ್ರಿ 11.20 ಕ್ಕೆ ನಿಧನರಾದರು.
ಹೊನ್ನೂರು ಗೌಡ್ರು ರೇವಣಸಿದ್ದಪ್ಪ
ದಾವಣಗೆರೆ ತಾಲ್ಲೂಕು ಹೊನ್ನೂರು ಗ್ರಾಮದ ವಾಸಿ ಗೌಡ್ರು ಹೆಚ್. ಜಿ. ರೇವಣಸಿದ್ದಪ್ಪ ಇವರು ದಿನಾಂಕ 3.2.2022ರ ಗುರುವಾರ ರಾತ್ರಿ 10.54ಕ್ಕೆ ನಿಧರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಎಸ್.ಎಂ ಗುರುದೇವಮೂರ್ತಿ
ಜಂಗಮ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಎಸ್.ಎಂ ಗುರುದೇವಮೂರ್ತಿ ಇವರು ದಿನಾಂಕ 2.02.2022ರ ಬುಧವಾರ ರಾತ್ರಿ 1.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಕೈದಾಳೆ ಮೋತಿ ಶಾರದಮ್ಮ
ದಾವಣಗೆರೆ ಎಂಸಿಸಿ `ಬಿ' ಬ್ಲಾಕ್,# 4733 13ನೇ ಮೇನ್, 6ನೇ ಕ್ರಾಸ್, ಬಾಪೂಜಿ ಹೈಸ್ಕೂಲ್ ಹತ್ತಿರದ ವಾಸಿ ಕೈದಾಳೆ ದಿ|| ಮೋತಿ ಕರಿಬಸಪ್ಪನವರ ಧರ್ಮಪತ್ನಿ ಶ್ರೀಮತಿ ಮೋತಿ ಶಾರದಮ್ಮ ಅವರು, ದಿನಾಂಕ 3.02.2022ರ ಗುರುವಾರ ರಾತ್ರಿ 9 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದೇವರ ಮೂರ್ತಿಗಳ ಮೆರವಣಿಗೆ ಸಂಬಂಧ ಗಲಾಟೆ
ನ್ಯಾಮತಿ : ತಾಲ್ಲೂಕಿನ ಕುರುವ ಗಡ್ಡೆ ರಾಮೇಶ್ವರ ರಥೋತ್ಸವದಲ್ಲಿ ಪಾಲ್ಗೊಳ್ಳಲು ಮಾದನಬಾವಿ ಗ್ರಾಮಸ್ಥರು ಬೀರಲಿಂಗೇಶ್ವರ ಸ್ವಾಮಿ, ರಂಗನಾಥ ಸ್ವಾಮಿ, ಮುರುಡಲಿಂಗೇಶ್ವರ ಸ್ವಾಮಿ ಉತ್ಸವ ಮೂರ್ತಿಗಳನ್ನು ಪಕ್ಕದ ಬಸವನಹಳ್ಳಿ ಗ್ರಾಮದ ಮುಖಾಂತರ ಮೆರವಣಿಗೆ ಮೂಲಕ ತೆರಳುವಾಗ ಎರಡೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು, ಕಲ್ಲು ತೂರಾಟ ನಡೆದಿದೆ.
ಅಂತರ್ ಜಿಲ್ಲಾ ಕಳ್ಳರ ಬಂಧನ : 14 ಬೈಕ್ ವಶ
ಮಲೇಬೆನ್ನೂರು : ಇಲ್ಲಿನ ಪೊಲೀಸ್ ಠಾಣೆಯ ಪೊಲೀಸರು ಮೂವರು ಅಂತರ್ ಜಿಲ್ಲಾ ಕಳ್ಳತನದ ಆರೋಪಿತರನ್ನು ಬಂಧಿಸಿ ಹರಪನಹಳ್ಳಿ, ದಾವಣಗೆರೆ, ಹೊನ್ನಾಳಿ, ಹರಿಹರ ಗ್ರಾಮಾಂತರ ಮತ್ತು ಶಿರಾಳಕೊಪ್ಪ ಪೊಲೀಸ್ ಠಾಣೆಗಳಲ್ಲಿ ನಡೆದಿದ್ದ ಒಟ್ಟು 18 ಪ್ರಕರಣಗಳನ್ನು ಭೇದಿಸಿ 7,41,500 ರೂ. ಬೆಲೆ ಬಾಳುವ ಓಮ್ನಿ ವ್ಯಾನ್ ಹಾಗೂ 66,500 ರೂ. ನಗದು ಹಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆಂದು ದಾವಣಗೆರೆ ಜಿಲ್ಲಾ ಎಎಸ್ಪಿ ಆರ್.ಬಿ. ಬಸರಗಿ ತಿಳಿಸಿದ್ದಾರೆ.
ಪರಿಚಿತನಂತೆ ನಟಿಸಿ ಸಂಚು ರೂಪಿಸಿ ದರೋಡೆ
ಪರಿಚಿತನಂತೆ ನಟಿಸಿ ಸಂಚು ರೂಪಿಸಿದ್ದ ಆರೋಪಿತನೋರ್ವ ನಾಲ್ವರ ಜೊತೆ ಸೇರಿ ದರೋಡೆ ಮಾಡಿದ್ದು, ಐವರ ಪೈಕಿ ನಾಲ್ವರು ಪೊಲೀಸರ ಅತಿಥಿಯಾಗಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಬಂಗಾರದ ವ್ಯಾಪಾರಿಯ ಸಹೋದರನ ಕೊಲೆಗೈದ ಪರಿಚಿತ ಆಭರಣ ತಯಾರಕ
ಬಂಗಾರದ ಒಡವೆಯನ್ನು ತಯಾರಿಸದ ಕಾರಣ ಬಂಗಾರ ವಾಪಸ್ ನೀಡುವಂತೆ ಕೇಳಿದ್ದಕ್ಕೆ ಒಡವೆ ನೀಡಿದ್ದ ಪರಿಚಿತ ಬಂಗಾರದ ವ್ಯಾಪಾರಿಯ ಸಹೋದರನಿಗೆ ಸೋಡಾದಲ್ಲಿ ಸೈನೈಡ್ ಹಾಕಿ ಕೊಲೆ ಮಾಡಿದ ಪ್ರಕರಣವನ್ನು ಬೇಧಿಸಿರುವ ಇಲ್ಲಿನ ಬಡಾವಣೆ ಪೊಲೀಸರು, ಆರೋಪಿ ಆಭರಣ ತಯಾರಕನನ್ನು ಬಂಧಿಸಿದ್ದಾರೆ.
ಮೂವರು ಅಂತರಾಜ್ಯ ಕಳ್ಳರ ಸೆರೆ
10 ಮನೆ ಗಳ್ಳತನ ಪ್ರಕರಣಗಳನ್ನು ಬೇಧಿಸಿರುವ ಹರಿಹರ ನಗರ ಪೊಲೀಸರು ಮೂವರು ಅಂತರಾಜ್ಯ ಕಳ್ಳರನ್ನು ಬಂಧಿಸಿ, ಒಟ್ಟು 22 ಲಕ್ಷದ 92 ಸಾವಿರ ರೂ. ಮೌಲ್ಯದ ಚಿನ್ನಾ ಭರಣ, ನಗದು ವಶಪಡಿಸಿಕೊಂಡಿದ್ದಾರೆ.
ಬೈಪಾಸ್ನಲ್ಲಿ ರಸ್ತೆ ಅಪಘಾತ ಸಾವು, ಓರ್ವನ ಸ್ಥಿತಿ ಗಂಭೀರ
ಟೈರ್ ಸ್ಫೋಟಗೊಂಡ ಪರಿಣಾಮ ಒಣ ಮೆಣಸಿನಕಾಯಿ ಸಾಗಿಸುತ್ತಿದ್ದ ವಾಹನವೊಂದು ಪಲ್ಟಿಯಾಗಿ ಓರ್ವ ವ್ಯಾಪಾರಿ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರಭಾಗದ ಶಾಮನೂರು ಬಳಿಯ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಇಂದು ಸಂಭವಿಸಿದೆ.
ನಾ ಕಂಡ ನನ್ನ ಕರುನಾಡು
ಹೇಗೆ ವರ್ಣಿಸಲಿ ನಾ ನನ್ನ ಕರುನಾಡನ್ನ, ಅದೆಷ್ಟು ಸುಂದರ ಪಶ್ಚಿಮ ಘಟ್ಟದ ದಾರಿಯಲಿ.... ಕಾಣುತಿಹ ನೀ ನಿಜ ಸ್ವರ್ಗವಾ...
ತೊಲಗಿಬಿಡು ವೈರಾಣು…
ಸಾಕು ತೊಲಗಿನ್ನು ಈ ಜಗವ ಬಿಟ್ಟು...ನಮಗೆಲ್ಲ ನೆಮ್ಮದಿಯ ಕೊಟ್ಟು ಹಾರಿ ಹೋಗಿಬಿಡು ಮತ್ತೆ ಬಾರದಂತೆ!
ಮಹಾನ್ ಚೇತನದ್ವಯರು ಹಾಗೂ ದಾವಣಗೆರೆ ರೈಲ್ವೇ
ಎತ್ತಿನ ಬಂಡಿಯಲ್ಲಿ ಹತ್ತಿಬೇಲು ತರುತ್ತಿದ್ದವರು : ದಾವಣಗೆರೆ ಸುತ್ತಮುತ್ತ ಆಗ ಹತ್ತಿ ಬೆಳೆಯಲಾಗುತ್ತಿತ್ತು. ಈ ಹತ್ತಿಯನ್ನು ಖರೀದಿಸಿ, ಅರಳೆ ಮಾಡಿ, ಹೊರ ರಾಜ್ಯಗಳ ಹತ್ತಿ ನೂಲು, ಬಟ್ಟೆ ತಯಾರಿಕಾ ಕಾರ್ಖಾನೆಗಳಿಗೆ ರೈಲ್ವೇ ಗೂಡ್ಸ್ ಮೂಲಕ ಕಳಿಸಲಾಗುತ್ತಿತ್ತು.
ಒಂದಿಷ್ಟು ಉಸಿರಾಡಲು ಬಿಡು
ಓ ಹೆಣ್ಣೆ ಇದೆಲ್ಲವೂ ದಿಟವೆಂದು ನಂಬದಿರು...ಇದೆಲ್ಲವೂ ಒಂದು ದಿನದ ಗೌರವ ಮಾತ್ರ...
ಅನ್ನದಾತ-ಜೀವದಾತ
ರೈತನ ತಾಳ್ಮೆಯಕಟ್ಟೆ ಹೊಡೆದರೆ, ಭೂ ತೆರೆದಂತೆ...ಭೂ ಕಂಪಿಸಲಿ, ತನ್ನ ಗರ್ಭದ ಜ್ವಾಲೆಯಲಿ...
ಓ… ವ್ಯಾಮೋಹದ ಕಾರ್ಮೋಡವೇ…
ಓ...ವ್ಯಾಮೋಹದ ಕಾರ್ಮೋಡವೇ...ಬಿರುಮಳೆಯಾಗಿ ಸುರಿಯದಿರು...ಕೊಚ್ಚಿ ಹೋಗದಿರಲಿ ಕನಸುಗಳ ಸಸಿಮಡಿ
ಇರು ನೀ ಇರು….
ಕೂಗಿದವನ ಸಹಾಯಕ್ಕೆ ಹಸ್ತವ ಚಾಚಲು ಮರೆಯದಿರು, ಬೋಗ ಭಾಗ್ಯಗಳ ಬಿರುಗಾಳಿಗೆ ಮೈಮರೆತು ಸಿಲುಕದಿರು,
ಭಾರತವಿದು `ಸಾರ್ವಭೌಮ ಗಣರಾಜ್ಯ’
ಜಾರಿಗೆ ಬಂತಿದು 1950ರ ಜನವರಿ ಇಪ್ಪತ್ತಾರಕೆ ಮೆರೆದಿದೆ ವಿಶ್ವದೆಲ್ಲೆಡೆ ಭಾರತದ ಕೀರ್ತಿ ಪತಾಕೆ
ನಮ್ಮನೆ ದೇವರು
ನಮಗೆ ಕೊಡುವಾಗ ಜನ್ಮ...ಪಡೆದಳಾಕೆ ಮರುಜನ್ಮ...ಹುಟ್ಟಿಬಂದರೂ ನೂರಾರು ಜನ್ಮ...ಮಾತೃಋಣ ತೀರಿಸಲಾಗದ್ದು ನಮ್ಮ ಕರ್ಮ
ಒಲವಿನ ಕಾಯಕ
ಹಾರುವ ಹಕ್ಕಿಸಾಲಂತೆ ತೋರುತ, ಕೆಸರ ಗದ್ದೆಯಲಿ ಕಚ್ಚೆದಿರುಸಲಿ ಕಾಯಕದಿ ನಿರತ ಹೆಂಗಳೆಯರ ಸಂತಸಕೆ ಎಣೆಯಿಲ್ಲ.
`ನಗುವಿರಲಿ ಎಂದೆಂದೂ’…
ನಕ್ಕು ನಗಿಸುತಲಿರಿ `ವಿಶ್ವ ನಗು ದಿನ'ವಿಂದು, ಇಂದೊಂದೇ ದಿನವಲ್ಲ, ನಗುವಿರಲಿ ಎಂದೆಂದೂ.
ಒಡನಾಡಿಗಳು …
ಕಂಡು ಕಾಣದ ಹಾಗೆ ಬೀದಿಗೆ ಬಿಟ್ಟೆಯ ಬ್ರಹ್ಮನೆ ನೋಡು ನೀನೇ ಮರುಗುವೇ ಮುದ್ದು ಮುಖದ ಹಸುಳೆಗಳ....

ಹೊನ್ನಾಳಿ : ಮಾಯಾಂಬಿಕಾ ದೇವಿ ಅಡ್ಡಪಲ್ಲಕ್ಕಿ ಜಾತ್ರಾ ಮಹೋತ್ಸವ
ಹೊನ್ನಾಳಿ : ತಾಲ್ಲೂಕಿನ ಯಕ್ಕನಹಳ್ಳಿ ಗ್ರಾಮದ ಶ್ರೀ ಮಾಯಾಂಬಿಕಾದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ವತಿಯಿಂದ ಭರತ ಹುಣ್ಣಿಮೆ ಪ್ರಯುಕ್ತ ಮಾಯಾಂಬಿಕಾ ದೇವಿ ಅಡ್ಡಪಲ್ಲಕ್ಕಿ ಜಾತ್ರಾ ಮಹೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳು ಶ್ರದ್ಧೆ, ಛಲದಿಂದ ಓದಿದರೆ ಸಾಧನೆ ಸಾಧ್ಯ
ಮಲೇಬೆನ್ನೂರು : ವಿದ್ಯಾರ್ಥಿಗಳು ತಮ್ಮ ಕಲಿಕಾ ಸಮಯದಲ್ಲಿ ಮನಸ್ಸನ್ನು ಬೇರೆಡೆಗೆ ಹಾಯಿಸದೆ, ಶ್ರದ್ಧೆ ಹಾಗೂ ಛಲದಿಂದ ವಿದ್ಯಾಭ್ಯಾಸದ ಕಡೆಗೆ ಹರಿಸಬೇಕೆಂದು ಹರಿಹರದ ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್ ತಿಳಿಸಿದರು.

ಸಿನಿಮಾ ಸಿರಿಯಿಂದ ಮಂಗೇಶ್ಕರ್ಗೆ ಶ್ರದ್ಧಾಂಜಲಿ
ನಗರದ ಸಿನಿಮಾ ಸಿರಿ ಸಂಸ್ಥೆ ವತಿಯಿಂದ ಭಾರತದ ಗಾನ ಕೋಗಿಲೆ ಪದ್ಮವಿಭೂಷಣ ಲತಾ ಮಂಗೇಶ್ಕರ್ ಅವರಿಗೆ ಶ್ರೀ ಶಿವಯೋಗ ಮಂದಿರದಲ್ಲಿ ಇಂದು ಸಂಜೆ ಶ್ರದ್ಧಾಂಜಲಿ ಸಲ್ಲಿಸಲಲಾಯಿತು.

`ಭ್ರಷ್ಟತೆ’ ಮತ್ತು `ಕರ್ತವ್ಯ ನಿಷ್ಠೆ’ ಸಮಾನಾಂತರವಾಗಿ ಚಲಿಸಲು ಸಾಧ್ಯವೇ…?
"ದುಬೈನಲ್ಲಿ ಕಾನೂನು ಎಂಥಾ ಸ್ಟ್ರಿಕ್ಟುರೀ, ಅಲ್ಲಿ ಅಪರಾಧಗಳೇ ನಡೆಯೊಲ್ಲ" ಎನ್ನುವ ನಾವು ನಮ್ಮ ವಿಜಯನಗರ ಸಾಮ್ರಾಜ್ಯದ ವೈಭವ ನೆನಪಿಗೆ ಬರುವುದಿಲ್ಲ....

ಕೊಡುಗೆಗಳಿಂದ ಬಡವಾಗುತ್ತಿರುವ ರಾಜ್ಯಗಳು
ಚುನಾವಣೆಗೆ ಮುಂಚೆ ಹಣ ಕೊಟ್ಟರೆ ಹೇಗೆ ಭ್ರಷ್ಟಾಚಾರವೋ, ಚುನಾವಣೆ ನಂತರ ಪುಕ್ಕಟೆ ಹಣ ಕೊಡುವುದೂ ಭ್ರಷ್ಟಾಚಾರ