ಹೊನ್ನಾಳಿ : ರಾಜಕೀಯ, ಶೈಕ್ಷಣಿಕ, ಆಧ್ಯಾತ್ಮಿಕ, ಧಾರ್ಮಿಕವಾಗಿ ಎಲ್ಲ ದೃಷ್ಟಿಯಿಂದಲೂ ಪರಿಪೂರ್ಣತೆ ಹೊಂದಿರುವ ನರೇಂದ್ರ ಮೋದಿ ಅಂತಹ ಇನ್ನೊಬ್ಬ ನಾಯಕ 100 ವರ್ಷ ಕಳೆದರೂ ಈ ದೇಶಕ್ಕೆ ಸಿಗುವುದಿಲ್ಲ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅಭಿಪ್ರಾಯಪಟ್ಟರು.
ಶೋಷಿತ ಸಮುದಾಯಗಳಿಗೆ ಹೋರಾಟ ಅನಿವಾರ್ಯ
ಜಗಳೂರು : ತಾಲೂಕಿನ ವಿವಿಧ ಗ್ರಾಮ ಗಳಲ್ಲಿ ಇಂದು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಮತಯಾಚಿಸಿದರು.
ಬೆಣ್ಣೆ ನಗರಿಯಲ್ಲಿ ಅಕ್ಷರ ದೋಸೋತ್ಸವ
ದಾವಣಗೆರೆ ಬೆಣ್ಣೆ ನಗರಿ, ಬೆಣ್ಣೆ ದೋಸೆ ಎಂದೇ ಬ್ರಾಂಡ್ ಪಡೆದುಕೊಂಡಿದೆ. ದೋಸೆ ಕಾವಲಿಯಲ್ಲಿ ದೋಸೆಯ ಹಿಟ್ಟನ್ನು ಬಳಸಿ ನಮ್ಮ ಮತ, ನನ್ನ ಹಕ್ಕು, ತಪ್ಪದೇ ಮೇ 7 ರಂದು ಮತದಾನ ಮಾಡಿ ಎಂಬ ಘೋಷಣೆಯನ್ನು ಕಾವಲಿಯಲ್ಲಿ ದೋಸೆಯಲ್ಲಿ ಮೂಡಿ ಬಂದಿತು.
ಐದನೇ ಬಾರಿ ದಾವಣಗೆರೆ ನಗರಕ್ಕೆ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏ. 28ರ ಭಾನುವಾರ ಮಧ್ಯಾಹ್ನ 1 ಗಂಟೆಗೆ ನಗರದ ಹೈಸ್ಕೂಲ್ ಮೈದಾನ ದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ದಾವಣಗೆರೆ ಹಾಗೂ ಹಾವೇರಿ ಕ್ಷೇತ್ರಗಳ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.
ಹರಿಹರಕ್ಕೆ ಸಂಸದ ಸಿದ್ದೇಶ್ವರ ಕೊಡುಗೆ ಅಪಾರ ಅಭಿವೃದ್ಧಿಯೋ-ಅಕ್ರಮವೋ ನೀವೇ ಯೋಚಿಸಿ
ಹರಿಹರ : ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ಧಿಗಿಂತ ಅಕ್ರಮ ಮರಳುಗಾರಿಕೆಗೆ ಹೆಚ್ಚು ಒತ್ತು ಕೊಟ್ಟಿದ್ಧಾರೆ. ಚುನಾವಣೆ ಬಂತು, ಪತ್ನಿ ಅಭ್ಯರ್ಥಿ ಎಂದು ಈಗ ಅಭಿವೃದ್ಧಿ ಜಪ ಮಾಡುತ್ತಿದ್ದಾರೆ.
ನೀತಿ ಸಂಹಿತೆ : 14.32 ಕೋಟಿ ವಿವಿಧ ವಸ್ತುಗಳು ಸೇರಿದಂತೆ ನಗದು ವಶ
ಲೋಕಸಭಾ ಚುನಾವಣೆಯ ನೀತಿ ಸಂಹಿತೆಯು ಮಾರ್ಚ್ 16 ರಿಂದ ಜಾರಿಯಲ್ಲಿದ್ದು, ಏಪ್ರಿಲ್ 24 ರ ವರೆಗೆ ನೀತಿ ಸಂಹಿತೆ ಉಲ್ಲಂಘನೆಯಡಿ ರೂ. 14,32,07,731 ಮೌಲ್ಯದ ವಿವಿಧ ವಸ್ತುಗಳು, ಮದ್ಯ, ಮಾದಕ ವಸ್ತು ಸೇರಿದಂತೆ ನಗದು ವಶಪಡಿಸಿಕೊಳ್ಳಲಾಗಿದೆ
ಜೆಇಇ ಮೇನ್ಸ್ನಲ್ಲಿ ನಗರದ ಮಾಗನೂರು ಬಸಪ್ಪ ಕಾಲೇಜಿಗೆ ರ್ಯಾಂಕ್
ಐ.ಐ.ಟಿ, ಎನ್.ಐ.ಟಿ, ಐ.ಐ.ಐ.ಟಿ, ಇಂಜಿನಿಯರಿಂಗ್ ಪದವಿಯ ಪ್ರವೇಶಕ್ಕೆ 2024 ರಲ್ಲಿ ನಡೆಸಲಾದ ಜೆ.ಇ.ಇ ಮೇನ್ಸ್ ಪರೀಕ್ಷೆಯಲ್ಲಿ ಮಾಗನೂರು ಬಸಪ್ಪ ಪಿಯು ಕಾಲೇಜಿನ ವಿದ್ಯಾರ್ಥಿ ವರುಣ್ ಎಂ.ಎಸ್. ರಾಷ್ಟ್ರಮಟ್ಟದಲ್ಲಿ 144 ನೇ ರ್ಯಾಂಕ್ ಪಡೆದಿರುತ್ತಾನೆ.
ಹನುಮ ಜನ್ಮೋತ್ಸವ: ನಾಳೆ ಶೋಭಾಯಾತ್ರೆ
ಶ್ರೀ ಹನುಮ ಜನ್ಮೋತ್ಸವ ಸಮಿತಿ ವತಿಯಿಂದ ಶ್ರೀ ಹನುಮ ಜನ್ಮೋತ್ಸವ ಪ್ರಯುಕ್ತ 3ನೇ ವರ್ಷದ ಶೋಭಾಯಾತ್ರೆಯನ್ನು ನಾಡಿದ್ದು ದಿನಾಂಕ 27ರ ಶನಿವಾರ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಇಂದು ವಿಶ್ವಕರ್ಮ ಸಮಾಜದಿಂದ ಸಾಮೂಹಿಕ ಉಪನಯನ, ವಿವಾಹ ಮಹೋತ್ಸವ
ವಿಶ್ವಕರ್ಮ ಸಮಾಜ ಸಂಘ ಹಾಗೂ ಜಿಲ್ಲೆಯ ವಿಶ್ವಕರ್ಮ ಸಮಾಜದ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸಾಮೂಹಿಕ ಉಪನಯನ ಹಾಗೂ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎಂ. ಕೊಟ್ರೇಶಾಚಾರ್ ತಿಳಿಸಿದ್ದಾರೆ.
ಸಿದ್ಧಗಂಗಾ ಕಾಲೇಜಿಗೆ ಜೆಇಇ ಮೇನ್ಸ್ನಲ್ಲಿ ರಾಷ್ಟ್ರಮಟ್ಟದಲ್ಲಿ 64ನೇ ರ್ಯಾಂಕ್
2023-24ನೇ ಸಾಲಿನ ಜೆ.ಇ.ಇ. ಮೇನ್ಸ್ ಪರೀಕ್ಷೆಯಲ್ಲಿ ಸಿದ್ದಗಂಗಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಮನು ಎಲ್.ಜೆ.ಅದ್ವಿತೀಯ ಸಾಧನೆ ಮಾಡಿ ಅಖಿಲ ಭಾರತ ಮಟ್ಟದ 64ನೇ ರ್ಯಾಂಕ್ ಪಡೆದಿರುತ್ತಾನೆ.
ನಗರದಲ್ಲಿ ಇಂದು ಮಜ್ಜಿಗೆ ವಿತರಣೆ
ಕರುಣಾ ಜೀವ ಕಲ್ಯಾಣ ಟ್ರಸ್ಟ್ನಿಂದ 1 ತಿಂಗಳು ನಡೆಸು ತ್ತಿರುವ ಮಜ್ಜಿಗೆ ವಿತರಣಾ ಕಾರ್ಯ ಕ್ರಮಕ್ಕೆ ಪ್ರತಿಭಾ ವಿಶ್ವನಾಥ್, ಶೋಭಾ ಹನುಮಂತಪ್ಪ, ಎಸ್.ಆರ್. ಮಲ್ಲಿಕಾರ್ಜುನ್ ಸೋಗಿ ನೆನಪಿನಲ್ಲಿ, ಮೇಧಾ ವೇದ ಮಾಧವ ಕುಲಕರ್ಣಿ ಅವರು ಇಂದಿನ ದಾನಿಗಳಾಗಿದ್ದಾರೆ.
ಜಗಳೂರು : ಇಂದಿನ ಕಾಂಗ್ರೆಸ್ ಬೆಂಬಲಿತ ವೀರಶೈವ ಲಿಂಗಾಯತರ ಸಭೆಗೆ ಎಸ್ಸೆಸ್
ಜಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ವೀರಶೈವ ಲಿಂಗಾಯತರ ಸಭೆಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ಜಗಳೂರಿನ ತರಳಬಾಳು ಕೇಂದ್ರದಲ್ಲಿ ಏರ್ಪಡಿಸಲಾಗಿದೆ.
ವಿನಯ್ಗೆ ಬೆಂಬಲ : ಮಲ್ಲಿಕಾರ್ಜುನ್
ಲೋಕಸಭಾ ಕ್ಷೇತ್ರದ ಜಿ.ಬಿ. ವಿನಯ್ ಕುಮಾರ್ ಅವರನ್ನು ಬೆಂಬಲಿಸುವುದಾಗಿ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನಪ್ಪ ಪತ್ರಿಕಾಗೋಷ್ಠಿ ಯಲ್ಲಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಎಂ.ನಾಗಪ್ಪ ಬೇಲಿಮಲ್ಲೂರು, ಸಣ್ಣ ಸಿದ್ದಪ್ಪ ಹೊನ್ನಾಳಿ, ಡಾ.ಕರಿಬಸಯ್ಯ ಮಠದ ಒಡೆಯರ್, ಹನುಮಂತಪ್ಪ ಹದಡಿ ಇದ್ದರು.
ಚಿನ್ನಮ್ಮ ಮಹೇಶ್ವರಯ್ಯ ಪದವಿ ಪೂರ್ವ ಕಾಲೇಜಿಗೆ ಶೇ.99ರ ಫಲಿತಾಂಶ
ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಟಿ.ಎಂ ಚಿನ್ನಮ್ಮ ಮಹೇಶ್ವರಯ್ಯ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿಗೆ ಶೇ.99ರಷ್ಟು ಫಲಿತಾಂಶ ಲಭಿಸಿದೆ.
ವಿನಯ್ ಕುಮಾರ್ಗೆ ಹಿಂದುಳಿದ ಜನ ಜಾಗೃತಿ ವೇದಿಕೆ ಬೆಂಬಲ
ಕಾಂತರಾಜ ಆಯೋಗದ ವರದಿಯನ್ನು ಜಾರಿಗೊಳಿ ಸುವುದಾಗಿ ಭರವಸೆ ನೀಡಿರುವ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಅವರನ್ನು ಬೆಂಬಲಿಸುವುದಾಗಿ ಹಿಂದುಳಿದ ಜನ ಜಾಗೃತಿ ವೇದಿಕೆ ಹೇಳಿದೆ.
ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ರಾಣೇಬೆನ್ನೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 85ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸ ಲಾಗುವುದು
ಜನಜಾಗೃತಿಗಾಗಿ ದಸಂಸ ಆಂದೋಲನ
ಬಿಜೆಪಿಯು ಹಿಂದೂ ರಾಷ್ಟ್ರದ ಹೆಸರಿನಲ್ಲಿ ಮನುವಾದಿ ಧರ್ಮ ಸ್ಥಾಪಿಸಲು ಹೊರಟಿರುವ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ-ಕರ್ನಾಟಕದ ವತಿಯಿಂದ ಪ್ರತಿ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಆಂದೋಲನ ಹಮ್ಮಿಕೊಂಡಿರುವುದಾಗಿ ಸಂಘಟನೆಯ ಜಿಲ್ಲಾ ಸಂಚಾಲಕ ಅಜ್ಜಪ್ಪ ಎನ್. ತಿಳಿಸಿದ್ದಾರೆ.
ಸಂಸದರ ದುರ್ವರ್ತನೆಯಿಂದ ಕಾಂಗ್ರೆಸ್ ಸೇರ್ಪಡೆ : ಕಲ್ಲಿಂಗಪ್ಪ
ಕೆಟಿಜೆ ನಗರ 15ನೇ ಕ್ರಾಸ್ ಮನೆಯೊಂದರಲ್ಲಿ ಕಳ್ಳತನವಾಗಿದ್ದ ಪ್ರಕರಣ ಪತ್ತೆ ಹಚ್ಚಿರುವ ಪೊಲೀಸರು ಗೋಪಾಲಪುರದ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಸೈಯ್ಯದ್ ಫಜಲ್ (29) ಎಂಬಾತನನ್ನು ಬಂಧಿಸಿ, ಆತನಿಂದ 5.51 ಲಕ್ಷ ರೂ. ಬೆಲೆಯ 90.4 ಗ್ರಾಂ ಬಂಗಾರದ ಆಭರಣಗಳು ಹಾಗೂ 4 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ರೈತ ವಿರೋಧಿ ಬಿಜೆಪಿ – ಮಿತ್ರ ಪಕ್ಷಗಳನ್ನು ಸೋಲಿಸಲು ಕರೆ
ರೈತ ವಿರೋಧಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳನ್ನು ಸೋಲಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜಿ.ಎಂ. ವೀರಸಂಗಯ್ಯ ಕರೆ ನೀಡಿದ್ದಾರೆ.
ನಾಳೆ ವಿಶ್ವಕರ್ಮ ಸಮಾಜದಿಂದ ಉಪನಯನ, ವಿವಾಹ ಮಹೋತ್ಸವ
ವಿಶ್ವಕರ್ಮ ಸಮಾಜ ಸಂಘ ಹಾಗೂ ಜಿಲ್ಲೆಯ ವಿಶ್ವಕರ್ಮ ಸಮಾಜದ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ 41ನೇ ವರ್ಷದ ಸಾಮೂಹಿಕ ಉಪನಯನ ಹಾಗೂ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 26ರಂದು ಹಮ್ಮಿಕೊಳ್ಳಲಾಗಿದೆ
ಇಂದು ವಿಕಲಚೇತನರಿಂದ ಬೈಕ್ ಜಾಥಾ
ಲೋಕಸಭಾ ಚುನಾವಣೆ ಪ್ರಯುಕ್ತ ಇಂದು ಬೆಳಿಗ್ಗೆ 10 ಗಂಟೆಗೆ ಮತದಾನ ಕುರಿತು ಜಾಗೃತಿ ಮೂಡಿಸಲು ವಿಕಲಚೇತನರಿಂದ ಬೈಕ್ ಜಾಥಾ ನಡೆಯಲಿದೆ.ಜಾಥಾವು ಹೊಸ ತಾಲ್ಲೂಕು ಪಂಚಾಯಿತಿ ಕಚೇರಿಯಿಂದ ಆರಂಭವಾಗಲಿದೆ.
ನಗರದಲ್ಲಿ ಇಂದು ಮಜ್ಜಿಗೆ ವಿತರಣೆ
ಕರುಣಾ ಜೀವ ಕಲ್ಯಾಣ ಟ್ರಸ್ಟ್ ನಿಂದ 1 ತಿಂಗಳು ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ಶ್ರೀಮತಿ ಮಲ್ಲಮ್ಮ ವೀರಪ್ಪ ಮತ್ತು ಮಕ್ಕಳು, ಮೊಮ್ಮಕ್ಕಳು ಗುಂಡೇರಿ. ಅಸಗೋಡು, ಶ್ರೀಮತಿ ದಾಕ್ಷಾಯಿಣಿ ಎಂ. ಶ್ರೀ ಎಂ.ಎಂ.ಆಚಾರ್, ಶ್ರೀಮತಿ ಪದ್ಮಾ ಅರುಣ್ ಮತ್ತು ಸಂಜನಾ ಕೌಶಿಕ್ ಅವರು ಇಂದಿನ ದಾನಿಗಳಾಗಿದ್ದಾರೆ.
28ರಂದು ನಗರದಲ್ಲಿ ಕಣ್ಣಿನ ಪರೀಕ್ಷೆ
ನಗರದ ನೇತ್ರಾಲಯ ಐ ಕೇರ್ ಸೆಂಟರ್ನಲ್ಲಿ ಇದೇ ದಿನಾಂಕ 28ರ ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ರವರೆಗೆ ಸಕ್ಕರೆ ಕಾಯಿಲೆ ಇರುವವರಿಗೆ ಉಚಿತವಾಗಿ ಕಣ್ಣಿನ ಪರೀಕ್ಷೆಯನ್ನು ಮಾಡಲಾಗುತ್ತದೆ.
ನಗರದಲ್ಲಿ ಇಂದು ಚಿತ್ರಕಲಾ ಸ್ಪರ್ಧೆ
ಮತದಾರರ ಜಾಗೃತಿಗೆ ಇಂದು ಬೆಳಿಗ್ಗೆ 10 ಗಂಟೆಗೆ ಸಿ.ಜಿ. ಆಸ್ಪತ್ರೆ ಹತ್ತಿರ, ವಿಶ್ವೇಶ್ವರಯ್ಯ ಪಾರ್ಕ್ನಲ್ಲಿ ಇಂದು ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳು ಹಾಗೂ ಚಿತ್ರಕಲಾ ಶಿಕ್ಷಕರು ಭಾಗವಹಿಸಬಹುದು
ಸಿಲಿಂಡರ್ ಗೆದ್ದೇ ಗೆಲ್ಲುತ್ತೆ : ವಿನಯ್ಕುಮಾರ್ ವಿಶ್ವಾಸ
ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಇಂದು ಸಂಜೆ 5 ಕ್ಕೆ ಶ್ರೀ ಡಾ. ಸದ್ಯೋಜ್ಯಾತ ಶಿವಾಚಾರ್ಯ ಹಿರೇಮಠದ ಆವ ರಣದಲ್ಲಿ 150ನೇ ಸೈಕಲ್ ವಿತರಣೆ ಅಂಗವಾಗಿ ಇಂದು 50 ಸೈಕ ಲ್ಗಳ ವಿತರಣಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಇಂದು ಮಜ್ಜಿಗೆ ವಿತರಣೆ
ಕರುಣಾ ಜೀವ ಕಲ್ಯಾಣ ಟ್ರಸ್ಟ್ನಿಂದ 1 ತಿಂಗಳು ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ಶ್ರೀಮತಿ ತ್ರಿವೇಣಿ ಶ್ರೀ ಡಾ.ಪಿ.ಮಲ್ಲೇಶ್ ಮತ್ತು ಕುಟುಂಬದವರು, ಎನ್. ರೇವಣಸಿದ್ದಪ್ಪ, ಜಗಮೋಹನ ತುಳಸಿಯಾನ ಅವರು ಇಂದಿನ ದಾನಿಗಳಾಗಿದ್ದಾರೆ.
ಇಂದು ಸೈಕಲ್ ಜಾಥಾ
ಮತದಾರರ ಜಾಗೃತಿ ಅಂಗವಾಗಿ ಇಂದು ಬೆಳಿಗ್ಗೆ 7 ಕ್ಕೆ ಅನುಭವ ಮಂಟಪ ಶಾಲೆಯಿಂದ ಜಿಲ್ಲಾ ಕ್ರೀಡಾಂಗಣ ದವರೆಗೆ ಸೈಕಲ್ ಜಾಥಾ ಏರ್ಪಡಿಸಲಾಗಿದೆ.
ನಾಳೆ 85 ವರ್ಷ ಮೇಲ್ಪಟ್ಟ ನಾಗರಿಕರು, ವಿಶೇಷಚೇತನರು ಮನೆಯಲ್ಲಿಯೇ ಮತದಾನ
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ದೇಶದ ಮೂರನೇ ಹಂತ, ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಲ್ಲಿಯೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ.
ಸತ್ಯನಾರಾಯಣಪುರದಲ್ಲಿ ಶ್ರೀರಾಮ ದೇವಸ್ಥಾನ ಉದ್ಘಾಟನೆ
ಹರಿಹರ ತಾಲ್ಲೂಕು ಸತ್ಯನಾರಾಯಣಪುರ (ಕುಂದುವಾಡ ಕ್ಯಾಂಪ್)ದಲ್ಲಿ ನೂತನವಾಗಿ ಕಲ್ಲಿನಲ್ಲಿ ನಿರ್ಮಿಸಲಾಗಿರುವ ಶ್ರೀರಾಮ ದೇವಸ್ಥಾನ, ಶ್ರೀ ಸೀತಾರಾಮ ಲಕ್ಷ್ಮಣ, ಹನುಮಂತ ಸಮೇತ ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮಿ ವಿಗ್ರಹಗಳ ಪುನಃ ಪ್ರತಿಷ್ಠಾಪನಾ ಮಹೋತ್ಸವದ ಕಾರ್ಯಕ್ರಮಗಳು ಆರಂಭವಾಗಿವೆ.
ಕಾರ್ಯಕರ್ತರಲ್ಲಿ ಒಗ್ಗಟ್ಟಿದ್ದರೆ ಪಕ್ಷಕ್ಕೆ ಸೋಲೇ ಇಲ್ಲ : ಎಸ್ಸೆಸ್ಸೆಂ
ಹರಪನಹಳ್ಳಿ : ಹರಪನಹಳ್ಳಿ ಕ್ಷೇತ್ರವು ಕಾಂಗ್ರೆಸ್ನ ಭದ್ರಕೋಟೆಯಾಗಿದ್ದು, ಇಲ್ಲಿನ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷಕ್ಕಾಗಿ ದುಡಿದರೆ ಕಾಂಗ್ರೆಸ್ಸಿಗೆ ಸೋಲೇ ಇಲ್ಲ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಹೆಚ್.ಎಸ್. ನಾಗರಾಜ್ ಮತ್ತವರ ಅಭಿಮಾನಿಗಳಿಗೆ ಕಾಂಗ್ರೆಸ್ ಸ್ವಾಗತ
ನಗರದ ರೇಣುಕ ಮಂದಿರದಲ್ಲಿ ನಡೆದ ಹೆಚ್.ಎಸ್. ನಾಗರಾಜ್ ಮತ್ತು ಅಭಿಮಾನಿಗಳ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಕಾಂಗ್ರೆಸ್ನ ಹಿರಿಯ ಮುಖಂಡರುಗಳಾದ ಎನ್.ಜಿ. ಪುಟ್ಟಸ್ವಾಮಿ, ಬಿ.ಹೆಚ್. ವೀರಭದ್ರಪ್ಪ, ದುಮ್ಮಿ ಚಮನ್ ಸಾಬ್, ಗಣೇಶ್ ಹುಲ್ಮನಿ ಇತರರಿದ್ದರು.
ವೃದ್ಧರು, ವಿಕಲಚೇತನರಿಗೆ ಮನೆಯಿಂದಲೇ ಮತದಾನ
ಮಲೇಬೆನ್ನೂರು : ರಾಜ್ಯದಲ್ಲಿ ಮೇ 7 ರಂದು ಜರುಗಲಿರುವ 2ನೇ ಹಂತದ ಲೋಕಸಭಾ ಚುನಾವಣೆಗೆ ಪಟ್ಟಣದಲ್ಲಿರುವ 85 ವರ್ಷ ಮೇಲ್ಪಟ್ಟ ವೃದ್ದರು ಮತ್ತು ವಿಕಲಚೇತನರು ಗುರುವಾರ ಮನೆಯಿಂದಲೇ ಮತದಾನ ಮಾಡಿದರು.
22ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಪರ ಮತಯಾಚನೆ
ಲೋಕಸಭೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗಾಗಿ ಮಹಾನಗರ ಪಾಲಿಕೆಯ 22ನೇ ವಾರ್ಡ್ ಯಲ್ಲಮ್ಮ ನಗರದ 11ನೇ ಕ್ರಾಸ್ನಲ್ಲಿ ವಾರ್ಡ್ನ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲುವಿಗಾಗಿ ಮನೆ - ಮನೆಗಳಿಗೆ ತೆರಳಿ ಪ್ರಚಾರ ನಡೆಸಿದರು.
ಚಿತ್ರದುರ್ಗದ ಕಾಂಗ್ರೆಸ್ ಸಭೆಯಲ್ಲಿ ಪ್ರಿಯಾಂಕ ಗಾಂಧಿ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ - ನ್ಯಾಯ ಸಂಕಲ್ಪ ರಾಲಿ ನಿನ್ನೆ ಇಲ್ಲಿ ನಡೆಯಿತು. ಕಾಂಗ್ರೆಸ್ ಪಕ್ಷದ ನಾಯಕರಾದ ಶ್ರೀಮತಿ ಪ್ರಿಯಾಂಕ ಗಾಂಧಿ ಅವರು ದೀಪ ಬೆಳಗಿಸುವುದರ ಮೂಲಕ ರಾಲಿಯನ್ನು ಉದ್ಘಾಟಿಸಿದರು.
ಹೊನ್ನಾಳಿ : ಮಳೆಗೆ ಧರೆಗುರುಳಿದ ಮರಗಳು
ಹೊನ್ನಾಳಿ : ಈಚೆಗೆ ಸುರಿದ ಮಳೆ, ಬಿರುಗಾಳಿಯ ಪರಿಣಾಮ ಹೊನ್ನಾಳಿ ತಾಲ್ಲೂಕಿನ ಸೊರಟೂರು, ತುಗ್ಗಲಹಳ್ಳಿ, ಕೆಂಚಿಕೊಪ್ಪ ಮಾರ್ಗದಲ್ಲಿ ಧರೆಗುರುಳಿದ ಮರಗಳನ್ನು ಸೊರಟೂರು ಗ್ರಾ.ಪಂ. ಅಧ್ಯಕ್ಷ ಬಸವನಗೌಡ ಪಾಟೀಲ್ ಬೆಸ್ಕಾಂ ಸಿಬ್ಬಂದಿಯೊಂದಿಗೆ ತೆರವುಗೊಳಿಸಿದರು.
ಡಾ. ಪ್ರಭಾ ಮಲ್ಲಿಕಾರ್ಜುನ ಅವರಿಗೆ ಕುಂಬಾರ ಸಮಾಜದ ಸ್ವಾಮಿಗಳ ಆಶೀರ್ವಾದ
ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಚಿತ್ರದುರ್ಗದ ಕುಂಬಾರ ಸಮಾಜದ ಶ್ರೀ ಬಸವಮೂರ್ತಿ ಗುಂಡಯ್ಯ ಸ್ವಾಮಿಗಳವರನ್ನು ನಿನ್ನೆ ಭೇಟಿಯಾಗಿ ಆಶೀರ್ವಾದ ಪಡೆದರು.
ನಿರಂತರ ದಬ್ಬಾಳಿಕೆ ಪರಿಣಾಮವೇ ಭೂಮಿ `ತಾಪ’ ಹೆಚ್ಚಲು ಕಾರಣ
ನಮ್ಮ ಅತಿಯಾದ ಆಸೆಗಳಿಂದ ಭೂಮಿಯ ಮೇಲೆ ನಿರಂತರ ದಬ್ಬಾಳಿಕೆ ಮಾಡಿದ್ದರ ಪರಿಣಾಮವಾಗಿ ಭೂಮಿಯ ತಾಪ ಹೆಚ್ಚಾಗಿ, ಸರಿಯಾದ ಸಮಯಕ್ಕೆ ಮಳೆ ಬೆಳೆಗಳಾಗದೇ, ರೈತ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ರೈತರ ಮಕ್ಕಳು ಕೃಷಿಯಿಂದ ವಿಮುಖರಾಗುತ್ತಿದ್ದಾರೆಂದು ಸಾವಯವ ಕೃಷಿಕ ನೇರ್ಲಿಗಿ ಪ್ರಕಾಶ್ ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಸಂಸತ್ಗೆ ಕಳುಹಿಸಲು ಎಸ್ಸೆಸ್ಸೆಂ ಮನವಿ
ದಾವಣಗೆರೆ : ವಿದ್ಯಾವಂತೆ, ಸರಳ ಸಜ್ಜನಿಕೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಅವರನ್ನು ಗೆಲ್ಲಿಸಿ ಲೋಕಸಭೆ ಕಳುಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಮನವಿ ಮಾಡಿದರು.
ಅಂಬೇಡ್ಕರ್ ಜೀವನ ಸಾಧನೆ ನಮಗೆಲ್ಲಾ ಪ್ರೇರಣೆ
ಸಾಮಾಜಿಕ ಸಮಾನತೆಗಾಗಿ ಜೀವನವನ್ನೇ ಮುಡಿಪಿಟ್ಟು, ನಮಗೆಲ್ಲಾ ವಾಕ್ ಸ್ವಾತಂತ್ರ್ಯ, ಸಮಾನವಾಗಿ ಬದುಕುವ ಸ್ವಾತಂತ್ರ್ಯ ನೀಡಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ-ಸಾಧನೆ ನಮಗೆಲ್ಲಾ ಪ್ರೇರಣೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಿಳಿಸಿದರು.
ಗ್ರಾಮೀಣ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸಿಗಬೇಕಾದರೆ ನನ್ನನ್ನು ಗೆಲ್ಲಿಸಿ
ಜಗಳೂರು : ಗ್ರಾಮೀಣ ಭಾಗದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕಾದರೆ ನನ್ನನ್ನು ಗೆಲ್ಲಿಸಿ, ನಾನು ಶ್ರಮ ವಹಿಸುತ್ತೇನೆ. ಹೊಸ ವ್ಯವಸ್ಥೆ ಸೃಷ್ಟಿಸಲು ರಾಜಕೀಯದಲ್ಲಿ ಅಧಿಕಾರ ಬೇಕು. ಈ ಬಾರಿ ನನ್ನನ್ನು ಗೆಲ್ಲಿಸಿ, ಜಿಲ್ಲೆಯ ಅಭಿವೃದ್ಧಿಯ ದಿಕ್ಕೇ ಬದಲಾಗುತ್ತದೆ
ನಗರದಲ್ಲಿ ರಂಗೋಲಿ ಚಿತ್ತಾರ, ಮತದಾರರ ಜಾಗೃತಿಗೆ ಘೋಷವಾಕ್ಯಗಳ ಅನಾವರಣ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಇವರುಗಳ ಸಹಾ ಯದೊಂದಿಗೆ ಸೋಮವಾರ ನಗರದ ಗುರುಭ ವನದ ರಸ್ತೆಯಲ್ಲಿ ರಂಗೋಲಿ ಬಿಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಅಭಿವೃದ್ಧಿ ಬದ್ಧತೆ ನಮಗೆ ಇದೆ : ಶಾಸಕ ಎಸ್ಸೆಸ್
ಅಭಿವೃದ್ಧಿ ಬಗ್ಗೆ ನಮಗೆ ಬದ್ದತೆ ಇದೆ. ನಾವು ಯಾವುದೇ ಸರ್ಕಾರ ಇದ್ದರೂ ಸಹ ದಾವಣಗೆರೆ ಅಭಿವೃದ್ಧಿಗೆ ಬದ್ದರಿದ್ದೇವೆ. ನೀವೂ ಸಹ ನಮ್ಮನ್ನು ಬೆಂಬಲಿಸುವ ಮೂಲಕ ದಾವಣಗೆರೆ ಅಭಿವೃದ್ಧಿಗೆ ಸಹಕರಿಸಬೇಕೆಂದು ಶಾಸಕ ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.
ಕ್ಷೇತ್ರದಲ್ಲಿ 17,09,244 ಮತದಾರರು
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 17,09,244 ಮತದಾರರಿದ್ದಾರೆ. ಇದರಲ್ಲಿ ಪುರುಷರು 8,51,990, ಮಹಿಳೆಯರು 8,57,117 ಹಾಗೂ ತೃತೀಯ ಲಿಂಗ 137 ಮತದಾರರಿದ್ದಾರೆ. ದಾವಣಗೆರೆ ಕ್ಷೇತ್ರದಲ್ಲಿ ಪುರುಷರಿಗಿಂತ 5127 ಮಹಿಳಾ ಮತದಾರಿದ್ದಾರೆ.
ಕೆರೆ ತುಂಬಿಸುವ ಯೋಜನೆಗೆ ಕೈ ಹಾಕಿದ್ದು ಕಾಂಗ್ರೆಸ್
ಹರಪನಹಳ್ಳಿ : ಹರಪನಹಳ್ಳಿ ಹಾಗೂ ಜಗಳೂರು ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಪಕ್ಷದ ಭದ್ರ ಕೋಟೆಗಳು, ಈ ಭಾಗದ 57 ಹಾಗೂ 22 ಕೆರೆಗಳಿಗೆ ನೀರು ತುಂಬಿರುವ ಯೋಜನೆಗೆ ಕೈ ಹಾಕಿದ್ದು ಕಾಂಗ್ರೆಸ್ ಪಕ್ಷ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಹೆಬ್ಬಾಳು ಶ್ರೀಗಳ ಆಶೀರ್ವಾದ ಪಡೆದ ಎಸ್ಸೆಸ್ಸೆಂ
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಇಂದು ಹೆಬ್ಬಾಳಿನ ಶ್ರೀ ರುದ್ರೇಶ್ವರ ವಿರಕ್ತಮಠಕ್ಕೆ ಭೇಟಿ ನೀಡಿ, ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ದೇವಸ್ಥಾನದ ಅಭಿವೃದ್ಧಿಗೆ ಗೃಹಲಕ್ಷ್ಮಿ ಹಣ ಕಾರ್ಯವನ್ನು ಶ್ಲ್ಯಾಘಿಸಿದ ಡಾ. ಪ್ರಭಾ
ಹೊನ್ನಾಳಿ : ತಾಲ್ಲೂಕಿನ ಮಲ್ಲಿಗೇನಹಳ್ಳಿ ಗ್ರಾಮದ ಮಹಿಳೆಯರು ಸರ್ಕಾರ ನೀಡುವ ಗೃಹಲಕ್ಷ್ಮಿ ಹಣದಿಂದ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಿರುವುದನ್ನು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಶ್ಲ್ಯಾಘಿಸಿದ್ದಾರೆ.
ಕಾಯಕದಲ್ಲಿ ಭಕ್ತಿ, ನಂಬಿಕೆ ಇದ್ದಲ್ಲಿ ಯಶಸ್ಸು ನಿಶ್ಚಿತ
ಮಲೇಬೆನ್ನೂರು : ನಾವು ಮಾಡುವ ಕಾಯಕ - ಕೆಲಸದಲ್ಲಿ ಭಕ್ತಿ-ಪ್ರೀತಿ-ಪ್ರೇಮ ಇರಬೇಕು. ಆಗ ಮಾತ್ರ ಆ ಕೆಲಸದಲ್ಲಿ ನೀವು ಯಶಸ್ಸು ಕಾಣಲು ಸಾಧ್ಯ ಎಂದು ಶ್ರೀ ಯೋಗಾನಂದ ಸ್ವಾಮೀಜಿ ಹೇಳಿದರು.
ಎಐಡಿಎಸ್ಓ ವಿದ್ಯಾರ್ಥಿ ಪ್ರಣಾಳಿಕೆ ಬಿಡುಗಡೆ
ಲೋಕಸಭಾ ಚುನಾವಣೆ ಹಿನ್ನೆಲೆ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ವಿದ್ಯಾ ರ್ಥಿಗಳ ಸಮಸ್ಯೆಗಳನ್ನು ಚರ್ಚಿಸಲು ಎಸ್ಯುಸಿಐ ಕಮ್ಯೂನಿಷ್ಟ್ ಪಕ್ಷದ ಅಭ್ಯರ್ಥಿ ಅಣಬೇರು ತಿಪ್ಪೇಶ್ ಅವರಿಗೆ ವಿದ್ಯಾರ್ಥಿ ಪ್ರಣಾಳಿಕೆ ನೀಡಿತು.
ಚಿರಸ್ತಹಳ್ಳಿಯಲ್ಲಿ ರಥೋತ್ಸವ
ಹರಪನಹಳ್ಳಿ : ತಾಲ್ಲೂಕಿನ ಚಿರಸ್ತಹಳ್ಳಿ ಗ್ರಾಮದಲ್ಲಿ ಅಪಾರ ಭಕ್ತರೊಂದಿಗೆ ಶ್ರೀ ಆಂಜ ನೇಯ ಸ್ವಾಮಿ ಹಾಗೂ ಶ್ರೀ ಗುರು ಕಳಂಕ ಮಲ್ಲೇಶ್ವರ ಸ್ವಾಮಿಯ ರಥೋತ್ಸವವು ಸಡಗರದಿಂದ ನಿನ್ನೆ ಜರುಗಿತು.
ಹರಿಹರದಲ್ಲಿ ಇಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ರೋಡ್ ಶೋ
ಹರಿಹರ : ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನಾಳೆ ದಿನಾಂಕ 25 ರ ಗುರುವಾರ ನಗರಕ್ಕೆ ಆಗಮಿಸಿ, ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಜಿ.ಎಂ. ಸಿದ್ದೇಶ್ವರ ಪರವಾಗಿ ರೋಡ್ ಶೋ ನಡೆಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜಶೇಖರ್ ನಾಗಪ್ಪ ಹೇಳಿದರು.
ಹರಪನಹಳ್ಳಿ : ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರತಾಪ್ ಛಲವಾದಿ ಆಯ್ಕೆ
ಹರಪನಹಳ್ಳಿ : ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೆಪಿಸಿಸಿಯ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಸದಸ್ಯರನ್ನಾಗಿ ಹರಪನಹಳ್ಳಿ ತಾಲ್ಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ಪ್ರತಾಪ್ ಛಲವಾದಿ ಅವರನ್ನು ಆಯ್ಕೆ ಮಾಡಲಾಗಿದೆ
ಮಠಗಳು, ಗುರುಗಳಿಂದ ಸಂಸ್ಕಾರ ಲಭಿಸಲಿದೆ
ರಾಣೇಬೆನ್ನೂರು : ಮನುಷ್ಯರು, ಮೂಲಭೂತವಾದಿ ಗಳಿಂದ ದೇವರು-ಧರ್ಮಗಳ ಹೆಸರಿನಲ್ಲಿ ಗುಲಾಮತನಕ್ಕೆ ಸಿಲುಕುತ್ತಾರೆ ಎಂದು ಐಮಂಗಲ ವಿರಕ್ತ ಮಠದ ಶ್ರೀ ಹರಳಯ್ಯ ಸ್ವಾಮೀಜಿ ನುಡಿದರು.
ಭರಮಸಾಗರ : ತುರ್ತು ಪರಿಸ್ಥಿತಿ ನಿರ್ವಹಣೆ ಉಪನ್ಯಾಸ
ಭರಮಸಾಗರ : ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನಲ್ಲಿ ಬುಧವಾರ ಪ್ರಥಮ ಚಿಕಿತ್ಸಾ ಕಾರ್ಯಕ್ರಮ ನಡೆಯಿತು.
ಆಲೋಚನೆ ಬದಲಾದಾಗ ಸಮಾಜ ಬದಲಾವಣೆ
ನಮ್ಮ ಆಲೋಚನಾ ಶಕ್ತಿ ಬದಲಾಯಿಸಿಕೊಂಡಾಗ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಹೇಳಿದರು.
ಧಾರ್ಮಿಕ ಕ್ಷೇತ್ರಗಳು ಪ್ರವಾಸಿ ತಾಣ: ಡಾ. ಪ್ರಭಾ ಭರವಸೆ
ಹೊನ್ನಾಳಿ : ಎರಡನೇ ಮಂತ್ರಾಲಯ ಎಂದೇ ಪ್ರಸಿದ್ದ ಪಡೆದಿರುವ ಹೊನ್ನಾಳಿಯ ಪುಣ್ಯ ಕ್ಷೇತ್ರ ರಾಘವೇಂದ್ರ ಸ್ವಾಮಿ ಬೃಂದಾವನ ಹಾಗೂ ತೀರ್ಥರಾಮೇಶ್ವರ ಕ್ಷೇತ್ರಗಳು ಸೇರಿದಂತೆ ತಾಲ್ಲೂಕಿನ ಐತಿಹಾಸಿಕ ಕ್ಷೇತ್ರಗಳನ್ನು ಪ್ರವಾಸಿ ತಾಣಗಳನ್ನಾಗಿಸಲಾಗುವುದು
ಕೊಮಾರನಹಳ್ಳಿಯಲ್ಲಿ ಸಂಭ್ರಮದ ಬ್ರಹ್ಮ ರಥೋತ್ಸವ
ಮಲೇಬೆನ್ನೂರು : ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಬ್ರಹ್ಮ ರಥೋತ್ಸವವು ಮಂಗಳವಾರ ಮಧ್ಯಾಹ್ನ ಅಪಾರ ಭಕ್ತರ ಸಮ್ಮುಖದಲ್ಲಿ ವಾದ್ಯ ಮೇಳಗಳೊಂದಿಗೆ ಸಂಭ್ರಮದಿಂದ ಜರುಗಿತು